ಆಕ್ಲೆಂಡಿನಲ್ಲಿ ಹರಿಹರದಾಸ ಸಂಗೀತ ಸಮಾರಾಧನೆ

ಮೌಂಟ್ ಈಡನ್ ಹಿರಿಯ ನಾಗರಿಕರ ಸಭಾಂಗಣದಲ್ಲಿ ಆಯೋಜಿಸಿದ್ದ ಆರಾಧನೆ, ದಿವಾಕರ್ ಮತ್ತು ಅವರ ಪತ್ನಿ ಶಾಂತಾ ಅವರು ಸಾಂಪ್ರದಾಯಿಕ ಪೂಜೆ ಸಲ್ಲಿಸುವುದರೊಂದಿಗೆ ಆರಂಭವಾಯಿತು. ಮೊದಲು ಅತಿ ಕಿರಿಯ ವಿದ್ಯಾರ್ಥಿಗಳು ವೃಂದಗಾನದಲ್ಲಿ ಶ್ರೀ ಗಣನಾಥಾ, ಕೆರೆಯ ನೀರನು ಕೆರೆಗೆ ಚೆಲ್ಲುತ, ಪದುಮನಾಭ ಮುಂತಾದ ಜನಪ್ರಿಯ ಪುರಂದರ ಕೃತಿಗಳನ್ನು ಹಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.
ನಂತರ ಕು. ಮೃದುಲಾ ಪ್ರವೀಣ್, ಆದ್ಯ [ಜ್ಞಾನದ ಬಲದಿಂದ], ಶೃತಿ, ಸುಷ್ಮಿತಾ ದೇಶಪಾಂಡೆ, ಅನಘ, ಇಂದು [ರಾಮ ನಾಮ ಭಜಿಸುವವಗೆ], ಚಿ.ಸಾಕೆತ್ [ಇನ್ನೂ ದಯಬಾರದೆ], ವಿಷ್ಣಿ [ಗೋವಿಂದ ನಿನ್ನ ನಾಮವೇ ಚಂದ], ಸ್ನಿಗ್ಧ, ಪ್ರಿಯ, ವರುಣ್ [ತಂಬೂರಿ ಮೀಟಿದವ], ಪವನ್ ಕೌಶಿಕ್ [ಮಧುಕರ ವೃತ್ತಿ ಎನ್ನದು], ಶಿಕ್ಷಾ, ಮಾನಸಿ, ಕೃತ್ತಿಕಾ [ಕೃಷ್ಣಾ ಎನ ಬಾರದೆ], ಮಾನಸಿ [ಮನವೇ ಮಂತ್ರಾಲಯ], ಕೃತ್ತಿಕಾ [ಕಂಡೆ ನಾ ಗೋವಿಂದನಾ], ಶಿಕ್ಷಾ [ನಾರಾಯಣ ನಿನ್ನ], ವರ್ಷಾ ಪೈ [ರಾಮ ಮಂತ್ರವ ಜಪಿಸೋ], ಮಾಧುರಿ ಮತ್ತು ಮುರಲಿ [ವೆಂಕಟರಮಣನೆ ಬಾರೊ], ಶ್ರೀರಾಮ್ [ದಾಸನ ಮಾಡಿಕೋ ಎನ್ನ] ಹೀಗೆ ಹಲವಾರು ದಾಸವರೇಣ್ಯರ ಕೃತಿಗಳನ್ನು ಮತ್ತು ಜನಪ್ರಿಯ ವಚನಗಳನ್ನು ಹಾಡಿ ಕೇಳುಗರ ಮನ ತಣಿಸಿದ ಗಾಯಕ ಗಾಯಕಿಯರ ಪೈಕಿ ಅನೇಕರು ಕನ್ನಡ ಮಾತೃಭಾಷೆಯವರಲ್ಲ ಎಂಬುದು ಗಮನಾರ್ಹ. ಇವರುಗಳಿಗೆ ಸಂಗೀತ ಮಾತ್ರವಲ್ಲದೆ ಕನ್ನಡದ ಕೃತಿಗಳನ್ನು ಸ್ಪಷ್ಟವಾಗಿ ಸುಲಲಿತವಾಗಿ ಹಾಡಲು ಕಲಿಸಿರುವುದು ವಿದ್ವಾನ್ ದಿವಾಕರ್ ಅವರ ಹಲವು ವರ್ಷಗಳ ಶ್ರಮದ ಅಪೂರ್ವ ಸಾಧನೆ.
ಹರಿಹರದಾಸಾರಾಧನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ರತ್ನಾ ವಾಮನ ಮೂರ್ತಿ, ವಯೋಲಿನ್ ವಾದಕ ಡಾ.ಅಶೋಕ್ ಮಾಲೂರ್ [ನ್ಯೂಜಿಲೆಂಡ್ ಕರ್ನಾಟಕ್ ಮ್ಯೂಸಿಕ್ ಸೊಸೈಟಿಯ ಅಧ್ಯಕ್ಷರು], ಮೈಸೂರಿನ ನಾಗರತ್ನ ಪದ್ಮನಾಭ್ ಇವರುಗಳು ಸಹ ತಮ್ಮ ವೈಯುಕ್ತಿಕ ಕೊಡುಗೆಗಳಿಂದ ಎಲ್ಲರ ಸಂತಸಕ್ಕೆ ಕಾರಣರಾದರು. ಕೊನೆಯಲ್ಲಿ ಎಲ್ಲರೂ ಒಟ್ಟಾಗಿ ಭಾಗ್ಯದಾ ಲಕ್ಷ್ಮೀ ಬಾರಮ್ಮ ಎಂದು ಮಂಗಳ ಹಾಡಿ ಪುರಂದರ ನಮನ ಸಲ್ಲಿಸಿದರು. ಮಹಾ ಪ್ರಸಾದಕ್ಕೆ ರಾಮ ನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ಎನ್ನುವಂತೆ ಸೊಗಸಾದ ಭೋಜನವನ್ನು ಏರ್ಪಡಿಸಲಾಗಿತ್ತು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications