ರಿಸೆಷನ್ ಗಾಯಕ್ಕೆ ಹಿಮಪಾತದ ಬರೆ

ಶ್ವೇತಭವನ ಸೇರಿದಂತೆ ಅನೇಕ ಸರಕಾರಿ ಮತ್ತು ಖಾಸಗಿ ಕಚೇರಿಗಳು ತಮ್ಮ ಉದ್ಯೋಗಿಗಳಿಗೆ ರಜೆ ಘೋಷಿಸಿವೆ. ಕೆಲವರು ಮನೆಯಿಂದಲೇ ಕೆಲಸಮಾಡುವಂತೆ ನೌಕರರಿಗೆ ಸೂಚಿಸಿದ್ದಾರೆ. ಆದರೆ, ವಿದ್ಯುತ್ ಸಂಪರ್ಕ ಕಡಿತದಿಂದಾಗಿ ಹೊರಗೆ ಹಿಮ ಆವರಿಸಿ ಮನೆಯೊಳಗೆ ಕತ್ತಲು ಹೆಪ್ಪಾಗಿದೆ. ಕೊರೆಯುವ ಚಳಿಯಲ್ಲಿ ತತ್ತರಿಸುತ್ತಿರುವ ಜನಕ್ಕೆ ಮನೆಯಲ್ಲಿ ಹೀಟರ್ ಕೂಡ ಬಳಸಲಾಗದೆ ಪರಿತಪಿಸುವಂಥ ಸನ್ನಿವೇಶವನ್ನು ಪ್ರಕೃತಿಲಾಸ್ಯ ಸೃಷ್ಟಿಸಿದೆ. ವಿಪರೀತ ಚಳಿ ತಡೆಯಲಾಗದೆ ಅನೇಕರು ಮನೆಮಾರು ಬಿಟ್ಟು ಬೆಚ್ಚಗಿನ ಆದರೆ ಭಾರೀ ಖರ್ಚುವೆಚ್ಚದ ಹೋಟೆಲುಗಳಲ್ಲಿ ಆಶ್ರಯಪಡೆಯುಂತಹ ಅನಿವಾರ್ಯತೆ ತಲೆದೋರಿದೆ.
ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಆದಂತೆ ಅಮೆರಿಕಾದಲ್ಲಿ ಹಿಮಹಾವಳಿ. ಬರುವ ಸೋಮವಾರದವರೆಗೂ ಶಾಲೆಗಳಿಗೆ ರಜೆ ಘೋಷಿಲಾಗಿದೆ. ಕಂಡುಕೇಳರಿಯ ಇಂಥ ಪ್ರಕೃತಿ ವಿಕೋಪಕ್ಕೆ ಅಧ್ಯಕ್ಷ ಬಾರಾಕ್ ಒಬಾಮ Snowmageddon ಎಂದು ನಾಮಕರಣ ಮಾಡಿ willing to brave a blizzard Snowmageddon here in D.C ಎಂದು ಪ್ರಜೆಗಳಿಗೆ ಕರೆಕೊಟ್ಟು ಶ್ವೇತ ಭವನದಲ್ಲಿ ಕಂಬಳಿಹೊದ್ದು ಮಲಗಿಬಿಟ್ಟಿದ್ದಾರೆ. ರಸ್ತೆಗಳಲ್ಲಿ ಬಿದ್ದಿರುವ ಹಿಮವನ್ನು ತೊಡೆದುಹಾಕಲು ಕಾರ್ಮಿಕರು ಅಹೋರಾತ್ರಿ ಶ್ರಮಿಸುತ್ತಿದ್ದರೂ ಸ್ಥಿತಿ ತಹಬಂದಿಗೆ ಬರುತ್ತಿಲ್ಲ. ಈ ಚಿತ್ರ ನಿಮಗೆ ಶಿಕಾಗೋದಿಂದ ಶುರುವಾಗಿ ಪೂರ್ವ ಕರಾವಳಿಯ ರಾಜ್ಯಗಳನ್ನು ಸುತ್ತುವರೆದು ಉತ್ತರ ಕೆರೋಲಿನಾವರೆಗೂ ಕಾಣಿಸುತ್ತದೆ.
ಹಿಮವೃಷ್ಟಿಗೆ ಸಿಲುಗಿ ತತ್ತರಿಸಿರುವ ರಾಜ್ಯಗಳಲ್ಲಿ ವಾಷಿಂಗ್ ಡಿಸಿ ಪ್ರದೇಶ ಪ್ರಮುಖವಾಗಿದೆ. ಮೇರಿಲ್ಯಾಂಡ್, ವರ್ಜೀನಿಯಾ, ರೆಸ್ಟನ್, ಇಂಡಿಯಾನ, ಶಿಕಾಗೋ, ಪೆನ್ಸಿಲ್ವೇನಿಯಾ, ನ್ಯೂ ಜೆರ್ಸಿ ಮುಂತಾದ ಪ್ರದೇಶಗಳಲ್ಲಿ ಸ್ಥಿತಿ ಚಿಂತಾಜನಕ. ಡಿಸಿ ಪ್ರದೇಶದ ಡ್ಯೂಲಸ್ ವಿಮಾನ ನಿಲ್ದಾಣದಲ್ಲಿ 32 ಅಂಗುಲ ಹಿಮ ದಾಖಲಾಗಿದ್ದರೆ, ವಿಯಟ್ನಾಮ್ ಸಮರವೀರರ ಸ್ಮಾರಕ 16 ಅಂಗುಲ ಹಿಮದಲ್ಲಿ ಹೂತುಹೊಗಿದೆ. ಹಿಮಕಸವನ್ನು ಗುಡಿಸಿಹಾಕುವವರು ಇಲ್ಲಿ ಯಾರೂ ಇಲ್ಲವೇ ಎಂದು ಚಳಿಯಲ್ಲಿ ನಡುಗುತ್ತಿರುವ ಲಿಂಕನ್ ಪ್ರತಿಮೆ ಸ್ಥಳೀಯ ಆಡಳಿತಗಾರರನ್ನು ಅಣಕಿಸುತ್ತಿದೆ.
ಆದರೆ, ಬಜೆಟ್ ಇಲ್ಲ ಸ್ವಾಮಿ. ಸ್ಥಳೀಯ ರಾಜ್ಯದ ಬೊಕ್ಕಸಗಳು ಖಾಲಿಖಾಲಿ. ವಿಶೇಶವಾಗಿ ಪ್ರಕೃತಿ ವಿಕೋಪಗಳನ್ನು ಮೆಟ್ಟಿನಿಲ್ಲುವ ಪಡೆಗಳಿಗಾಗಿ ವೆಚ್ಚಮಾಡಲು ಹಣದ ಮುಗ್ಗಟ್ಟು. ಹಿಮ ಒರೆಸಲು ಅಗತ್ಯವಾದ ಉಪ್ಪು ಮತ್ತು ಮರಳಿನ ಕೊರತೆ ಎದ್ದುಕಾಣುತ್ತಿದೆ. ಪಶ್ಚಿಮದ ಪೆಸಿಫಿಕ್ ಅಂಚಿನ ಜೀವನ ಚಕ್ರಕ್ಕೆ ಹೋಲಿಸಿದರೆ ಪೂರ್ವದ ಅಟ್ಲಾಂಟಿಕ್ ತಟಾಕದ ಬದುಕು ಎಷ್ಟೋ ವಾಸಿ ಎಂದು ಭಾವಿಸಿ ನಿಟ್ಟುಸಿರು ಬಿಡುತ್ತಿದ್ದ ಈ ಭಾಗದ ಜನತೆಯ ಆಶಾವಾದಕ್ಕೆ ಪೆಟ್ಟು ಬಿದ್ದಿದೆ. ರಿಸೆಷನ್ ಗಾಯಕ್ಕೆ ಹಿಮಪಾತದ ಬರೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications