ಕನೆಕ್ಟಿಕಟ್ನಲ್ಲಿ ವೀರಶೈವ ಸಮಾಜದಿಂದ ಶಿವರಾತ್ರಿ

ಆದರೆ ಇದು ನಡೆದದ್ದು ಸಾವಿರಾರು ಮೈಲಿ ದೂರದ ಅಮೆರಿಕಾದ ಕನೆಕ್ಟಿಕಟ್ನಲ್ಲಿ VSNE ನಡೆಸಿಕೊಟ್ಟ ಶಿವರಾತ್ರಿ 2013 ಆಚರಣೆಯಲ್ಲಿ. ಚಿಕ್ಕ ಚಿಕ್ಕ ಪುಟಾಣಿಗಳು ಮುಗ್ಧವಾಗಿ ಶಿವನ ಹಾಡು ಹೇಳುತ್ತಾ, ಅದಕ್ಕೆ ಸರಿಯಾಗಿ ಹೆಜ್ಜೆ ಹಾಕಿದಾಗ, ಎಲ್ಲರ ಮನದಲ್ಲೂ ಭಕ್ತಿ-ಭಾವ ಮೂಡಿ, ಆ ಜಗದೊಡೆಯ ಶಿವ ಶಂಕರನ ಸ್ತೋತ್ರವನ್ನು ಎಲ್ಲರೂ ಪಟಿಸುವಂತೆ ಮಾಡಿತ್ತು.
ಮಾರ್ಚ್ 16ರಂದು ಕನೆಕ್ಟಿಕಟ್ನಲ್ಲಿರುವ ಶ್ರೀ ಸ್ವಾಮಿ ಸತ್ಯನಾರಾಯಣ ದೇಗುಲದ ಆಡಿಟೋರಿಯಂನಲ್ಲಿ ನೂತನ VSNE ಕಮಿಟಿ ಸದಸ್ಯರ ನೇತೃತ್ವದಲ್ಲಿ - ಸರಿತಾ, ವಾಣಿ ಹಾಗು ಯಶವಂತ್ ಗಡ್ಡಿರವರ ಸುಂದರ ನಿರೂಪಣೆಯೊಂದಿಗೆ ಯಶಸ್ವಿಯಾಗಿ ನಡೆಯಿತು.
ಸರಿಯಾಗಿ ಮಧ್ಯಾಹ್ನ 3.30ಕ್ಕೆ ಗಣೇಶ, ಬಸವ ಪೂಜೆಯೊಂದಿಗೆ ಪ್ರಾರಂಭವಾಗಿ, ವಾಣಿ, ಸುಮಾ ಹಾಗು ಪುಟಾಣಿ ಮಕ್ಕಳು ಪ್ರಾರ್ಥನೆ ಗೀತೆ ಹಾಡಿದಮೇಲೆ ಇಷ್ಟಲಿಂಗ ಪೂಜಾ ಕಾರ್ಯಕ್ರಮ ನೆರವೇರಿತು. ಈ ಬಾರಿ ಎಲ್ಲ ಹಿರಿಯರ ಜೊತೆ ಇಲ್ಲೇ ಹುಟ್ಟಿ ಬೆಳೆದ ಪುಟಾಣಿಗಳು ಸಹಾ ಉತ್ಸಾಹ-ಕುತೂಹಲದಿಂದ ಭಾಗವಹಿಸಿ ಪೂಜೆ ಮಾಡಿದ್ದು ತುಂಬಾ ವಿಶೇಷವಾಗಿತ್ತು.
ಇತರ ಕಾರ್ಯಕ್ರಮಗಳು
1) ಇಷ್ಟ ಲಿಂಗ ಪೂಜೆ - ನಡೆಸಿ ಕೊಟ್ಟವರು ವಾಣಿ ಹುಲಿಕೆರೆ
2) ಮಕ್ಕಳಿಂದ ಪ್ರಾರ್ಥನೆ
3) ಶಿವನು ಭಿಕ್ಷೆಗೆ ಬಂದ - ಲಿಂಗಷ್ಟಕಂ ಹಾಡಿದವರು ಕು.ಇಂಚರ ಗಡ್ಡಿ
4) ಬ್ರಹ್ಮ ಮುರಾರಿ - ಲಿಂಗಷ್ಟಕಂ ..ಹಾಡಿದವರು ಕು.ಇಷಾ ಮತ್ತು ಕು.ಅನಿಷಾ ಅರಭಾವಿ
5) ಅಷ್ಟಾವರಣ, ಪಂಚಾಚಾರ ಮತ್ತು ಷಟ್ ಸ್ಥಲಗಳ ಒಂದು ಸಂಕ್ಷಿಪ್ತ ವಿವರಣೆ - ರಾರವಿ ವಿರೂಪಾಕ್ಷ ಗೌಡರಿಂದ
6) ಮಕ್ಕಳಿಂದ ವಚನ ಹಾಡುಗಾರಿಕೆ
7) ದೊಡ್ಡವರಿಂದ ವಚನ ಹಾಡುಗಾರಿಕೆ
8) ವಚನ ಮತ್ತು ಅದರ ಅರ್ಥ - ಒಂದು ವಿವರಣೆ ...ಕು.ಶ್ರೇಯ ಗೌಡರಿಂದ
9) ಶಿವರಾತ್ರಿ ಹಬ್ಬದ ಬಗ್ಗೆ ಒಂದು ವಿವರಣೆ - ನೀಡಿದವರು ಆಕಾಶ್ ಗುಂದಗತ್ತಿ
10) ವಿಶೇಷ ಹಾಡುಗಾರಿಕೆ - ವೃಂದ ಮತ್ತು ಲತಾರಿಂದ
11) ಶಿವನು ಭಿಕ್ಷೆಗೆ ಬಂದ ಹಾಡಿಗೆ ನೃತ್ಯ ಮಾಡಿದವರು ದಿಶಾ ಮುದೆನುರ್
12) ಶಿವ ಶಿವ ಎಂದರೆ ಭಯವಿಲ್ಲ - ಎಂದು ಯಾವುದೇ ಭಯವಿಲ್ಲದೆ ಸೊಗಸಾಗಿ ಸ್ಟೇಜ್ ಮೇಲೆ ಹೆಜ್ಜೆ ಹಾಕಿದ್ದು 3ರಿಂದ 5 ವರ್ಷದ ಪುಟಾಣಿಗಳಾದ ಸಚಿತ್, ಮೇಘ, ತನಿಷ್ಕ ಮತ್ತು ಮಾನಸಿ
13) ಎಲ್ಲ ಬಲ್ಲಿದನಯ್ಯ ಕಲ್ಯಾಣ ಬಸವಯ್ಯ - ಚಿಕ್ಕ ಮಕ್ಕಳಿಂದ ಒಂದು ಕೋಲಾಟ ನೃತ್ಯ ..ಸಾತ್ವಿಕ್, ಸಮರ್ಥ್, ಋತು, ಸಮನ್ಯು, ಸಂಜನಾ, ಸಾತ್ವಿಕ್ ಶಿವಪ್ರಸಾದ್, ಮಾನವ್, ಓಂ ಬಸವಯ್ಯ. ನೃತ್ಯ ನಿರ್ದೇಶನ ಸುಮಾ ಬಸಂತ್ ಹಾಗು ವಾಣಿ ಹುಲಿಕೆರೆ
14) ಭೋ ಶಂಭೋ ಶಿವ ಶಂಭೋ ಹಾಡಿಗೆ ಇಂಚರ ಗಡ್ಡಿ, ಕೃತಿ ಗೌಡ್, ಶೃಷ್ಟಿ ಸೋಸಲೆ, ಮೇಘನ, ಅನಿಷಾ ಮತ್ತು ಮಯೀ - ಒಂದು ಸಮೂಹ ನೃತ್ಯ
15) ಶ್ರೀ ವ್ಯಾಸರಾಜ ವಿರಚಿತ "ಮದನಪಿತಾನೆಂದು ಕುಣಿ ಕುಣಿದಾಡಲು, ಕೆದರಿದ ಕೆಂಜದೆಗಳ ಪುಂಜದೀ' - ಹಾಡು ರಘು ಸೋಸಲೆಯವರಿಂದ
16) ವಿಶ್ವ ಗುರು ಬಸವಣ್ಣನವರ ಬಗ್ಗೆ ಚಿಕ್ಕ ಮಕ್ಕಳಿಂದ ಒಂದು ನಾಟಕ - ಶರಣರಂತೆ ಕಪಟತನದಿಂದ ಬಸವಣ್ಣನವರ ಮನೆಗೆ ಭೋಜನ ಮಾಡಲು ಬಂದು, ಕೊನೆಗೆ ವಿಶ್ವ ಗುರು ಬಸವಣ್ಣನವರ ಮಹಿಮೆಗೆ ಸೋತು ನಿಜವಾಗಿ ಶರಣರಾದದ್ದು. ಸುಳ್ಳು ಹೇಳಿ ಭೋಜನ ಮಾಡಲು ಬಂದಂತೆ ಸೊಗಸಾಗಿ ಅಭಿನಯಿಸಿದ ಚಿಕ್ಕ ಮಕ್ಕಳಾದ ಸಮರ್ಥ್, ಸಾತ್ವಿಕ್ ಹುಲಿಕೆರೆ ಮತ್ತು ಸಾತ್ವಿಕ್ ಶಿವಪ್ರಸಾದ್.
ಈ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಮೇಲೆ...
- ಬಾಸ್ಟನ್ ನಲ್ಲಿ ನಡೆಯಲಿರುವ ನಾವಿಕ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಮಾಹಿತಿ ಪ್ರಚಾರ - ನಾಗರಾಜ್ ಮತ್ತು ತಂಡ.
- ಇಂಟರ್ನ್ಯಾಷನಲ್ ಬಸವ ಸೆಂಟರ್ ಬಗ್ಗೆ ಮಾಹಿತಿ ನೀಡಿದವರು - ಶೈಲೆಂದ್ರ ಕುಮಾರ್
- ಉತ್ತರ ಅಮೆರಿಕಾ ವೀರಶೈವ ಸಮಾಜದ ಬಗ್ಗೆ ಒಂದು ವಿವರಣೆ ನೀಡಿದವರು - ಇರಪ್ಪ ಅರಭಾವಿ
ಈ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಮೇಲೆ ಮನೆಯಲ್ಲೇ ಮಾಡಿ ತಂದ ಪ್ರಸಾದ ಸ್ವೀಕರಿಸಿದ ಹೊರನಾಡಿನಲ್ಲಿರುವ ಈ ಎಲ್ಲ ಶರಣ- ಶರಣೆಯರಲ್ಲಿ ಏನೋ ಒಂದು ಧನ್ಯತಾ ಭಾವ ಮೂಡಿತ್ತು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಶರಣ-ಶರಣೆಯರು ಪಕ್ಕದ ಬೋಸ್ಟನ್, ನ್ಯೂ ಹ್ಯಾಂಪ್ ಶೈರ್ ಕಡೆಯಿಂದ ಆಗಮಿಸಿ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದು ಎಲ್ಲರಿಗು ಹೆಚ್ಚಿನ ಸಂತೋಷ-ಸಡಗರವನ್ನುಂಟು ಮಾಡಿತ್ತು.
ಪಾತಕ ಶತಕೋಟಿಯನೊರಸಲು ಸಾಲದೆ ಒಂದು ಶಿವನ ನಾಮ?
ಸಾಲದೆ ಒಂದು ಹರನ ನಾಮ?
ಕೂಡಲ ಸಂಗಮದೇವಾ, ನಿಮ್ಮ ಉಂಡಿಗೆಯ ಪಶುವ ಮಾಡಿಧೆಯಾಗಿ.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್












Click it and Unblock the Notifications