ಕೆಕೆಎನ್ಸಿ ಯುಗಾದಿ ಕಥಾಸ್ಪರ್ಧೆ, ಏ.5ರೊಳಗೆ ಕಳಿಸಿ
ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿವೆ
* ಕಥೆಯು ಕನ್ನಡದಲ್ಲಿರಬೇಕು ಮತ್ತು ಆರು ಪುಟ ಮೀರಬಾರದು.
* ಕಥೆಯು ಸ್ವಂತದ್ದಾಗಿರಬೇಕು ಹಾಗೂ ಬೇರೆ ಎಲ್ಲೂ ಪ್ರಕಟವಾಗಿರಬಾರದು.
* ಅನುವಾದಿತ ಕಥೆಗಳಿಗೆ ಸ್ಪರ್ಧೆಯಲ್ಲಿ ಅವಕಾಶವಿಲ್ಲ.
* ಸ್ಪರ್ಧೆಗೆ ಕಳುಹಿಸಿದ ಕಥೆಗಳನ್ನು ಸ್ವರ್ಣಸೇತು 2013 ಸಂಚಿಕೆ ಪ್ರಕಟಣೆಯಾಗುವವರೆಗೂ ಬೇರೆಲ್ಲೂ (ಬ್ಲಾಗ್ ಸೇರಿದಂತೆ) ಪ್ರಕಟಿಸುವಂತಿಲ್ಲ.
* ಕಥೆಗಳು ಯೂನಿಕೋಡ್/ತುಂಗಾ ಫಾಂಟ್ ನಲ್ಲಿ, MS-Wordನಲ್ಲಿ ಫಾಂಟ್ ಸೈಜ಼್ 12ರಲ್ಲಿ ಕಳಿಸತಕ್ಕದ್ದು, ಯಾವುದೇ ಕಾರಣಕ್ಕೂ ಹಸ್ತಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ.
* ಕಳಿಸಿದ ಕಥೆಗಳಲ್ಲಿ ಹೆಚ್ಚಾಗಿ ಕಾಗುಣಿತ/ವ್ಯಾಕರಣ ದೋಷಗಳಿದ್ದಲ್ಲಿ, ಸ್ಪರ್ಧೆಗೆ ಪರಿಗಣಿಸುವುದಿಲ್ಲ.
* ಅಮೇರಿಕನ್ನಡಿಗರಿಗೆ ಮಾತ್ರ ಈ ಸ್ಪರ್ಧೆಯಲ್ಲಿ ಅವಕಾಶ.
* ನಿಮ್ಮ ಕಥೆಗಳನ್ನು ಏಪ್ರಿಲ್ 5, 2013ರ ಒಳಗೆ ಕಳಿಸತಕ್ಕದ್ದು.
* ಸ್ಪರ್ಧೆಗೆ ಒಂದಕ್ಕಿಂತ ಹೆಚ್ಚು ಕಥೆಗಳನ್ನು ಕಳಿಸುವ ಹಾಗಿಲ್ಲ.
* ಸ್ಪರ್ಧೆಗೆ ಸಲ್ಲಿಸಿದ ಯಾವುದೇ ಕಥೆಯನ್ನಾದರೂ ಸ್ವರ್ಣಸೇತು-2013ರಲ್ಲಿ ಪ್ರಕಟಿಸುವ ಅಥವಾ ಪ್ರಕಟಿಸದೆ ಇರುವ ತೀರ್ಮಾನ ಸ್ವರ್ಣಸೇತು ಸಂಪಾದಕ ಸಮಿತಿಯದಾಗಿರುತ್ತದೆ.
* ಕಥೆಯೊಂದಿಗೆ ನಿಮ್ಮ ಭಾವಚಿತ್ರ, ಈ-ಮೇಲ್ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ದಯವಿಟ್ಟು ಕಳಿಸತಕ್ಕದ್ದು.
* ನಿಮ್ಮ ಕಥೆಗಳನ್ನು [email protected] ಗೆ ಕಳಿಸಿ.
* ತೀರ್ಪುಗಾರರ ನಿರ್ಧಾರವೇ ಅಂತಿಮ