ಸಿಂಗಾಪುರದಲ್ಲೊಂದು ಕನ್ನಡ ಅಧ್ಯಯನ ಕೇಂದ್ರ

ಜುಲೈ 17ರಂದು ಈ ಕೇಂದ್ರದ ಉದ್ಘಾಟನೆಯನ್ನು ಗ್ಲೋಬಲ್ ಇಂಡಿಯನ್ ಫೌಂಡೇಶನ್ ಮತ್ತು ಗ್ಲೋಬಲ್ ಇಂಡಿಯನ್ ಇಂಟರ್ನಾಷನಲ್ ಸ್ಕೂಲ್ಸ್ ಸಂಸ್ಥೆಗಳ ಸ್ಥಾಪಕ ಹಾಗೂ ಅಧ್ಯಕ್ಷರಾದ ಅತುಲ್ ತೆಮುರ್ನಿಕರ್ ಅವರು ನೆರವೇರಿಸಿದರು. ಕಾರ್ಯಕ್ರಮ ಸೆರಂಗೂನ್ ರಸ್ತೆಯಲ್ಲಿರುವ ಶ್ರೀನಿವಾಸ ಪೆರುಮಾಳ್ ದೇವಸ್ಥಾನದ ಪಿ.ಜಿ.ಪಿ. ಕಲ್ಯಾಣ ಮಂಟಪದಲ್ಲಿ ಜರುಗಿತು.
ಎಂಟು ವರ್ಷಗಳ ಅವಧಿಯಲ್ಲಿ ಏಳು ದೇಶಗಳಲ್ಲಿ 17 ಶಾಲೆಗಳನ್ನು ಸ್ಥಾಪಿಸಿ ಹದಿನೇಳು ಸಾವಿರ ವಿದ್ಯಾರ್ಥಿಗಳು ಹಾಗೂ ಸಾವಿರದ ಐದುನೂರು ಶಿಕ್ಷಕರನ್ನೂ ಹೊಂದಿರುವ ಈ ಸಂಸ್ಥೆಯ ಯಶಸ್ಸಿಗೆ ಕಾರಣರಾದ ಅತುಲ್ ಅವರು ಕನ್ನಡ ಅಧ್ಯಯನಕ್ಕೆ ಚಾಲನೆ ನೀಡಿದುದು ಅತ್ಯಂತ ಸಮಂಜಸವಾಗಿತ್ತು.
ಈ ಸಂದರ್ಭದಲ್ಲಿ ಕರ್ನಾಟಕ ವೈಭವ ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ಹೆಗ್ಡೆಯವರು ಮಾತನಾಡಿ ಕನ್ನಡ ಅಧ್ಯಯನ ಯೋಜನೆಗೆ ಸಿಂಗನ್ನಡಿಗರ ಕನ್ನಡಾಭಿಮಾನ ಮತ್ತು ಅವರು ನೀಡಿದ ಎಣಿಕೆಗೂ ಮೀರಿದ ಬೆಂಬಲವೇ ಕಾರಣವೆಂದು ಶ್ಲಾಘಿಸಿದರು.
ಕನ್ನಡಿಗರ ಮಕ್ಕಳಿಗೆ ಕನ್ನಡ ಮಾತಾಡುವ ವಾತಾವರಣವಿಲ್ಲದೆ ಹೆತ್ತವರಿಗೂ ತಮ್ಮ ಮಕ್ಕಳಿಗೆ ಕನ್ನಡ ಕಲಿಸುವುದು ದುಸ್ಸಾಧ್ಯವಾದುದನ್ನು ಗಮನಿಸಿ ಮೊದಲಿಗೆ ಕನ್ನಡಿಗರ ಮಕ್ಕಳಿಗೆ ಕನ್ನಡ ಓದುವ, ಬರೆಯುವ ಮತ್ತು ಮಾತನಾಡುವ ಶಿಕ್ಷಣವನ್ನು ಆರಂಭಿಸಲು ನಿರ್ಧರಿಸಿ, ಆರಂಭದಲ್ಲಿಯೇ ಸಿಂಗಾಪುರದಾದ್ಯಂತ 12 ಕೇಂದ್ರಗಳನ್ನು ತೆರೆಯಲಾಗಿದೆ.
ಮಕ್ಕಳಿಗೆ ಶಿಕ್ಷಣದ ಒತ್ತಡ ಹಾಗೂ ಸಮಯದ ಅಭಾವವನ್ನು ಮನಗಂಡು ಮಕ್ಕಳಿರುವ ತಾಣದಲ್ಲಿಯೇ ಶಿಕ್ಷಣದ ಸೌಲಭ್ಯವನ್ನು ಒದಗಿಸಲೆಂದೇ 12 ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಬೇಡಿಕೆಯಿದ್ದಲ್ಲಿ ಇನ್ನಷ್ಟು ಪ್ರದೇಶಗಳಲ್ಲಿ ಕನ್ನಡ ಕಲಿಸುವ ಕೇಂದ್ರಗಳನ್ನು ತೆರೆಯಲಾಗುವುದೆಂದು ಹೆಗ್ಡೆಯವರು ತಿಳಿಸಿದರು. ಸ್ವಯಂ ಸೇವಕರ ಉತ್ಸಾಹ ಹಾಗೂ ಬೆಂಬಲದಿಂದಾಗಿಯೇ ಕನ್ನಡದ ಕಲಿಕೆಯನ್ನು ಉಚಿತವಾಗಿ ನೀಡಲು ಸಾಧ್ಯವಾಗಿದೆಯೆಂದು ಅವರು ತಿಳಿಸಿದರು.
ಸಿಂಗಾಪುರದಲ್ಲಿ ಬೇಕಾದಷ್ಟು ಸಂಪನ್ಮೂಲ ವ್ಯಕ್ತಿಗಳಿರುವುದರಿಂದ ಸದ್ಯದಲ್ಲಿಯೇ ವಯಸ್ಕರಿಗೆ ಕನ್ನಡ ಶಿಕ್ಷಣ ಮತ್ತು ಕನ್ನಡದಲ್ಲಿ ಉಚ್ಛ ಶಿಕ್ಷಣಕ್ಕೆ ದಾರಿಮಾಡಿಕೊಡುವ ಯೋಜನೆಗಳನ್ನೂ ಹಮ್ಮಿಕೊಳ್ಳಲಾಗುವುದೆಂದವರು ಅವರು ತಿಳಿಸಿದರು.
ಕಾರ್ಯಕ್ರಮದ ಮೊದಲಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುಮಾರಿ ಅಕ್ಷಯ ಪ್ರಭು ಅವರು ಹಚ್ಚೇವು ಕನ್ನಡದ ದೀಪ ಕವನವನ್ನು ಸುಶ್ರಾವ್ಯವಾಗಿ ಹಾಡಿದರು. ಬೆಂಗಳೂರಿನ ಅರುಣ್ ಅವರ ಸುಪುತ್ರಿ ವಿದುಷಿ ವರ್ಣ ಅರುಣ್ ಅವರು ಭರತ ನಾಟ್ಯದಿಂದ ಕಾರ್ಯಕ್ರಮದ ಅಂದವನ್ನೂ ಔನ್ನತ್ಯವನ್ನೂ ಹೆಚ್ಚಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಎಮ್. ರೇವಣ್ಣ ಮತ್ತು ಸಪ್ನ ಮೋಹನ್ ಅವರು ಅಚ್ಚುಕಟ್ಟಾಗಿ ಮಾಡಿದರು. ನಾಡಗೀತೆಯ ಸಾಮೂಹಿಕ ಗಾಯನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications