ಮೊದಲ ಹಿಮ, ಆಗದಿರುವುದೇ ಪ್ರಕೃತಿಯ ಮೇಲೆ ಪ್ರೇಮ!
ಉತ್ತರ ಅಮೆರಿಕಾದ ನಾರ್ತ್ ಕ್ಯಾರೊಲಿನ ರಾಜ್ಯದಲ್ಲಿರುವ ಅಪ್ಪಟ ಕನ್ನಡತಿ... ಪ್ರಖ್ಯಾತ ಭರತನಾಟ್ಯ ಮತ್ತು ಕಥಕ್ ನೃತ್ಯಗಾತಿ ಸೀಮಾ ವಿಶ್ವನಾಥ್ ಅವರು ಪ್ರಕೃತಿಯ ಈ ವೈಭವವನ್ನು ಯಾವ ರೀತಿ ಆಚರಿಸಿದ್ದಾರೆ ಗೊತ್ತಾ?
ಹೊಸ ವರುಷ... ಅದರ ಆಚರಣೆ ಮುಗಿಸಿ ಜನವರಿಯ ಚಳಿಗೆ ಶಿವ ಶಿವ ಅಂತಾ ಜನರೆಲ್ಲಾ ಇದ್ದಬದ್ದ ಸ್ವೇಟರ್, ಟೋಪಿ ಹಾಕೊಂಡು ಕಂಬಳಿ ಹೊದ್ದುಕೊಂಡು ಬೆಂಕಿ ಕಾಯ್ಸ್ತಾ ಕೂತಿರುವಾಗ... ಈ ವರ್ಷದ ಮೊದಲ ಹಿಮಪಾತ ಬಿದ್ದಾಗ ಹೇಗಿರಬೇಡ?
ಕೆಲವರು ಅಯ್ಯೋ ಇನ್ನಷ್ಟು ಚಳಿ ಅಂತಾ ತುಂಬಾ ಹೊದ್ದುಕೊಂಡು ನಲ್ಲೆ/ನಲ್ಲನ ಬಿಗಿಯಾಗಿ ಅಪ್ಪಿಕೊಂಡು ಮನೇಲೇ ಕೂತರೆ... ಮತ್ತೆ ಕೆಲವರು ಸೆಲ್ಫಿ ಬೇಕು ಅಂತಾ ಥಟ್ ಅಂತ ಹೊರಗಡೆ ಬಂದು.. ಪಟ್ ಅಂತಾ ಕ್ಯಾಮೆರಾ ಕ್ಲಿಕ್ಕಿಸಿಕೊಂಡು ಒಳಗಡೆ ಓಡಿ, ಮತ್ತೆ ಚಟ್ ಅಂತಾ ಫೇಸ್ಬುಕ್, ವಾಟ್ಸ್ ಆಪ್ ನಲ್ಲಿ ಅಪ್ಲೋಡ್ ಮಾಡಿರ್ತಾರೆ.
ಇನ್ನು ಸ್ವಲ್ಪ ಜನ (ನಮ್ಮೋರು) ಬಿಸಿ ಬಿಸಿ ಆಂಬೊಡೆ, ಮಿರ್ಚಿ ಮೆಣಸಿಕಾಯಿ ಜೊತೆ ಬಿಸಿ ಬಿಸಿ ಕಾಫಿ ಲೋಟ ಹಿಡಕೊಂಡು, ಮೋದಿ ಇಲ್ಲ ಟ್ರಂಪ್ ಇವತ್ತು ಏನು ಟ್ವೀಟ್ ಮಾಡಿದಾರೆ ಅಂತಾ ನೋಡ್ತಾ ಬಿಸಿಬಿಸಿ ಬಜ್ಜಿ ಮೆಲ್ಲುತ್ತಿರುತ್ತಾರೆ... [ರಕ್ತ ಹೆಪ್ಪುಗಟ್ಟಿಸುವ ಚಳಿಯಲ್ಲಿ ಮರಗಟ್ಟಿರುವ ಶಿಮ್ಲಾ]

ಇವರೆಲ್ಲ ಚಳಿಗಾಲವನ್ನು, ಹಿಮದ ಹೂಮಳೆಯನ್ನು ಈರೀತಿ ಆಚರಿಸುತ್ತಿದ್ದರೆ, ಉತ್ತರ ಅಮೆರಿಕಾದ ನಾರ್ತ್ ಕ್ಯಾರೊಲಿನ ರಾಜ್ಯದಲ್ಲಿರುವ ಅಪ್ಪಟ ಕನ್ನಡತಿ... ಪ್ರಖ್ಯಾತ ಭರತನಾಟ್ಯ ಮತ್ತು ಕಥಕ್ ನೃತ್ಯಗಾತಿ ಸೀಮಾ ವಿಶ್ವನಾಥ್ ಅವರು ಪ್ರಕೃತಿಯ ಈ ವೈಭವವನ್ನು ಯಾವ ರೀತಿ ಆಚರಿಸಿದ್ದಾರೆ ಗೊತ್ತಾ?
ಈ ವರುಷದ ಮೊದಲ ಹಿಮಪಾತವನ್ನು ಸುಸ್ವಾಗತ ಮಾಡಿದ್ದು ಮಾತ್ರ ಒಂದು ವಿಶಿಷ್ಟ ರೀತಿಯಲ್ಲ. ಕೊರೆಯುವ ಮೈನಸ್ ಡಿಗ್ರಿ ಉಷ್ಣತೆಯಲ್ಲಿ, ಕಾಲಿಗೆ ಕಚಗುಳಿ ಇಡುವ ಮೆತ್ತನೆಯ ಬಿಳಿ ಹಿಮದ ಮೇಲೆ ಬರಿಗಾಲಲ್ಲಿ ಆನಂದದಿಂದ, ಉಲ್ಲಾಸದಿಂದ, ತನ್ಮಯತೆಯಿಂದ ಶಾಸ್ತ್ರೀಯ ನೃತ್ಯ ಮಾಡುವ ಮೂಲಕ! [ಹೊದ್ಕೊಳ್ಳೋಣ ಅಂದ್ರೆ ರಗ್ ಇಲ್ಲಾ ತಬ್ಕೊಳ್ಳೋಣಾ ಅಂದ್ರೆ ಹಗ್ ಇಲ್ಲಾ!]

ಸುತ್ತಲೂ ಶುಭ್ರವಾದ ಬಿಳಿ ಹಿಮ...
ಹಿಮದ ಮೇಲೆ ಬರಿಗಾಲಲ್ಲಿ
ಆನಂದದಿಂದ ಮೈಮರೆತು ನೃತ್ತಿಸುತ್ತಿರುವ ಸೀಮಾ...
ಹಾ ಹಾ... ಈ ನಯನ ಮನೋಹರ ದೃಶ್ಯವ
ನೋಡುತ್ತಿದ್ದರೆ... ಆಗದಿರುವದೇ, ಈ ಸುಂದರ ಪ್ರಕೃತಿಯ ಮೇಲೆ ಪ್ರೇಮ? [ನನ್ನ ಮಗಂದ್, ಯಾಕಾದ್ರೂ ಬರುತ್ತೋ ಈ ಚಳಿಗಾಲ!]
ನೀವೇ ನೋಡಿ, ಹೇಳಿ...!
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications