ಚಂದನದಲ್ಲಿ ಮಿಡಿಯಲಿದೆ ಸಾಗರದಾಚೆ ಸಪ್ತಸ್ವರ

ಒಟ್ಟು 26 ವಾರಗಳ ಕಾಲ ಈ ವಿಭಿನ್ನ ಕಾರ್ಯಕ್ರಮ ಧಾರಾವಾಹಿ ರೂಪದಲ್ಲಿ ಪ್ರಸಾರವಾಗಲಿದೆ. ಜುಲೈ 17ರಂದು ಕಾರ್ಯಕ್ರಮ ಚಾಲನೆ ಪಡೆದುಕೊಳ್ಳಲಿದ್ದು ಪ್ರತಿ ಶನಿವಾರ ರಾತ್ರಿ 8 ರಿಂದ 9 ಗಂಟೆಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಶಿವಮೂರ್ತಿ ಕಿಲಾರ ಮತ್ತು ಸಪ್ತಗಿರಿ ಗೌಡ ಕಾರ್ಯಕ್ರಮದ ನಿರ್ಮಾಪಕರು. ನಿರ್ದೇಶನ ಅಶೋಕ್ ಪಾಟೀಲ್ ಅವರದು.
ಮನೋಮೂರ್ತಿ, ಜಯಂತ್ ಕಾಯ್ಕಿಣಿ, ರತ್ನಮಾಲಾ ಪ್ರಕಾಶ್, ಸುನೀತಾ ಮತ್ತು ಅನಿತಾ ಅನಂತಸ್ವಾಮಿ ಕಾರ್ಯಕ್ರಮದ ತೀರ್ಪುಗಾರರು. "ಸಾಗರದಾಚೆ ಸಪ್ತಸ್ವರ" ಕಾರ್ಯಕ್ರಮವನ್ನು ಹರಟೆಮಲ್ಲ ಪ್ರೊ.ಕೃಷ್ಣೇಗೌಡ ನಿರೂಪಿಸಲಿದ್ದಾರೆ. ಈ ವಿಭಿನ್ನ ರಿಯಾಲಿಟಿ ಶೋ ಪ್ರೇಕ್ಷಕರ ಮನತಣಿಸಲಿದೆ ಎಂಬ ವಿಶ್ವಾಸವನ್ನು ಶಿವಮೂರ್ತಿ ಕಿಲಾರ ವ್ಯಕ್ತಪಡಿಸಿದ್ದಾರೆ.












Click it and Unblock the Notifications