'ಅಮೆರಿಕಾದಲ್ಲಿ 3D ಕನ್ನಡ ಕೂಟ' ಹಾಸ್ಯ ನಾಟಕ

ನಮ್ಮ ಕನ್ನಡ ನಾಡಲ್ಲಿ ತೆಲುಗು ತಮಿಳು ಅನ್ಯ ಭಾಷೆಗಳ ಗಂಧವೇ ಇಲ್ಲದ ಸಣ್ಣ ಸಣ್ಣ ನಗರಗಳಲ್ಲೂ ಸಹ (ಬೆಂಗಳೂರು ವಿಷಯ ಬಿಟ್ಟು ಬಿಡಿ) ಈ ಪರಭಾಷಾ ಚಿತ್ರಗಳು ಭರ್ಜರಿಯಾಗಿ ಓಡುತ್ತಿರುವ ಈ ಸಮಯದಲ್ಲಿ, ನಮ್ಮ ಕನ್ನಡ ಚಿತ್ರಗಳು ಪ್ರೇಕ್ಷಕರಿಗಾಗಿ ಕಾಯುತ್ತಾ ಒಂದು ವಾರ, ಎರಡು ವಾರ ಅನ್ನೋದರಲ್ಲೇ ಥಿಯೇಟರ್ಗಳಿಂದ ಮಾಯವಾಗುತ್ತಿರುವುದು ಕಟು ಸತ್ಯ.
ಕನ್ನಡ ಸಿನೆಮಾಗಳ ಕಥೆನೇ ಹೀಗಾದರೆ, ಇನ್ನು ಕನ್ನಡ ನಾಟಕಗಳ ಗತಿ ಹೇಗೆ ಇರಬೇಡ?
ಗುಬ್ಬಿ ವೀರಣ್ಣ, ಚಿಂದೋಡಿ ಲೀಲಾ ಮೊದಲಾದ ಪ್ರಖ್ಯಾತ ರಂಗಭೂಮಿ ಕಲಾವಿದರ ಹೆಸರೇ ಗೊತ್ತಿರದಂಥ, ಹಗಲಿರುಳು ಯುಟ್ಯೂಬ್ - ಫೇಸ್ ಬುಕ್ ನಲ್ಲಿ ಮುಖ ಹುದುಗಿಸಿರುವ, ಎಲ್ಲದಕ್ಕೂ ಗೂಗಲಿಟ್ ಮ್ಯಾನ್ ಅನ್ನೋ ಈ ಯುವ ಪೀಳಿಗೆಯ ಫಾಸ್ಟ್ ಫೇಸ್ ಯುಗದಲ್ಲಿ... ಅಲ್ಲೊಂದು, ಇಲ್ಲೊಂದು ನಾಟಕಗಳು ಕರ್ನಾಟಕದಲ್ಲಿ ಅಪರೂಪವಾಗಿ ಪ್ರದರ್ಶಿತವಾಗುತ್ತಿರುವ ಈ ಸಮಯದಲ್ಲಿ... ದೂರದ ವೆಸ್ಟರ್ನ್ ಕಲ್ಚರ್ ಅಮೆರಿಕಾದ ಕನೆಕ್ಟಿಕಟ್ ರಾಜ್ಯದಲ್ಲಿ "ಅಮೆರಿಕಾದಲ್ಲಿ ಯಮರಾಜ" ಖ್ಯಾತಿಯ ಮಲ್ಲಿ ಸಣ್ಣಪ್ಪನವರ್ ವಿರಚಿತ "ಅಮೇರಿಕಾದಲ್ಲಿ 3D ಕನ್ನಡ ಕೂಟ" ನಾಟಕ ಏಪ್ರಿಲ್ 28ಕ್ಕೆ Middletown ನಗರದ ಶ್ರೀ ಸ್ವಾಮಿ ಸತ್ಯನಾರಾಯಣ ದೇವಸ್ಥಾನದ ಆಡಿಟೋರಿಯಂನಲ್ಲಿ ಪ್ರದರ್ಶನಗೊಳ್ಳಲಿದೆ ಅಂದರೆ ನಿಮಗೆ ಆಶ್ಚರ್ಯವೇ?
ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ... ನಾಟಕವೊಂದು, ಅದರಲ್ಲೂ ಕನ್ನಡದ ನಾಟಕವೊಂದು 3D ಎಫೆಕ್ಟ್ನಲ್ಲಿ ಮೂಡಿಬರುತ್ತಿರುವುದು ಎಲ್ಲರಿಗೂ ವಿಸ್ಮಯ ತಂದಿರುವುದು ಸುಳ್ಳಲ್ಲ. ತಪ್ಪದೇ ಬನ್ನಿ.. ಎಲ್ಲರೂ ಸಂಸಾರದೊಂದಿಗೆ ನೋಡಲಿಕ್ಕೆ, ಕನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟ ಏರ್ಪಡಿಸಿರುವ ಯುಗಾದಿ 2012 ಕಾರ್ಯಕ್ರಮದಲ್ಲಿ ಪ್ರದರ್ಶನವಾಗುತ್ತಿರುವ ಈ ಹಾಸ್ಯಭರಿತ, ನೃತ್ಯಭರಿತ "3D ಕನ್ನಡ ಕೂಟ" ನಾಟಕ. ನೋಡಿ, ನಕ್ಕು-ನಲಿದು, ಪ್ರೋತ್ಸಾಹಿಸಿರಿ. ಕನ್ನಡದ ಕಂಪನ್ನು ಅಮೆರಿಕದಲ್ಲೂ ಹರಡಲು ಯತ್ನಿಸುತ್ತಿರುವ ಈ ಹೊರನಾಡ ಕನ್ನಡಿಗರ ಒಂದು ಚಿಕ್ಕ ಪರಿಶ್ರಮವನ್ನು...
ಬಂದು ನೋಡಿ ನಮ್ಮ ನಾಟಕ,
ಮಾಡಿಕೊಂಡು ಸ್ವಲ್ಪ ಪುರು ಸೊತ್ತು....
ಆಗುವುದು ನಿನ್ನ ಕೈ.. ಕಲ್ಪವೃಕ್ಷ,
ಕನ್ನಡಕ್ಕೆ ಜೈ ಎಂದು ಕೈ ಎತ್ತು!
ನಾಟಕದ ಪಾತ್ರದಾರಿಗಳು
ಮಲ್ಲಿ ಸಣ್ಣಪ್ಪನವರ್
ಮಧು ಸಣ್ಣಪ್ಪನವರ್
ಸೌಮ್ಯ ಕುರ್ತುಕೋಟಿ
ಜ್ಯೋತಿ ಕಬ್ಬಿನಾದ
ಸುಮಾ ಬಸಂತ್
ದಿವ್ಯಾ ಗೌತಮ್
ರಾಮ್ ಹೊಸಪೇಟೆ
ಮಾನಸ್ ರಾಮ್
ನಾಗರಾಜ್ ಮಹೇಶ್ವರಪ್ಪ
ಮಹೇಶ್ ಹುಲಿಕೆರೆ
ಸೂರಜ್ ಕುರ್ತುಕೋಟಿ
ಪ್ರದೀಪ್ ಡೊಳ್ಲಿನ್
ಗಿರೀಶ್ ಕಬ್ಬಿನಾದ
ಬಸಂತ್ ಗೌಡರ್
ಗೌತಮ್ ಪ್ರಸಾದ್
ವೇಣು ಗುಡ್ಡೆರಾ
ರಚನೆ, ನಿರ್ದೇಶನ : ಮಲ್ಲಿ ಸಣ್ಣಪ್ಪನವರ್
ಸ್ಥಳ : CVHTS temple Middletown, ಕನೆಕ್ಟಿಕಟ್, ಅಮೆರಿಕ
ದಿನಾಂಕ, ಸಮಯ : ಏಪ್ರಿಲ್ 28 ರಂದು ಮಧ್ಯಾನ್ಹ 4 ಗಂಟೆಗೆ.
-
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ -
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆನ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ -
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು -
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ -
Gold Rate March 05: ಮಧ್ಯಪ್ರಾಚ್ಯ ಯುದ್ಧದ ನಡುವೆ ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಇಳಿಕೆ: ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ'' -
ಕೈಚೆಲ್ಲಿ ನಿಂತ ಸಿಂಗಂ ಪೊಲೀಸರು, ದೈನೇಸಿ ಸ್ಥಿತಿಗೆ ಜನಸಾಮಾನ್ಯರು: ಪುಂಡರಿಗೆ ಹೆದರಿದ ಬೆಂಗಳೂರು - ರವಿಕೃಷ್ಣಾ ರೆಡ್ಡಿ ಬರಹ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ












Click it and Unblock the Notifications