ಲಾಸೇಂಜಲಿಸ್ ಕನ್ನಡ ಸಂಘದ ಚುನಾವಣೆ

ಫಾಲ್ಕೆ ಪ್ರಶಸ್ತಿ ವಿಜೇತ, ವರನಟ ಡಾ. ರಾಜ್ ಕುಮಾರ್ ಅವರ ಹುಟ್ಟಿದ ಹಬ್ಬದ ದಿನವಾದ ಏಪ್ರಿಲ್ 24ರಂದೇ ಲಾಸ್ ಏಂಜಲಿಸ್ ಕನ್ನಡಿಗರ 'ಒಗ್ಗಟ್ಟಿಗೆ' ಸಂಕೇತವಾದ ಕೆಸಿಎ ಎಸ್ ಸಿಯಲ್ಲಿ ಹೊಸ ಆಡಳಿತಗಾರರ ನೇಮಕಕ್ಕೆ ಚುನಾವಣೆ ಜರುಗುತ್ತಿರುವುದು ಕಾಕತಾಳಿಯ ವಿಶೇಷವೆನಿಸಿದೆ.
ಒಂದು ಸ್ಥಳೀಯ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಕೆಸಿಎ ನಿರ್ದೇಶಕ ಸ್ಥಾನಗಳಿಗೆ ಈ ಬಾರಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಆರಿಸಿಬರಲಿದ್ದು ಆಯಕಟ್ಟಿನ ಅಧಿಕಾರ ಸ್ಥಾನಗಳು ಕೂಡ ಮಹಿಳೆಯರ ಪಾಲಾಗುವ ನಿರೀಕ್ಷೆಯಿದೆ.
ಸಂಘದ ಆಡಳಿತ ಮಂಡಳಿಯಲ್ಲಿ ಒಟ್ಟು 9 ನಿರ್ದೇಶಕ ಸ್ಥಾನಗಳಿದ್ದು ಆಯ್ಕೆಯಾಗಲು ಬಯಸುವ ಸಂಘದ ಅರ್ಹ ಸದಸ್ಯರಿಂದ ನಾಮಪತ್ರ ಸ್ವೀಕಾರ, ನಾಮಪತ್ರ ಪರಿಷ್ಕಾರ ಮುಂತಾದ ಚುನಾವಣಾ ಪ್ರಕ್ರಿಯೆಗಳು ಇದೀಗ ಮುಗಿದಿದ್ದು ಚುನಾವಣೆಗೆ ವೇದಿಕೆ ಅಣಿಯಾಗಿದೆ. ಸಂಘದ ಆಜೀವ ಸದಸ್ಯರು ಮತ್ತು ಕಳೆದ 90 ದಿನಗಳಲ್ಲಿ ತಮ್ಮ ಸದಸ್ಯತ್ವವನ್ನು ಜೀವಂತವಾಗಿರಿಸಿಕೊಂಡಿರುವ ಸದಸ್ಯರು ಮಾತ್ರ ಮತದಾನ (ಅಗತ್ಯ ಬಿದ್ದಲ್ಲಿ) ಮಾಡುವ ಅರ್ಹತೆ ಪಡೆದಿರುತ್ತಾರೆ. ಹಿರಿಯ ಕನ್ನಡಿಗ ಪಿಜಿ ತ್ಯಾಮಗೊಂಡ್ಲು ಅವರು ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರತರಾಗಿರುತ್ತಾರೆ.
ಸಂಘದಲ್ಲಿ ಒಟ್ಟು 107 ಮಂದಿ ಆಜೀವ ಸದಸ್ಯರು ಹಾಗೂ 103 ಮಂದಿ ವಾರ್ಷಿಕ ಸದಸ್ಯರಿರುತ್ತಾರೆ. ಈ ಬಾರಿಯ ಮಹಾಸಭೆಯ ಜತೆಗೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬೆಸುಗೆ ಹಾಕಲಾಗಿದ್ದು ಕಾರ್ಯಕ್ರಮಗಳು ಲೇಕ್ ವುಡ್ ನಲ್ಲಿರುವ ಹೂವರ್ ಮಾಧ್ಯಮಿಕ ಶಾಲೆಯಲ್ಲಿ ನಡೆಯುತ್ತವೆ. ವಿಕೃತಿ ನಾಮ ಸಂವತ್ಸರದ ಯುಗಾದಿ ಹಾಗೂ ವಸಂತೋತ್ಸವ ಹಾಗು ಸಂಘದ ವಾರ್ಷಿಕ ಮಹಾಸಭೆ ಹೀಗೆ ಮೂರು ಕಾರ್ಯಕ್ರಮಗಳ ತ್ರಿವೇಣಿ ಸಂಗಮಕ್ಕೆ ಏಪ್ರಿಲ್ 24 ಸಾಕ್ಷಿಯಾಗಲಿದೆ.
ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘವು ಸ್ವತಂತ್ರವಾಗಿ ಯೋಚಿಸುವ ಮತ್ತು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಒಂದು ಕನ್ನಡ ಕೂಟವಾಗಿದೆ. ಇದೇ ಜುಲೈನಲ್ಲಿ ಸ್ಥಳೀಯವಾಗಿ ನಡೆಯಲಿರುವ ನಾವಿಕ ವಿಶ್ವ ಕನ್ನಡ ಸಮ್ಮೇಳನ ಮತ್ತು ನ್ಯೂ ಜೆರ್ಸಿಯಲ್ಲಿ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಅಕ್ಕ ವಿಶ್ವಕನ್ನಡ ಸಮ್ಮೇಳನದ ಜಾಹಿರಾತುಗಳು ಏಕಕಾಲಕ್ಕೆ ಸಂಘದ ಅಂತರ್ ಜಾಲತಾಣದಲ್ಲಿ ಜಾಗ ಪಡೆದಿವೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications