ಆಕ್ಲೆಂಡಿನಲ್ಲಿ ಹರಿಹರದಾಸ ಸಂಗೀತ ಸಮಾರಾಧನೆ

ಮೌಂಟ್ ಈಡನ್ ಹಿರಿಯ ನಾಗರಿಕರ ಸಭಾಂಗಣದಲ್ಲಿ ಆಯೋಜಿಸಿದ್ದ ಆರಾಧನೆ, ದಿವಾಕರ್ ಮತ್ತು ಅವರ ಪತ್ನಿ ಶಾಂತಾ ಅವರು ಸಾಂಪ್ರದಾಯಿಕ ಪೂಜೆ ಸಲ್ಲಿಸುವುದರೊಂದಿಗೆ ಆರಂಭವಾಯಿತು. ಮೊದಲು ಅತಿ ಕಿರಿಯ ವಿದ್ಯಾರ್ಥಿಗಳು ವೃಂದಗಾನದಲ್ಲಿ ಶ್ರೀ ಗಣನಾಥಾ, ಕೆರೆಯ ನೀರನು ಕೆರೆಗೆ ಚೆಲ್ಲುತ, ಪದುಮನಾಭ ಮುಂತಾದ ಜನಪ್ರಿಯ ಪುರಂದರ ಕೃತಿಗಳನ್ನು ಹಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.
ನಂತರ ಕು. ಮೃದುಲಾ ಪ್ರವೀಣ್, ಆದ್ಯ [ಜ್ಞಾನದ ಬಲದಿಂದ], ಶೃತಿ, ಸುಷ್ಮಿತಾ ದೇಶಪಾಂಡೆ, ಅನಘ, ಇಂದು [ರಾಮ ನಾಮ ಭಜಿಸುವವಗೆ], ಚಿ.ಸಾಕೆತ್ [ಇನ್ನೂ ದಯಬಾರದೆ], ವಿಷ್ಣಿ [ಗೋವಿಂದ ನಿನ್ನ ನಾಮವೇ ಚಂದ], ಸ್ನಿಗ್ಧ, ಪ್ರಿಯ, ವರುಣ್ [ತಂಬೂರಿ ಮೀಟಿದವ], ಪವನ್ ಕೌಶಿಕ್ [ಮಧುಕರ ವೃತ್ತಿ ಎನ್ನದು], ಶಿಕ್ಷಾ, ಮಾನಸಿ, ಕೃತ್ತಿಕಾ [ಕೃಷ್ಣಾ ಎನ ಬಾರದೆ], ಮಾನಸಿ [ಮನವೇ ಮಂತ್ರಾಲಯ], ಕೃತ್ತಿಕಾ [ಕಂಡೆ ನಾ ಗೋವಿಂದನಾ], ಶಿಕ್ಷಾ [ನಾರಾಯಣ ನಿನ್ನ], ವರ್ಷಾ ಪೈ [ರಾಮ ಮಂತ್ರವ ಜಪಿಸೋ], ಮಾಧುರಿ ಮತ್ತು ಮುರಲಿ [ವೆಂಕಟರಮಣನೆ ಬಾರೊ], ಶ್ರೀರಾಮ್ [ದಾಸನ ಮಾಡಿಕೋ ಎನ್ನ] ಹೀಗೆ ಹಲವಾರು ದಾಸವರೇಣ್ಯರ ಕೃತಿಗಳನ್ನು ಮತ್ತು ಜನಪ್ರಿಯ ವಚನಗಳನ್ನು ಹಾಡಿ ಕೇಳುಗರ ಮನ ತಣಿಸಿದ ಗಾಯಕ ಗಾಯಕಿಯರ ಪೈಕಿ ಅನೇಕರು ಕನ್ನಡ ಮಾತೃಭಾಷೆಯವರಲ್ಲ ಎಂಬುದು ಗಮನಾರ್ಹ. ಇವರುಗಳಿಗೆ ಸಂಗೀತ ಮಾತ್ರವಲ್ಲದೆ ಕನ್ನಡದ ಕೃತಿಗಳನ್ನು ಸ್ಪಷ್ಟವಾಗಿ ಸುಲಲಿತವಾಗಿ ಹಾಡಲು ಕಲಿಸಿರುವುದು ವಿದ್ವಾನ್ ದಿವಾಕರ್ ಅವರ ಹಲವು ವರ್ಷಗಳ ಶ್ರಮದ ಅಪೂರ್ವ ಸಾಧನೆ.
ಹರಿಹರದಾಸಾರಾಧನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ರತ್ನಾ ವಾಮನ ಮೂರ್ತಿ, ವಯೋಲಿನ್ ವಾದಕ ಡಾ.ಅಶೋಕ್ ಮಾಲೂರ್ [ನ್ಯೂಜಿಲೆಂಡ್ ಕರ್ನಾಟಕ್ ಮ್ಯೂಸಿಕ್ ಸೊಸೈಟಿಯ ಅಧ್ಯಕ್ಷರು], ಮೈಸೂರಿನ ನಾಗರತ್ನ ಪದ್ಮನಾಭ್ ಇವರುಗಳು ಸಹ ತಮ್ಮ ವೈಯುಕ್ತಿಕ ಕೊಡುಗೆಗಳಿಂದ ಎಲ್ಲರ ಸಂತಸಕ್ಕೆ ಕಾರಣರಾದರು. ಕೊನೆಯಲ್ಲಿ ಎಲ್ಲರೂ ಒಟ್ಟಾಗಿ ಭಾಗ್ಯದಾ ಲಕ್ಷ್ಮೀ ಬಾರಮ್ಮ ಎಂದು ಮಂಗಳ ಹಾಡಿ ಪುರಂದರ ನಮನ ಸಲ್ಲಿಸಿದರು. ಮಹಾ ಪ್ರಸಾದಕ್ಕೆ ರಾಮ ನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ಎನ್ನುವಂತೆ ಸೊಗಸಾದ ಭೋಜನವನ್ನು ಏರ್ಪಡಿಸಲಾಗಿತ್ತು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications