ನ್ಯೂ ಜರ್ಸಿ ಅಕ್ಕ ಸಮ್ಮೇಳನದ ಮುನ್ನಾ ನೋಟ

ಸಮ್ಮೇಳನದ ಆಯೋಜನೆ ಅಕ್ಕ ಮೂಲ ಸಂಸ್ಥೆಯಿಂದ. ಅಕ್ಕ ಪದಾಧಿಕಾರಿಗಳ ಪಟ್ಟಿ ಹೀಗಿದೆ. ಆದರೆ, ಸಮ್ಮೇಳನವನ್ನು ವ್ಯವಸ್ಥೆ ಮಾಡುವ ಪ್ರಾಥಮಿಕ ಜವಾಬ್ದಾರಿ ಸ್ಥಳೀಯ ಕನ್ನಡ ಕೂಟ ಅಥವಾ ಕನ್ನಡ ಸಂಘದ ಹೆಗಲೇರುತ್ತದೆ. ಈ ಬಾರಿ ಈ ಹೊಣೆಹೊತ್ತ ಬಳಗದ ಹೆಸರು ನ್ಯೂ ಜೆರ್ಸಿ ರಾಜ್ಯದ ಕನ್ನಡ ಸಂಘ 'ಬೃಂದಾವನ'. ಈ ಕೂಟದಲ್ಲಿ ಪದಾಧಿಕಾರಿಗಳ ಆಯ್ಕೆ ಎರಡು ವರ್ಷಕ್ಕೊಮ್ಮೆ ಜರುಗುತ್ತದೆ. ಡಿಸೆಂಬರ್ 09ಕ್ಕೆ ಐದು ವರ್ಷ ಪೂರೈಸುತ್ತಿರುವ ಬೃಂದಾವನದ 2008-10 ನೇ ಸಾಲಿನ ಪದಾಧಿಕಾರಿಗಳ ನೋಟ್ ಪ್ಯಾಡ್ ನೋಡಿ.
ಸ್ಥಳೀಯ ಕನ್ನಡ ಸಂಘದ ಆಶ್ರಯದಲ್ಲಿ ಸಮ್ಮೇಳನ ವ್ಯವಸ್ಥೆಯಾದರೂ ಕೂಡ, ಬೃಹತ್ ಪ್ರಮಾಣದ ವಿಶ್ವ ಸಮ್ಮೇಳನ ಜವಾಬ್ದಾರಿ ನಿರ್ವಸುವುದಕ್ಕೆಂದೇ ವಿಶೇಷ ಸಮಿತಿಗಳನ್ನು ರಚಿಸಲಾಗುತ್ತದೆ. ಇದುವರೆಗೆ ಐದು ಸಮ್ಮೇಳನಗಳು ಜರುಗಿವೆ. ಆದರೆ ಈ ಬಾರಿಯ ವಿಶೇಷತೆಯೆಂದರೆ ಬೃಂದಾವನ ಸಂಘದ ಜತೆಗೆ ಅಕ್ಕಪಕ್ಕ ರಾಜ್ಯಗಳಾದ ನ್ಯೂಯಾರ್ಕ್, ಡೆಲವೇರ್, ಪೆನ್ಸಿಲ್ವೇನಿಯಾ ಹಾಗೂ ಕನೆಕ್ಟಿಕಟ್ ರಾಜ್ಯಗಳ ಕನ್ನಡ ಸಂಘಗಳ ಮಾನವ ಸಂಪನ್ಮೂಲ ಕಲೆತು ವಿಶಾಲ ಸಮ್ಮೇಳನ ಸಮಿತಿ ರಚನೆಯಾಗಿದೆ.
ಸುಮಾರು ಒಂದು ನೂರು ಸ್ವಯಂಸೇವಕರಿರುವ ಈ ಮಾತೃ ಸಮಿತಿಯಿಂದ ಆಯ್ದ ನಾನಾ ಉಪ ಸಮಿತಿಗಳು ಇರುತ್ತವೆ. ಈ ಸಲ ಒಟ್ಟು 33 ಸಮಿತಿಗಳನ್ನು ರಚಿಸಲಾಗಿದ್ದು ಒಂದೊಂದೂ ಸಮಿತಿಗಳಿಗೆ ನಿರ್ದಿಷ್ಟ ಜವಾಬ್ದಾರಿ ಇರುತ್ತದೆ. ಸಮಿತಿಯ ಹೆಸರು, ಸದಸ್ಯರು, ಜವಾಬ್ದಾರಿಯ ಕ್ಷೇತ್ರ ಮತ್ತು ಅವರವರ ದೂರವಾಣಿ ಸಂಖ್ಯೆಗಳು ಹಾಗೂ ಈ ಮೇಲ್ ವಿಳಾಸಗಳು ಕೋಷ್ಟಕದಲ್ಲಿ ಅಡಕವಾಗಿದೆ. ಉಪಯೋಗಿಸಿ. ಗಮನಾರ್ಹ ಸಂಗತಿಯೆಂದರೆ ಸಮಿತಿಯು ಯುವಕ ಯುವತಿಯರಿಂದ ತುಂಬಿ ತುಳುಕುತ್ತಿದೆ. ಪ್ರಸನ್ನವದನರಾಗಿರುವ ಸಗಟು ಸಮಿತಿಯ ಗ್ರೂಪ್ ಫೋಟೋ ಮೇಲೆ ಕಣ್ಣಾಡಿಸಿ.
ವಿಶಾಲ ಉತ್ತರ ಅಮೆರಿಕಾದಲ್ಲಿ ವಾಸಿಸುವ ಕನ್ನಡ ಕೂಟಗಳ ಮಾತೃ ಸಂಸ್ಥೆ ಅಕ್ಕನಿಗೆ ಎರಡು ವರ್ಷಗಳಿಗೊಮ್ಮೆ ಆಯ್ಕೆಯಾಗುವ ಪದಾಧಿಕಾರಿಗಳಲ್ಲದೆ, ಮೂಲಭೂತವಾಗಿ ಸಂಸ್ಥೆಗೆ ಮಾರ್ಗದರ್ಶನ ಮಾಡುವುದಕ್ಕೆ ಅಕ್ಕ ವಿಶ್ವಸ್ಥ ಮಂಡಳಿ ಇರುತ್ತದೆ. ಮಂಡಳಿಯಲ್ಲಿ 11 ಸದಸ್ಯರಿರುತ್ತಾರೆ. ವಿಶ್ವಸ್ಥ ಮಂಡಳಿಯ ಅಧ್ಯಕ್ಷರು ಹಾಗೂ ಸಮ್ಮೇಳನದ ಅಡ್ವೈಸರ್ ಅಮರ್ ನಾಥ ಗೌಡ. ಅವರೊಂದಿಗೆ ದಟ್ಸ್ ಕನ್ನಡ ಡಾಟ್ ಕಾಂ ಡಿಸೆಂಬರ್ 22ರ ಮಂಗಳವಾರ ನಡೆಸಿದ ಸಂದರ್ಶನದ ಆಯ್ದ ಭಾಗಗಳು ಹೀಗಿವೆ. ಓದಿ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications