ಅಟ್ಲಾಂಟಾದಲ್ಲಿ 7ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ

ಮುಂದಿನ ವರ್ಷ 2012ರ ಆಗಸ್ಟ್ 31 - ಸೆಪ್ಟೆಂಬರ್ 1, 2ರ ಲೇಬರ್ ಡೇ ವಾರಾಂತ್ಯದಲ್ಲಿ ಈ ಸಮ್ಮೇಳನವು ನಡೆಯಲಿದೆ. 3 ದಿನಗಳ ಅಕ್ಕ ವಿಶ್ವ ಕನ್ನಡ ಸಮ್ಮೇಳನವು ಕರ್ನಾಟಕದ ನುಡಿ, ಕಲೆ ಮತ್ತು ಸಂಸ್ಕೃತಿಯ ಸಂಭ್ರಮ ಹಾಗೂ ಸಡಗರಗಳ ಹಬ್ಬವಾಗಲಿದೆ. ಅಕ್ಕ ಇಲ್ಲಿಯವರೆಗೆ 6 ವಿಶ್ವ ಕನ್ನಡ ಸಮ್ಮೇಳನಗಳನ್ನು ಹ್ಯೂಸ್ಟನ್, ಡೆಟ್ರಾಯಿಟ್, ಒರ್ಲಾಂಡೊ, ಬಾಲ್ಟಿಮೋರ್, ಶಿಕಾಗೋ ಮತ್ತು ನ್ಯೂ ಜೆರ್ಸಿಗಳಲ್ಲಿ ಸ್ಥಳೀಯ ಕನ್ನಡ ಕೂಟಗಳ ಸಹಯೋಗದಿಂದ ಯಶಸ್ವಿಯಾಗಿ ನಡೆಸಿಕೊಟ್ಟಿದೆ.
ಅಕ್ಕ ಲಾಭರಹಿತ ಸೇವಾ ಸಂಸ್ಥೆಯಾಗಿದ್ದು, ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಾದಲ್ಲಿನ ಕನ್ನಡ ಕೂಟಗಳನ್ನು ಜೊತೆ ಸೇರಿಸುವ ಕೊಂಡಿಯಾಗಿದೆ. ಉತ್ತರ ಅಮೆರಿಕಾದ ಕನ್ನಡಿಗರಲ್ಲಿ ಕನ್ನಡ ನಾಡಿನ ಭಾಷೆ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸಿ, ಕನ್ನಡಿಗರನ್ನು ಒಂದುಗೂಡಿಸುವ ಕಾರ್ಯದಲ್ಲಿ ತನ್ನಿಂದಾದ ಸೇವೆ ಸಲ್ಲಿಸುತ್ತಿದೆ. 1973ರಲ್ಲಿ ಸ್ಥಾಪನೆಗೊಂಡ ನೃಪತುಂಗ ಕನ್ನಡ ಕೂಟ ಅಮೆರಿಕಾದ ದಕ್ಷಿಣ ಭಾಗದ ಕನ್ನಡಿಗರನ್ನು ಒಂದುಗೂಡಿಸಿ ಬಹಳಷ್ಟು ಕನ್ನಡ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಚಿಗುರು ಸಾಹಿತ್ಯ ಪತ್ರಿಕೆ, ಅರ್ಹ ಕನ್ನಡಿಗ ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ತನ್ನದೇ ಆದ ವೈಶಿಷ್ಟ್ಯತೆಯನ್ನು ಕಾಯ್ದುಕೊಂಡು ಬಂದಿದೆ.
ಅಟ್ಲಾಂಟದಲ್ಲಿ ನಡೆಯಲಿರುವ ಸಂಭ್ರಮದ ಮೂರು ದಿನಗಳ ಸಮ್ಮೇಳನವು ಉತ್ತರ ಅಮೆರಿಕಾದ ವಿವಿಧ ಕನ್ನಡ ಕೂಟಗಳ ಸದಸ್ಯರು ಮತ್ತು ಕರ್ನಾಟಕದಿಂದ ಬರುವ ಆಹಾನ್ವಿತ ಕಲಾವಿದರ ಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆಯಾಗಲಿದೆ. ಬುಸಿನೆಸ್ ಫೋರಂ, ಸಾಹಿತ್ಯ ಕಾರ್ಯಕ್ರಮಗಳು, ಮಹಿಳಾ ವೇದಿಕೆ, ಸಿ. ಎಮ್. ಇ. ಫೋರಂ, ಸೌಂದರ್ಯ ಸ್ಪರ್ಧೆಗಳು, ವೈವಾಹಿಕ ವೇದಿಕೆ, ವಾಣಿಜ್ಯ ಮಳಿಗೆಗಳು ಸಮ್ಮೇಳನದ ಮುಖ್ಯ ಆಕರ್ಷಣೆಗಳಾಗಲಿವೆ. ಸಮ್ಮೇಳನಕ್ಕೆ ವಾಣಿಜ್ಯ ಮಳಿಗೆಯಲ್ಲಿ ಭಾಗವಹಿಸುವವರೂ ಸೇರಿ ಸುಮಾರು 3,000 ರಿಂದ 3,500 ಕನ್ನಡಿಗರು ಭಾಗವಹಿಸುವ ನಿರೀಕ್ಷೆಯಿದೆ.
ಅಟ್ಲಾಂಟ ಅಮೆರಿಕ ಸಂಯುಕ್ತ ಸಂಸ್ಥಾನದ ಮುಖ್ಯ ನಗರಗಳಲ್ಲಿ ಒಂದಾಗಿದ್ದು ಬಹಳಷ್ಟು ಪ್ರಮುಖ ಕೈಗಾರಿಕೆಗಳ ಕೇಂದ್ರ ಸ್ಥಾನವಾಗಿದೆ. ಕೋಕೋ ಕೊಲಾ, ಸಿ. ಎನ್. ಎನ್, ಹೋಮ್ ಡಿಪೋ, ರಬ್ಬರ್ ಮೇಡ್, ಜಾರ್ಜಿಯ ಪೆಸಿಫಿಕ್ ಮತ್ತು ಡೆಲ್ಟಾ ಏರ್ ಲೈನ್ ಇವುಗಳಲ್ಲಿ ಹಲವು. ಈ ಸುಂದರ ವಾಣಿಜ್ಯ ನಗರವು 1996ರ ಒಲಿಂಪಿಕ್ಸ್ ಕ್ರಿಡಾಕೂಟದ ಆತಿಥ್ಯವನ್ನು ವಹಿಸಿತ್ತು. ಅತ್ಯಧಿಕ ಪ್ರಯಾಣಿಕರ ಸೇವೆಯನ್ನು ಪ್ರತಿನಿತ್ಯ ಸಲ್ಲಿಸುತ್ತಿರುವ ಇಲ್ಲಿನ ವಿಮಾನ ನಿಲ್ದಾಣವು ಪ್ರಪಂಚದ ಎಲ್ಲಾ ಪ್ರಮುಖ ನಗರಗಳ ಸಂಪರ್ಕವನ್ನು ಹೊಂದಿದೆ.
ಅಕ್ಕ ಅಧ್ಯಕ್ಷರಾದ ದಯಾಶಂಕರ್ ಅಡಪ ಮತ್ತು ನೃಪತುಂಗ ಕನ್ನಡ ಕೂಟದ ನಿರ್ದೇಶಕ ಮಂಡಳಿಯ ಅಧ್ಯಕ್ಷರಾದ ಡಾ. ಎಚ್. ಎನ್. ರಾಮಸ್ವಾಮಿ ಅವರು 7ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಯಶಸ್ಸಿಗೆ ಸೇವೆ ಸಲ್ಲಿಸಲು ಸಿದ್ಧರಾಗಿದ್ದಾರೆ ಮತ್ತು ಎಲ್ಲಾ ಕನ್ನಡಿಗರನ್ನು ಈ ಸಮ್ಮೇಳನಕ್ಕೆ ತುಂಬು ಹೃದಯದ ಸ್ವಾಗತವನ್ನು ಕೋರುತ್ತಿದ್ದಾರೆ. ಹೆಚ್ಚಿನ ವಿವರಗಳನ್ನು www.AkkaOnline.org, www.AtlantaKannada.org ಮತ್ತು ದಟ್ಸ್ ಕನ್ನಡ ಅಂತರ್ಜಾಲ ತಾಣಗಳಲ್ಲಿ ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications