ಶಂಕರ ಕಣ್ಣಾಸ್ಪತ್ರೆಯಿಂದ ಅಮೆರಿಕಾದಲ್ಲಿ ಕೋಲಾಟ
ನವರಾತ್ರಿಯಲ್ಲಿ ನವದೇವಿಯರನ್ನು ಆರಾಧಿಸುವುದರ ಜೊತೆಗೆ ದೇಶದಾದ್ಯಂತ ಮಹಿಳೆಯರು ಲಂಗ ದಾವಣಿ ಉಟ್ಟುಕೊಂಡು ದಾಂಡಿಯಾ (ಕೋಲಾಟ) ಆಡಿ ಸಡಗರಪಡುತ್ತಾರೆ. ಕೋಲಾಟ ಆಡುವವರಿಗೆ ಮಾತ್ರವಲ್ಲ ನೋಡುಗರಿಗೂ ವಿಶಿಷ್ಟ ರೀತಿಯ ಮನರಂಜನೆ ಸಿಗುತ್ತದೆ.
ಅಮೆರಿಕಾದ ಬೇ ಏರಿಯಾದಲ್ಲಿರುವ ಶಂಕರ ಐ ಫೌಂಡೇಷನ್ ದಾಂಡಿಯಾವನ್ನು ಹಣ ಸಂಗ್ರಹಣೆಗೆ ಬಳಸಿಕೊಂಡು ಹೊಸ ಮುನ್ನುಡಿ ಬರೆದಿದೆ. ಭಾರತದಲ್ಲಿ ಮತ್ತಷ್ಟು ಕಣ್ಣಿನ ಆಸ್ಪತ್ರೆಗಳನ್ನು ನಿರ್ಮಿಸುವ ಮಹತ್ತರ ಉದ್ದೇಶದಿಂದ ಅಕ್ಟೋಬರ್ 19ರಿಂದ 27ರವರೆಗೆ 'ದಾಂಡಿಯಾ 2012' ಸ್ಪರ್ಧೆಯನ್ನು ಶಂಕರ ಐ ಫೌಂಡೇಷನ್ ಏರ್ಪಡಿಸಿತ್ತು.
ಅಮೆರಿಕಾದ ಮಿಲ್ಪಿಟಸ್ನಲ್ಲಿ ಇರುವ ಶಂಕರ್ ಐ ಫೌಂಡೇಷನ್ ಆಯೋಜಿಸಿದ್ದ ಈ ದಾಂಡಿಯಾ ಉತ್ಸವಕ್ಕೆ ಅಮೆರಿಕದ ದಾನಿಗಳಿಂದ ಭಾರೀ ಸ್ಪಂದನೆ ವ್ಯಕ್ತವಾಯಿತು. ಈಗ ಸಂಗ್ರಹಿಸಲಾಗಿರುವ ಹಣದ ಸಹಾಯದಿಂದ ಭಾರತದ ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೆ ಸಹಾಯವಾಗಲೆಂದು ಅನೇಕ ಆಸ್ಪತ್ರೆಗಳನ್ನು ಕಟ್ಟಿಸುತ್ತಿದ್ದಾರೆ.

2013ರಲ್ಲಿ ಕಾನ್ಪುರದಲ್ಲಿ 10ನೇ ಕಣ್ಣಿನಾಸ್ಪತ್ರೆ ಮತ್ತು ಉತ್ತರಪ್ರದೇಶದಲ್ಲಿಯೂ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಮುಂದಿನ ಒಂದೇ ವರ್ಷದಲ್ಲಿ ಈ ಆಸ್ಪತ್ರೆಗಳು ಕಣ್ಣುತೆರೆಯಲಿವೆ. ಅಲ್ಲದೆ, ಜನರ ಆಗ್ರಹದ ಮೇರೆಗೆ ಗುಜರಾತ್ ಮತ್ತು ಗುಂಟೂರಿನಲ್ಲಿರುವ ಕಣ್ಣಿನಾಸ್ಪತ್ರೆಗಳನ್ನು ವೃದ್ಧಿಸಲು ನಿರ್ಧರಿಸಿದೆ.
ಈ ಎಲ್ಲ ಆಸ್ಪತ್ರೆಗಳನ್ನು ನಿರ್ಮಿಸಲು ಜಮೀನನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಸದ್ಯದಲ್ಲಿಯೇ ಆರಂಭವಾಗಲಿದೆ ಎಂದು ಫೌಂಡೇಷನ್ನಿನ ಪ್ರಕಟಣೆ ಹೇಳಿದೆ. ಈ ಆಸ್ಪತ್ರೆಗಳಲ್ಲಿ ಪ್ರತಿ ವರ್ಷ 20 ಸಾವಿರ ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲು ಉದ್ದೇಶಿಸಲಾಗಿದೆ. ಶಂಕರ್ ಐ ಫೌಂಡೇಷನ್ಗಾಗಿ 2008ರಲ್ಲಿ ನ್ಯೂಜೆರ್ಸಿಯಲ್ಲಿರುವ ಬೃಂದಾವನ ಕನ್ನಡ ಕೂಟದಲ್ಲಿ ಹಣ ಸಂಗ್ರಹಿಸಲಾಗಿತ್ತು.
ಶಂಕರ್ ಐ ಫೌಂಡೇಷನ್ ಮಾಡುತ್ತಿರುವ ಈ ಉದಾತ್ತ ಕೆಲಸಕ್ಕೆ ಉದಾರವಾಗಿ ದೇಣಿಗೆ ನೀಡಬಯಸುವವರು ತಮ್ಮ ಶಕ್ತ್ಯಾನುಸಾರ ದಾನ ಮಾಡಬಹುದು. ಈ ಬಗ್ಗೆ ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ಈ ವೆಬ್ ಸೈಟ್ ಸಂದರ್ಶಿಸಿ ಮಾಹಿತಿ ಪಡೆಯಬಹುದು : http://www.giftofvision.org
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications