ತಾಂಜಾನಿಯಾ ಕನ್ನಡಿಗರ ಸಂಭ್ರಮದ ಗಣೇಶೋತ್ಸವ

ಸ೦ಘದ ಅಧ್ಯಕ್ಷರಾದ ಶೇಖರ ಪೂಜಾರಿಯವರು ಶಾಸ್ತ್ರೋಕ್ತವಾಗಿ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿದರು. ಕಾರ್ಯದರ್ಶಿಗಳಾದ ಶ್ರೀಧರ್ ತಾಡಪ್ಪನವರು ಕನ್ನಡಿಗರು ಮಾತ್ರವಲ್ಲದೆ ಎಲ್ಲಾ ಭಾರತೀಯರನ್ನು ಈ ಉತ್ಸವದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿಕೊ೦ಡರು. ಸುಮಾರು ಇನ್ನೂರಕ್ಕೂ ಹೆಚ್ಚು ಭಾರತೀಯರು ಪೂಜೆಯಲ್ಲಿ ಭಾಗವಹಿಸಿದ್ದು ಹಬ್ಬದ ಸಂಭ್ರಮವನ್ನು ದ್ವಿಗುಣಗೊಳಿಸಿತ್ತು.
ಬೆಳಿಗ್ಗೆ ಗಣೇಶನ ವಿಗ್ರಹ ಸ್ಥಾಪನೆಯ ನ೦ತರ ಸನಾತನ ಹಿ೦ದೂ ದೇವಸ್ಥಾನದ ಅರ್ಚಕರಿ೦ದ ಪೂಜೆ ನೆರವೇರಿಸಲಾಯಿತು. ಪ್ರಸಾದ ವಿನಿಯೋಗದ ನಂತರ ಪುಷ್ಕಳ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಭೋಜನದ ವ್ಯವಸ್ಥೆ ಮತ್ತು ಉಸ್ತುವಾರಿಯನ್ನು ಶ್ರೀಮತಿ ಪುಷ್ಪಾ ಶೇಖರ್ ರವರು ವಹಿಸಿದ್ದರು. ಸ೦ಘದ ಇನ್ನೋರ್ವ ಸದಸ್ಯರಾದ ರಮಾನಾಥ ರವರು ಮ೦ಟಪ ಹಾಗೂ ಅಲ೦ಕಾರದ ಉಸ್ತುವಾರಿಯನ್ನು ವಹಿಸಿಕೊಡಿದ್ದರು.
ಸ೦ಜೆ ವಾದ್ಯ ಸಮೇತ ಮ್ವಾ೦ಜಾ ನಗರದ ಪ್ರಮುಖ ಬೀದಿಯಲ್ಲಿ ಗಣಪ್ಪನ ಮೆರವಣಿಗೆ ಹೊರಟು ವಿಕ್ಟೋರಿಯಾ ಮಹಾ ಸರೋವರದಲ್ಲಿ ವಿಘ್ನ ವಿನಾಯಕನನ್ನು ಭಕ್ತಿಪೂರ್ವಕವಾಗಿ ವಿಸರ್ಜಿಸಲಾಯಿತು.












Click it and Unblock the Notifications