ಅಕ್ಲೆಂಡ್ ಗಣೇಶನಿಗೆ ಚಿಣ್ಣರ ಸಂಗೀತದ ಅಭಿಷೇಕ

ನ್ಯೂಜಿಲೆಂಡ್ ಕನ್ನಡ ಕೂಟ ದಿನಾಂಕ 29ನೇ ಆಗಸ್ಟ್ 2009ರ ಶನಿವಾರದಂದು ನಡೆಸಿದ ಗಣೇಶನ ಹಬ್ಬದ ಕಾರ್ಯಕ್ರಮ ಸಾಂಪ್ರದಾಯಿಕ ಪೂಜೆಯೊಂದಿಗೆ ಆರಂಭವಾಯಿತು. ಪುಟ್ಟ ಬಾಲಕಿ ತನ್ವಿ ಕೆಡಿಯಪ್ಪ ಗಜಮುಖನೆ ಗಣಪತಿಯೆ ನಿನಗೆ ವಂದನೆ ಎಂದು ಮುದ್ದಾಗಿ ಪ್ರಾರ್ಥನೆ ಸಲ್ಲಿಸಿದ ಮೇಲೆ ಸಿನಿಮಾ ಹಾಡು, ಭಾವ ಗೀತೆ, ಜಾನಪದ ವೃಂದಗಾನಗಳು ಸಂಗೀತ ಪ್ರಿಯರ ಮನ ತಣಿಸಿದವು.
ಹೆಸರಾಂತ ಗಾಯಕಿಯರಾದ ಚೈತ್ರಾ ರವಿಶಂಕರ್ [ಡಾ.ಜಿ.ಎಸ್.ಎಸ್.ಅವರ -ಎದೆ ತುಂಬಿ ಹಾಡಿದೆನು], ಅಖಿಲಾ ಪುತ್ತಿಗೆ [ಭೂಪತಿ ರಂಗ ಚಿತ್ರದ ರಸಿಕಾ ಓ ರಸಿಕಾ], ನಿಖಿಲ್ ಲಕ್ಷ್ಮೀನರಸಿಂಹ [ಪಡೋಸನ್ ಚಿತ್ರದ ಮೆರೆ ಸಾಮನೆವಾಲಿ ಖಿಡಿಕಿಮೆ ಗೀತೆಯ ಕನ್ನಡಿಕರಿಸಿದ ಪಕ್ಕದ ಮನೆ ಹುಡುಗಿ ಚಿತ್ರದ ಅಂದಚಂದದ ಮನೆಯ ಕಿಟಕಿ] , ಶ್ರೀಧರನಾಥ್ [ಆಕಾಶವೇ ಬೀಳಲಿ ಮೇಲೆ], ಪವನ್ ಕೌಶಿಕ್ [ರತ್ನಮಾಲಾ ಪ್ರಕಾಶ್ ಹಾಡಿರುವ ಮುಂಗಾರಿನ ಅಭಿಷೇಕಕೆ - ಭಾವಗೀತೆ], ಸತ್ಯ ಕುಮಾರ್ ಕಟ್ಟೆ ಮತ್ತು ಸಂಗಡಿಗರ ತಿಂಗಾಳು ಮುಳುಗಿದವೋ ರಂಗೋಲಿ ಬೆಳಗಿದವೊ.. ತಾಯಿ ಚಾಮುಂಡಿಯ ಸೇವೆಗೆ [ಜಾನಪದ]. ಈ ಎಲ್ಲವೂ ಸದಭಿರುಚಿಯಿಂದ ಕೂಡಿದ್ದವು. ಚಿಣಕ್ ಮಿಣಕ್ ಎಂದು ಮಿಂಚು ಹೊಳೆದಂತೆ ನರ್ತಿಸಿದ ಪುಟಾಣಿ ಜೋಡಿ ಮೃದುಲಾ ಪ್ರವೀಣ್ ಹಾಗೂ ನಿಧಿ ವಿಜಯ್ ಪ್ರೇಕ್ಷಕರೂ ನರ್ತಿಸುವಂತೆ ಮಾಡಿದರು. ಕೊನೆಯಲ್ಲಿ ಹೂವು ಹಣ್ಣು ಚಿತ್ರದ ನಿಂಗಿ ನಿಂಗೀ ಹಾಡಿ ಕುಣಿದ ದಂಪತಿಗಳು ಮಂಗಳಾ ಮತ್ತು ಪ್ರಭಾಕರ ಭಲೆ ಜೋಡಿ ಎನಿಸಿದರು.
ವಾರ್ಷಿಕ ಕ್ರೀಡಾ ಕೂಟದಲ್ಲಿ ಮತ್ತು ಪಿಕ್ನಿಕ್ ಸಮಯದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರು ಹಾಗೂ ಕನ್ನಡ ಚಲನಚಿತ್ರ ಗೀತೆಗಳ ಅಂತಾಕ್ಷರಿ ಸ್ಪರ್ಧೆಯಲ್ಲಿ ಗೆದ್ದವರಿಗೆ ಹಿರಿಯರಾದ ಸುದರ್ಶನ್ ರಾವ್, ಹೊ.ನಾ. ರಾಮಚಂದ್ರ ಮತ್ತು ಅಕ್ಲೆಂಡ್ ಇಂಡಿಯನ್ ಅಸೋಸಿಯೇಶನ್ ಕಾರ್ಯದರ್ಶಿ ಡಾ.ಲಿಂಗಪ್ಪ ಕಲ್ಬುರ್ಗಿ ಅವರುಗಳು ಬಹುಮಾನ ವಿತರಣೆ ಮಾಡಿದರು. ರಾಮಚಂದ್ರ ಅವರು ಹಾಸ್ಯ ಚಟಾಕಿಗಳನ್ನು ಹೇಳಿ ಕಾರ್ಯಕ್ರಮಕ್ಕೆ ನಗೆಲೇಪನ ಹಾಕಿದರು.
ಕನ್ನಡಕೂಟದ ಅಧ್ಯಕ್ಷ ರವಿ ಶಂಕರ್ ರಾವ್ ಅವರು ಸ್ವಾಗತ ಭಾಷಣ ಮಾಡಿದರು ಹಾಗೂ ಕಾರ್ಯದರ್ಶಿ ಪ್ರಕಾಶ್ ಬಿರಾದರ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ಯಶಸ್ವಿಯಾಗಿ ನಡೆಸಿದವರು ಕುಮಾರಿ ವೈಷ್ಣವಿ ಶ್ರೀಧರ್. ಕೂಟದ ವಾರ್ಷಿಕ ಸಾಮಾನ್ಯ ಸಭೆಯನ್ನು ಸಹ ಈ ಸಂದರ್ಭದಲ್ಲಿ ನಡೆಸಲಾಯಿತು. ನ್ಯೂಜಿಲೆಂಡ್ ಮತ್ತು ಭಾರತದ ರಾಷ್ಟ್ರಗೀತೆಗಳು, ಕರ್ನಾಟಕ ನಾಡಗೀತೆಗಳನ್ನು ಹಾಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications