ಸಿಂಗಾಪುರದಲ್ಲೊಂದು ಕನ್ನಡ ಅಧ್ಯಯನ ಕೇಂದ್ರ

ಜುಲೈ 17ರಂದು ಈ ಕೇಂದ್ರದ ಉದ್ಘಾಟನೆಯನ್ನು ಗ್ಲೋಬಲ್ ಇಂಡಿಯನ್ ಫೌಂಡೇಶನ್ ಮತ್ತು ಗ್ಲೋಬಲ್ ಇಂಡಿಯನ್ ಇಂಟರ್ನಾಷನಲ್ ಸ್ಕೂಲ್ಸ್ ಸಂಸ್ಥೆಗಳ ಸ್ಥಾಪಕ ಹಾಗೂ ಅಧ್ಯಕ್ಷರಾದ ಅತುಲ್ ತೆಮುರ್ನಿಕರ್ ಅವರು ನೆರವೇರಿಸಿದರು. ಕಾರ್ಯಕ್ರಮ ಸೆರಂಗೂನ್ ರಸ್ತೆಯಲ್ಲಿರುವ ಶ್ರೀನಿವಾಸ ಪೆರುಮಾಳ್ ದೇವಸ್ಥಾನದ ಪಿ.ಜಿ.ಪಿ. ಕಲ್ಯಾಣ ಮಂಟಪದಲ್ಲಿ ಜರುಗಿತು.
ಎಂಟು ವರ್ಷಗಳ ಅವಧಿಯಲ್ಲಿ ಏಳು ದೇಶಗಳಲ್ಲಿ 17 ಶಾಲೆಗಳನ್ನು ಸ್ಥಾಪಿಸಿ ಹದಿನೇಳು ಸಾವಿರ ವಿದ್ಯಾರ್ಥಿಗಳು ಹಾಗೂ ಸಾವಿರದ ಐದುನೂರು ಶಿಕ್ಷಕರನ್ನೂ ಹೊಂದಿರುವ ಈ ಸಂಸ್ಥೆಯ ಯಶಸ್ಸಿಗೆ ಕಾರಣರಾದ ಅತುಲ್ ಅವರು ಕನ್ನಡ ಅಧ್ಯಯನಕ್ಕೆ ಚಾಲನೆ ನೀಡಿದುದು ಅತ್ಯಂತ ಸಮಂಜಸವಾಗಿತ್ತು.
ಈ ಸಂದರ್ಭದಲ್ಲಿ ಕರ್ನಾಟಕ ವೈಭವ ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ಹೆಗ್ಡೆಯವರು ಮಾತನಾಡಿ ಕನ್ನಡ ಅಧ್ಯಯನ ಯೋಜನೆಗೆ ಸಿಂಗನ್ನಡಿಗರ ಕನ್ನಡಾಭಿಮಾನ ಮತ್ತು ಅವರು ನೀಡಿದ ಎಣಿಕೆಗೂ ಮೀರಿದ ಬೆಂಬಲವೇ ಕಾರಣವೆಂದು ಶ್ಲಾಘಿಸಿದರು.
ಕನ್ನಡಿಗರ ಮಕ್ಕಳಿಗೆ ಕನ್ನಡ ಮಾತಾಡುವ ವಾತಾವರಣವಿಲ್ಲದೆ ಹೆತ್ತವರಿಗೂ ತಮ್ಮ ಮಕ್ಕಳಿಗೆ ಕನ್ನಡ ಕಲಿಸುವುದು ದುಸ್ಸಾಧ್ಯವಾದುದನ್ನು ಗಮನಿಸಿ ಮೊದಲಿಗೆ ಕನ್ನಡಿಗರ ಮಕ್ಕಳಿಗೆ ಕನ್ನಡ ಓದುವ, ಬರೆಯುವ ಮತ್ತು ಮಾತನಾಡುವ ಶಿಕ್ಷಣವನ್ನು ಆರಂಭಿಸಲು ನಿರ್ಧರಿಸಿ, ಆರಂಭದಲ್ಲಿಯೇ ಸಿಂಗಾಪುರದಾದ್ಯಂತ 12 ಕೇಂದ್ರಗಳನ್ನು ತೆರೆಯಲಾಗಿದೆ.
ಮಕ್ಕಳಿಗೆ ಶಿಕ್ಷಣದ ಒತ್ತಡ ಹಾಗೂ ಸಮಯದ ಅಭಾವವನ್ನು ಮನಗಂಡು ಮಕ್ಕಳಿರುವ ತಾಣದಲ್ಲಿಯೇ ಶಿಕ್ಷಣದ ಸೌಲಭ್ಯವನ್ನು ಒದಗಿಸಲೆಂದೇ 12 ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಬೇಡಿಕೆಯಿದ್ದಲ್ಲಿ ಇನ್ನಷ್ಟು ಪ್ರದೇಶಗಳಲ್ಲಿ ಕನ್ನಡ ಕಲಿಸುವ ಕೇಂದ್ರಗಳನ್ನು ತೆರೆಯಲಾಗುವುದೆಂದು ಹೆಗ್ಡೆಯವರು ತಿಳಿಸಿದರು. ಸ್ವಯಂ ಸೇವಕರ ಉತ್ಸಾಹ ಹಾಗೂ ಬೆಂಬಲದಿಂದಾಗಿಯೇ ಕನ್ನಡದ ಕಲಿಕೆಯನ್ನು ಉಚಿತವಾಗಿ ನೀಡಲು ಸಾಧ್ಯವಾಗಿದೆಯೆಂದು ಅವರು ತಿಳಿಸಿದರು.
ಸಿಂಗಾಪುರದಲ್ಲಿ ಬೇಕಾದಷ್ಟು ಸಂಪನ್ಮೂಲ ವ್ಯಕ್ತಿಗಳಿರುವುದರಿಂದ ಸದ್ಯದಲ್ಲಿಯೇ ವಯಸ್ಕರಿಗೆ ಕನ್ನಡ ಶಿಕ್ಷಣ ಮತ್ತು ಕನ್ನಡದಲ್ಲಿ ಉಚ್ಛ ಶಿಕ್ಷಣಕ್ಕೆ ದಾರಿಮಾಡಿಕೊಡುವ ಯೋಜನೆಗಳನ್ನೂ ಹಮ್ಮಿಕೊಳ್ಳಲಾಗುವುದೆಂದವರು ಅವರು ತಿಳಿಸಿದರು.
ಕಾರ್ಯಕ್ರಮದ ಮೊದಲಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುಮಾರಿ ಅಕ್ಷಯ ಪ್ರಭು ಅವರು ಹಚ್ಚೇವು ಕನ್ನಡದ ದೀಪ ಕವನವನ್ನು ಸುಶ್ರಾವ್ಯವಾಗಿ ಹಾಡಿದರು. ಬೆಂಗಳೂರಿನ ಅರುಣ್ ಅವರ ಸುಪುತ್ರಿ ವಿದುಷಿ ವರ್ಣ ಅರುಣ್ ಅವರು ಭರತ ನಾಟ್ಯದಿಂದ ಕಾರ್ಯಕ್ರಮದ ಅಂದವನ್ನೂ ಔನ್ನತ್ಯವನ್ನೂ ಹೆಚ್ಚಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಎಮ್. ರೇವಣ್ಣ ಮತ್ತು ಸಪ್ನ ಮೋಹನ್ ಅವರು ಅಚ್ಚುಕಟ್ಟಾಗಿ ಮಾಡಿದರು. ನಾಡಗೀತೆಯ ಸಾಮೂಹಿಕ ಗಾಯನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications