'ಅಮೆರಿಕಾದಲ್ಲಿ 3D ಕನ್ನಡ ಕೂಟ' ಹಾಸ್ಯ ನಾಟಕ

ನಮ್ಮ ಕನ್ನಡ ನಾಡಲ್ಲಿ ತೆಲುಗು ತಮಿಳು ಅನ್ಯ ಭಾಷೆಗಳ ಗಂಧವೇ ಇಲ್ಲದ ಸಣ್ಣ ಸಣ್ಣ ನಗರಗಳಲ್ಲೂ ಸಹ (ಬೆಂಗಳೂರು ವಿಷಯ ಬಿಟ್ಟು ಬಿಡಿ) ಈ ಪರಭಾಷಾ ಚಿತ್ರಗಳು ಭರ್ಜರಿಯಾಗಿ ಓಡುತ್ತಿರುವ ಈ ಸಮಯದಲ್ಲಿ, ನಮ್ಮ ಕನ್ನಡ ಚಿತ್ರಗಳು ಪ್ರೇಕ್ಷಕರಿಗಾಗಿ ಕಾಯುತ್ತಾ ಒಂದು ವಾರ, ಎರಡು ವಾರ ಅನ್ನೋದರಲ್ಲೇ ಥಿಯೇಟರ್ಗಳಿಂದ ಮಾಯವಾಗುತ್ತಿರುವುದು ಕಟು ಸತ್ಯ.
ಕನ್ನಡ ಸಿನೆಮಾಗಳ ಕಥೆನೇ ಹೀಗಾದರೆ, ಇನ್ನು ಕನ್ನಡ ನಾಟಕಗಳ ಗತಿ ಹೇಗೆ ಇರಬೇಡ?
ಗುಬ್ಬಿ ವೀರಣ್ಣ, ಚಿಂದೋಡಿ ಲೀಲಾ ಮೊದಲಾದ ಪ್ರಖ್ಯಾತ ರಂಗಭೂಮಿ ಕಲಾವಿದರ ಹೆಸರೇ ಗೊತ್ತಿರದಂಥ, ಹಗಲಿರುಳು ಯುಟ್ಯೂಬ್ - ಫೇಸ್ ಬುಕ್ ನಲ್ಲಿ ಮುಖ ಹುದುಗಿಸಿರುವ, ಎಲ್ಲದಕ್ಕೂ ಗೂಗಲಿಟ್ ಮ್ಯಾನ್ ಅನ್ನೋ ಈ ಯುವ ಪೀಳಿಗೆಯ ಫಾಸ್ಟ್ ಫೇಸ್ ಯುಗದಲ್ಲಿ... ಅಲ್ಲೊಂದು, ಇಲ್ಲೊಂದು ನಾಟಕಗಳು ಕರ್ನಾಟಕದಲ್ಲಿ ಅಪರೂಪವಾಗಿ ಪ್ರದರ್ಶಿತವಾಗುತ್ತಿರುವ ಈ ಸಮಯದಲ್ಲಿ... ದೂರದ ವೆಸ್ಟರ್ನ್ ಕಲ್ಚರ್ ಅಮೆರಿಕಾದ ಕನೆಕ್ಟಿಕಟ್ ರಾಜ್ಯದಲ್ಲಿ "ಅಮೆರಿಕಾದಲ್ಲಿ ಯಮರಾಜ" ಖ್ಯಾತಿಯ ಮಲ್ಲಿ ಸಣ್ಣಪ್ಪನವರ್ ವಿರಚಿತ "ಅಮೇರಿಕಾದಲ್ಲಿ 3D ಕನ್ನಡ ಕೂಟ" ನಾಟಕ ಏಪ್ರಿಲ್ 28ಕ್ಕೆ Middletown ನಗರದ ಶ್ರೀ ಸ್ವಾಮಿ ಸತ್ಯನಾರಾಯಣ ದೇವಸ್ಥಾನದ ಆಡಿಟೋರಿಯಂನಲ್ಲಿ ಪ್ರದರ್ಶನಗೊಳ್ಳಲಿದೆ ಅಂದರೆ ನಿಮಗೆ ಆಶ್ಚರ್ಯವೇ?
ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ... ನಾಟಕವೊಂದು, ಅದರಲ್ಲೂ ಕನ್ನಡದ ನಾಟಕವೊಂದು 3D ಎಫೆಕ್ಟ್ನಲ್ಲಿ ಮೂಡಿಬರುತ್ತಿರುವುದು ಎಲ್ಲರಿಗೂ ವಿಸ್ಮಯ ತಂದಿರುವುದು ಸುಳ್ಳಲ್ಲ. ತಪ್ಪದೇ ಬನ್ನಿ.. ಎಲ್ಲರೂ ಸಂಸಾರದೊಂದಿಗೆ ನೋಡಲಿಕ್ಕೆ, ಕನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟ ಏರ್ಪಡಿಸಿರುವ ಯುಗಾದಿ 2012 ಕಾರ್ಯಕ್ರಮದಲ್ಲಿ ಪ್ರದರ್ಶನವಾಗುತ್ತಿರುವ ಈ ಹಾಸ್ಯಭರಿತ, ನೃತ್ಯಭರಿತ "3D ಕನ್ನಡ ಕೂಟ" ನಾಟಕ. ನೋಡಿ, ನಕ್ಕು-ನಲಿದು, ಪ್ರೋತ್ಸಾಹಿಸಿರಿ. ಕನ್ನಡದ ಕಂಪನ್ನು ಅಮೆರಿಕದಲ್ಲೂ ಹರಡಲು ಯತ್ನಿಸುತ್ತಿರುವ ಈ ಹೊರನಾಡ ಕನ್ನಡಿಗರ ಒಂದು ಚಿಕ್ಕ ಪರಿಶ್ರಮವನ್ನು...
ಬಂದು ನೋಡಿ ನಮ್ಮ ನಾಟಕ,
ಮಾಡಿಕೊಂಡು ಸ್ವಲ್ಪ ಪುರು ಸೊತ್ತು....
ಆಗುವುದು ನಿನ್ನ ಕೈ.. ಕಲ್ಪವೃಕ್ಷ,
ಕನ್ನಡಕ್ಕೆ ಜೈ ಎಂದು ಕೈ ಎತ್ತು!
ನಾಟಕದ ಪಾತ್ರದಾರಿಗಳು
ಮಲ್ಲಿ ಸಣ್ಣಪ್ಪನವರ್
ಮಧು ಸಣ್ಣಪ್ಪನವರ್
ಸೌಮ್ಯ ಕುರ್ತುಕೋಟಿ
ಜ್ಯೋತಿ ಕಬ್ಬಿನಾದ
ಸುಮಾ ಬಸಂತ್
ದಿವ್ಯಾ ಗೌತಮ್
ರಾಮ್ ಹೊಸಪೇಟೆ
ಮಾನಸ್ ರಾಮ್
ನಾಗರಾಜ್ ಮಹೇಶ್ವರಪ್ಪ
ಮಹೇಶ್ ಹುಲಿಕೆರೆ
ಸೂರಜ್ ಕುರ್ತುಕೋಟಿ
ಪ್ರದೀಪ್ ಡೊಳ್ಲಿನ್
ಗಿರೀಶ್ ಕಬ್ಬಿನಾದ
ಬಸಂತ್ ಗೌಡರ್
ಗೌತಮ್ ಪ್ರಸಾದ್
ವೇಣು ಗುಡ್ಡೆರಾ
ರಚನೆ, ನಿರ್ದೇಶನ : ಮಲ್ಲಿ ಸಣ್ಣಪ್ಪನವರ್
ಸ್ಥಳ : CVHTS temple Middletown, ಕನೆಕ್ಟಿಕಟ್, ಅಮೆರಿಕ
ದಿನಾಂಕ, ಸಮಯ : ಏಪ್ರಿಲ್ 28 ರಂದು ಮಧ್ಯಾನ್ಹ 4 ಗಂಟೆಗೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications