ಬ್ರಾಡ್ ಫಾರ್ಡಲ್ಲಿ ಮೇಳೈಸಿದ ಯಕ್ಷಗಾನ

ದೇವಿಕ ರಾವ್ ರವರು ಪುಂಡು ವೇಷದಲ್ಲಿ ಮತ್ತು ಅವರ ಸಹೋದರ ಡಾಕ್ಟರ್ ಬೆನಕ ಕಾರಂತ್ ರವರು ರಾಜವೇಶದಲ್ಲಿ ಗಣಪತಿ ಸ್ತುತಿಯನ್ನು ಬಹು ಭಕ್ತಿಯಿಂದ ನೆರವೇರಿಸಿ ಅಲ್ಲಿ ಸೇರಿದ್ದ ಪ್ರೇಕ್ಷಕರ ಮನಸನ್ನು ಸೂರೆಗೊಂಡರು.
ರಾಕ್ಷಸ ಬಣ್ಣದ ವೇಷದಲ್ಲಿ ಕುಮಾರ್ ಕುಂಟಿಕಾನಮಠ ಮತ್ತು ಅರುಣ್ ರಾಘವೇಂದ್ರರವರು ಸಾಂಪ್ರದಾಯಿಕವಾಗಿ ತೆರೆಯೊಂದಿಗೆ ಪ್ರವೇಶ ಮಾಡಿ ಸಮುದ್ರ ಸ್ನಾನ, ಶಿವ ಪೂಜೆ ದೃಶ್ಯವನ್ನು ಅಭಿನಯಿಸಿದರು. ಕೊನೆಯಲ್ಲಿ ಎಲ್ಲ ಕಲಾವಿದರು ಯುದ್ದ ಮತ್ತು ಮಂಗಳಪದಕ್ಕೆ ಕುಣಿದು ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ಇದೆಲ್ಲದರ ಸಂಯೋಜನೆಯನ್ನು ದೇವಿಕ ರಾವ್ ಮಾಡಿದರು. ವೇಷ ಭೂಷಣವನ್ನು ಕಟ್ಟಲು ನರೇಂದ್ರ ರಾವ್ ಮತ್ತು ಬೆನಕ ಕಾರಂತರ ಸ್ನೇಹಿತರು ಮಾಡಿದರು.
ದೇವಿಕ ರಾವ್ : ಮೂಲತಃ ಮಂಗಳೂರಿನವರಾದ ದೇವಿಕ ರಾವ್ ಅವರು ಭರತನಾಟ್ಯ, ಕುಚುಪುಡಿ ಮತ್ತು ಯಕ್ಷಗಾನವನ್ನು ಶಾಸ್ತ್ರೀಯವಾಗಿ ಕಲಿತು ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿ ಕರ್ನಾಟಕದ ಕಲಾಶ್ರೀಮಂತಿಕೆಯನ್ನು ತೋರ್ಪಡಿಸಿದ್ದಾರೆ. ಅಲ್ಲದೆ ಮಕ್ಕಳಿಗೆ ನಾಟ್ಯ ತರಬೇತಿಯನ್ನು ನೀಡುತ್ತಿದ್ದಾರೆ.
ಡಾಕ್ಟರ್ ಬೆನಕ ಕಾರಂತ್ : ವೃತ್ತಿಯಲ್ಲಿ ವೈದ್ಯರಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬ್ರಿಟನಿನಲ್ಲಿ ಕಳೆದ ಒಂದು ವರುಷದಿಂದ ನೆಲಿಸಿದ್ದಾರೆ. ಇವರು ಯಕ್ಷಗಾನವನ್ನು ಶಾಸ್ತ್ರೀಯವಾಗಿ ಕಲಿತು ಹಲವಾರು ಪ್ರದರ್ಶನವನ್ನು ಕೊಟ್ಟಿದ್ದಾರೆ. ದೇವಿಕ ರಾವ್ ಇವರ ಸಹೋದರಿ.
ಅರುಣ್ ರಾಘವೇಂದ್ರ : ಮೂಲತಃ ಬೆಂಗಳೂರಿನವರಾದ ಇವರು ಯಕ್ಷಗಾನದ ಪರಿಚಯವೇ ಇಲ್ಲದಿದ್ದರು ತಮ್ಮ ಧರ್ಮ ಪತ್ನಿಯವರಿಂದ ಯಕ್ಷಗಾನದ ಬಗ್ಗೆ ತಿಳಿದು, ಇಂದು ಯಕ್ಷಗಾನವನ್ನು ಕಲಿತು ಹಲವಾರು ಪ್ರದರ್ಶನವನ್ನು ನೀಡಿದ್ದಾರೆ. ಇವರು ಮಾಹಿತಿ ತಂತ್ರಜ್ಞಾನದಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ.
ಕುಮಾರ್ ಕುಂಟಿಕಾನಮಠ : ಯಕ್ಷಗಾನವನ್ನು ಬಾಲ್ಯದಲ್ಲಿ ಕಲಿತು ಹಲವಾರು ಪ್ರದರ್ಶನವನ್ನು ಕೊಟ್ಟಿದ್ದಾರೆ. ಬ್ರಿಟನಿನಲ್ಲಿ ಔಷಧ ವಿಜ್ಞಾನ ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಸುಮಾರು ಒಂದು ದಶಕದಿಂದ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದಾರೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications