ಯುಕೆ ಯುವ ಕನ್ನಡಿಗರ ಮೇಳ ಸಂಪನ್ನ

ಸಮಾರಂಭದ ಮುಖ್ಯ ಅತಿಥಿಗಳು ಕನ್ನಡಿಗರೇ ಆಗಿದ್ದುದು ಮೇಳಕ್ಕೆ ವಿಶೇಷ ಮೆರಗು ತಂದುಕೊಟ್ಟಿತು. ಅಲ್ಲದೆ ಶುದ್ಧ ಉಡುಪಿ ಶೈಲಿಯ ಆಹಾರ ವ್ಯವಸ್ಥೆ, ಮೈಸೂರು ಸುಗಂಧದ ಊದುಬತ್ತಿಗಳ ಪರಿಮಳ ಮತ್ತು ಎಲ್ಲೆಲ್ಲೂ ಕನ್ನಡ ಮಾತುಗಳು. ಸಭಾಂಗಣದಲ್ಲಿ ಶುದ್ಧ ಕನ್ನಡ ಹಬ್ಬದ ವಾತಾವರಣ.
ಕಾರ್ಯಕ್ರಮ ಶ್ರೀ ಗದಾಧರ ಅವರು ಶಾಸ್ತ್ರೋಕ್ತ ಗಣಪತಿ ಪೂಜೆಯಿಂದ ಆರಂಭವಾಯಿತು. ಆನಂತರ ಮುಖ್ಯ ಅತಿಥಿಗಳಾದ ಸಿ.ಗುರುರಾಜಾರಾವ್ ಅವರನ್ನು ವೇದಿಕೆಯಮೇಲೆ ಆಮಂತ್ರಿಸಲಾಯಿತು. ಮುಖ್ಯ ಅತಿಥಿಗಳ ಜೊತೆಗೆ ಕನ್ನಡಬಳಗದ ಅಧ್ಯಕ್ಷೆ ಡಾ.ಭಾನುಮತಿ, ಬಳಗದ ಕಾರ್ಯದರ್ಶಿ ಡಾ. ಆನಂದ ನಾಡಿಗೇರ್, ಖಜಾಂಚಿಯರಾದ ಶ್ರೀಮತಿ ಸುರೇಣು ಜಯರಾಮ್ ಮತ್ತು ಉಪಾಧ್ಯಕ್ಷೆ ಕುಮಾರಿ ಮೃಣಾಲಿನಿ ಪುರಾಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷೆ ಭಾನುಮತಿಯವರು ಮುಖ್ಯ ಅತಿಥಿಗಳನ್ನು ಸ್ವಾಗತಿಸಿ ಅವರನ್ನು ಸಭೆಗೆ ಪರಿಚಯಮಾಡಿಕೊಟ್ಟರು. ಮಾನ್ಯ ಗುರುರಾಜಾರಾವ್ ಅವರು ಅಚ್ಚಕನ್ನಡಿಗರು. ಇದೇ ಮೊದಲ ಬಾರಿಗೆ ಆಂಗ್ಲನಾಡಿನಲ್ಲಿ ಭಾರತದ ರಾಯಭಾರ ನಿಯೋಗ ಮಂಡಲಿಯ ಅಧಿಕಾರಿಯಾಗಿ ಒಬ್ಬ ಕನ್ನಡಿಗರು ನೇಮಕಗೊಂಡಿರುವುದು ನಮ್ಮೆಲ್ಲರ ಸಂತಷ ಮತ್ತು ಸುಕೃತವೆಂದು ಭಾನುಮತಿ ಹೇಳಿದರು. ಗುರುರಾಜಾರಾವ್ ಅವರು ಬರ್ಮಿಂಗ್ ಹ್ಯಾಮಿನ ಭಾರತದ ರಾಯಭಾರ ನಿಯೋಗದ ಮುಖ್ಯಸ್ಥರಾಗಿ ನಿಯಮಿತರಾಗಿದ್ದಾರೆಂದು ತಿಳಿಸಿದರು. ಅವರಿಗೆ ಕನ್ನಡಬಳಗ ಯು.ಕೆ ಸಂಸ್ಥೆಯ ವಿಚಾರವಾಗಿ ವಿವರಿಸಿ ಈ ಸಂಸ್ಥೆ ಆಂಗ್ಲನಾಡಿನಲ್ಲಿ ಉದಯಿಸಿ ಈಗಾಗಲೇ ಇಪ್ಪತ್ತೇಳು ವರ್ಷಗಳಾಗಿ 2008 ರಲ್ಲಿ ಬಳಗವು ತನ್ನ 25 ನೇ ಹುಟ್ಟುಹಬ್ಬದ ಸಂಕೇತವಾಗಿ ರಜತಮಹೋತ್ಸವವನ್ನು ಆಚರಿಸಿದುದನ್ನು ವಿವರಿಸಿದರು.
ಭಾರತ ಸರ್ಕಾರವು ಕಡಲಾಚೆಯ ಭಾರತ ಪೌರತ್ವದ ಬಗ್ಗೆ ಇತ್ತೀಚೆಗೆ ಜಾರಿಗೆ ತಂದಿರುವ ನಿಯಮಾವಳಿಗಳ ಬಗ್ಗೆ ಸ್ವಲ್ಪ ವಿವರಿಸಬೇಕೆಂದು ಮುಖ್ಯ ಅತಿಥಿಗಳಿಗೆ ಮನವಿ ಮಾಡಿಕೊಂಡರು. ಅದಕ್ಕೆ ಉತ್ತರವಾಗಿ ಗುರುರಾಜಾರಾವ್ ಅವರು ತಮ್ಮ ಭಾಷಣವನ್ನು ಕನ್ನಡದಲ್ಲಿ ಆರಂಭಿಸಿ, ದ.ರಾ. ಬೇಂದ್ರೆಯವರ "ಯುಗಾದಿ" ಕವನವನ್ನು ಓದಿದಾಗ ಸಭಿಕರು ಹರ್ಷೋದ್ಘಾರದಿಂದ ಕರತಾಡನಮಾಡಿದರು. ಅವರೂ ಇದೇ ಮೊದಲನೆಯಬಾರಿಗೆ ಹೊರದೇಶದಲ್ಲಿ ಇಷ್ಟೊಂದು ಕನ್ನಡಿಗರನ್ನು ಒಟ್ಟಿಗೆ ನೋಡಿರುವುದಾಗಿ ತಿಳಿಸಿದರು. ಕವನ ವಾಚನದ ನಂತರ ಅವರು ಕಡಲಾಚೆಯ ಭಾರತ ಪೌರತ್ವದ ಬಗ್ಗೆ ವಿವರಿಸಿ ಅದರಬಗ್ಗೆ ಇನ್ನೂ ಹೆಚ್ಚಿನಮಾಹಿತಿಗೆ ಭಾರತ ರಾಯಭಾರ ನಿಯೋಗದ ಅಂತರ್ಜಾಲದ ತಾಣಕ್ಕೆ ಭೇಟಿಕೊಟ್ಟು ಈ ಹೊಸ ನಿಯಮಾವಳಿಗಳಬಗ್ಗೆ ಪೂರ್ಣವಿವರಗಳನ್ನು ಪಡೆಯಬಹುದು ಎಂದರು.
ಮುಖ್ಯ ಅತಿಥಿಗಳ ಭಾಷಣದ ನಂತರ ಬಳಗದ ಮನರಂಜನೆಯ ಕಾರ್ಯಕ್ರಮಗಳು ಒಂದಾದರೋಂದರಮೇಲೆ ಬರತೊಡಗಿದವು. ಕರ್ನಾಟಕದಿಂದ ಬರಬೇಕಾದ ಹಲವು ಕಲಾವಿದರು, ವೀಸಾ ತೊಂದರೆ ಮತ್ತು ಐಸ್ ಲ್ಯಾಂಡಿನ ಅಗ್ನಿಪರ್ವತದ ಬೂದೀಮೋಡದ ಕಾರಣಗಳಿಂದ ಈ ದೇಶಕ್ಕೆ ಬರಲಾಗಲಿಲ್ಲ. ಆದರೂ ಬಳಗಕ್ಕೆ ಸ್ಥಳೀಯ ಕನ್ನಡ ಕಲಾವಿದರುಗಳ ಕೊರತೆಯೇನೂ ಇರಲಿಲ್ಲ. ಎದೆ ತುಂಬಿ ಹಾಡಿದೆನು ಟಿವಿ ಕಾರ್ಯಕ್ರಮದಲ್ಲಿ ಮಿಂಚಿದ ಶ್ರಿಮತಿ ಶ್ರುತಿ ಸುಧೀರ್ ಅವರಿಂದ ಇಂಪಾದ ಸುಗಮ ಸಂಗೀತ, ಚಿತ್ರಲೇಖ ಕಲಾವಿದರಿಂದ "ಪಂಚತಂತ್ರ" ಕತೆಯ ಮನಕರಗಿಸುವ ಯಕ್ಷಗಾನ, ಅಲ್ಲದೆ ಜ್ಯೋತ್ಸ್ನಾ ಶ್ರೀಕಾಂತ್ ಅವರ ಪೌರ ಪಾಶ್ಚಿಮಾತ್ಯ ಮಿಲನ ಸಂಗೀತಕ್ಕೆ ಸಭಿಕರು ಚಿಮ್ಮಿ ಕುಣಿದಾಡಿದರು.
ಸುವರ್ಣ ಟೀವಿ ಯ Confident Star Singer ಕಾರ್ಯಕ್ರಮದಲ್ಲಿ ಬೆಳಗಿದ ಶ್ರಿಮತಿ ಸಂಗೀತ ರಾಜೀವ ಅವರ ಬಾಲಿವುಡ್ ಮತ್ತು ಕನ್ನಡ ಚಲನಚಿತ್ರ ಸಂಗೀತ ಎಲ್ಲರ ಮನಸೆಳೆಯಿತು. ಇವರು ಮತ್ತೆ ಭಾನುವಾರ ಬೆಳಗ್ಗೆ ಚಿತ್ರಸಂಗೀತಗಳನ್ನು ಹಾಡಿದರು. ಶ್ರಿಮತಿ ದೇವಿಕ ಅವರು ಯಕ್ಷಗಾನ ಮತ್ತು ಕನ್ನಡ ಚಲನಚಿತ್ರ "ಗಾಳಿಪಟ"ದ ಪ್ರದರ್ಶನದೊಂದಿಗೆ 2010ರ ಇಂಗ್ಲೆಂಡ್ ಯುವ ಕನ್ನಡಿಗರ ಮೇಳ ಮುಕ್ತಾಯವಾಯಿತು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications