ಆಕ್ಲೆಂಡಿನಲ್ಲಿ ಸಂಗೀತಾ ಕಟ್ಟಿ ಸಂಗೀತ ರಸದೌತಣ

ತಮ್ಮ ಕಾರ್ಯಕ್ರಮವನ್ನು ಬೆಳಗಿನ ರಾಗವಾದ ಗುಣಕಲಿಯಿಂದ ಪ್ರಾರಂಭಿಸಿ ಬಿಭಾಸ, ನಂದ, ಬ್ರಿಂದಾವನಿ ಸಾರಂಗ, ಮಾಲಕಂಸ ಹಾಗು ತೋಡಿ ರಾಗಗಳಲ್ಲಿ ದಾಸರ ಪದಗಳಾದ ರಾಮ ನಾಮ ಪಾಯಸಕ್ಕೆ ಕೃಶ್ಣನಾಮ ಸಕ್ಕರೆ, ಒಂದೆ ನಮನ ಸಾಲದೇ, ಆರಿಗೆ ನಮನಾದೆ, ಶರಣರ ವಚನಗಳಾದ ಮಾಡಿ ಮಾಡಿ ಕೆಟ್ಟರು, ಉಳ್ಳವರು ಶಿವಾಲಯವ ಮಾಡುವರು, ಶಿಶುನಾಳ ಶರೀಫರ ಎಲ್ಲಿ ಕಾಣೆ ಎಲ್ಲಿ ಕಾಣೆ, ಭಾವ ಗೀತೆಗಳಾದ ನಾಕು ತಂತಿ, ಶ್ರಾವಣ ಬಂತು ಶ್ರಾವಣ ಎಂದು ಕನ್ನಡ ಸಾಹಿತ್ಯವನ್ನು ಸಂಗೀತಾ ಭಾವಪೂರ್ಣವಾಗಿ ಹಾಡಿದರು.
ಯಮನ್, ಪಹಾಡಿ ಮತ್ತು ಭೈರವಿ ರಾಗಗಳನ್ನು ಪರಿಚಯಿಸುತ್ತ ಚಲನಚಿತ್ರಗಳ ಹಾಡುಗಳನ್ನು ಹಾಡಿ ಸಭಿಕರನ್ನು ತಮ್ಮ ಕಾರ್ಯಕ್ರಮದಲ್ಲಿ ತಲ್ಲೀನರಾಗುವಂತೆ ಮಾಡಿದರಲ್ಲದೇ ಕನ್ನಡ ಕೂಟದ ಸದಸ್ಯರಾದ ಆಶಿಶ್ ಮತ್ತು ಚೈತ್ರಾ ಅವರನ್ನು ತಮ್ಮೊಂದಿಗೆ ಹಾಡಲು ಪ್ರೆರೇಪಿಸಿದರು. ಕರ್ನಾಟಕದ ತಬಲಾ ನಿಪುಣರಾದ ಉದಯರಾಜ ಕರ್ಪುರ ಅವರು ಸಂಗೀತಾ ಕಟ್ಟಿಯವರಿಗೆ ಸಹಕಾರ ನೀಡಿದರು. ವಿರಾಮದ ನಂತರ ಉದಯರಾಜ್ ಕರ್ಪುರ ಅವರು ಶ್ರೋತೃಗಳ ಕೋರಿಕೆಯ ಮೇರೆಗೆ ತಬಲಾ ಸೋಲೊ ವಾದದ ತುಕಡಾ ಚಕ್ರಧಾರಗಳ ಸವಿಯನ್ನು ನೀಡಿ ರಸಿಕರನ್ನು ರಂಜಿಸಿದರು.
ಆಕ್ಲೆಂಡ್ ದ ಕಲಾ ನಿಪುಣರಾದ ಅರುಣ ಕೊತ್ಕರ ಅವರು ಹಾರ್ಮೋನಿಯಮ್, ವಿದ್ವಾನ್ ದಿವಾಕರ್ ಅವರು ವೀಣಾ ಮತ್ತು ಕೀಬೊರ್ಡ್, ಸತ್ಯಕುಮಾರ ಕಟ್ಟೆ ಅವರು ತಾಳದೊಂದಿಗೆ ಸಾಥಿ ನೀಡಿದರು. ಸಂಗೀತಾ ಕಟ್ಟಿ ಕುಲ್ಕರ್ಣಿಯವರು ತಮ್ಮ ಕಾರ್ಯಕ್ರಮವನ್ನು ಭೈರವಿ ರಾಗದ ಕಾಯೋ ಕರುಣಾನಿಧೆ ಹಾಡಿನ ಮೂಲಕ ನ್ಯೂಜಿಲೇಂಡ್ ಕನ್ನಡ ಕೂಟದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ದಿವಂಗತ ಪ್ರಾಚಾರ್ಯ ವಾಮನಮೂರ್ತಿಯವರಿಗೆ ಭಾವಪೂರ್ಣವಾಗಿ ಅರ್ಪಿಸಿದರು.
ನ್ಯೂಜಿಲೇಂಡ್ ಕನ್ನಡ ಕೂಟದ ಅಧ್ಯಕ್ಷ ರವಿಶಂಕರ್ ಅವರು ಅತಿಥಿಗಳಾದ ಸಂಗೀತಾ ಕಟ್ಟಿ ಕುಲ್ಕರ್ಣಿ ಹಾಗು ಉದಯರಾಜ್ ಕರ್ಪುರ್ ಅವರನ್ನು ಸ್ವಾಗತಿಸಿ ಪರಿಚಯಿಸಿದರು. ರತ್ನಾ ವಾಮನಮೂರ್ತಿ ಅವರು ಸಂಗೀತಾ ಅವರಿಗೆ ಸನ್ಮಾನ ಮಾಡಿದರು. ಸಂಸ್ಥಾಪಕ ಕಾರ್ಯದರ್ಶಿ ಡಾ. ಲಿಂಗಪ್ಪ ಕಲ್ಬುರ್ಗಿ ಅವರು ಉದಯರಾಜ್ ಕರ್ಪುರ್ ಅವರನ್ನು ಸನ್ಮಾನಿಸಿದರು.
ಎಲ್ಲಮ್ಮನ ಜೋಗತಿಯ ಉಧೋ ಉಧೋ ತತ್ತ್ವದ ಮೂಲಕ ನಮ್ಮಲ್ಲಿ ಭಕ್ತಿಯ ಕಂಪನಗಳನ್ನೆಬ್ಬಿಸಿ, ನಾಕುತಂತಿಯಿಂದ ನಮ್ಮ ಭಾವನೆಗಳನ್ನು ಮೀಟಿ, ಶ್ರಾವಣದ ಹಾಡಿನ ಮೂಲಕ ನಮ್ಮ ಭಾವನೆಗಳನ್ನು ಬೆಚ್ಚಗಾಗಿಸಿ ತಮ್ಮ ಸ್ವರ ವೈವಿಧ್ಯತೆ, ಗಾನ ವೈವಿಧ್ಯತೆಯಿಂದ ರಾಗಗಳನ್ನು ಪರಿಚಯಿಸುತ್ತ ಶಾಸ್ತ್ರೀಯ ಸಂಗೀತದ ಜೊತೆಗೆ ಸುಗಮ ಸಂಗೀತ, ಜಾನಪದ ಸೊಗಡಿನೊಂದಿಗೆ ಚಲನಚಿತ್ರದ ಮೆಲುಕು ಹಾಕುವಂತಹ ಗೀತೆಗಳ ರಸದೌತಣವನ್ನು ಆಕ್ಲೆಂಡಿನ ರಸಿಕರಿಗೆ ಉಣಬಡಿಸಿದ ಸಂಗೀತಾ ಕಟ್ಟಿ ಕುಲ್ಕರ್ಣಿ ಹಾಗು ಉದಯರಾಜ್ ಕರ್ಪುರ್ ಅವರನ್ನು ಪ್ರಕಾಶ್ ವಂದಿಸಿದರು. ಈ ಕಾರ್ಯಕ್ರಮದ ವ್ಯವಸ್ಥೆ ಮಾಡಿದ ಏಸಿಯಾ ಪೆಸೆಫಿಕ್ಕನ್ನಡ ಒಕ್ಕೂಟದ ಸೂತ್ರಧಾರರಾದ ಓಂಕಾರ ಸ್ವಾಮಿ, ಮತ್ತು ಈ ಕಾರ್ಯಕ್ರಮವನ್ನು ಪ್ರಯೋಜಿಸಿದ Premier Properties Mysore ಅವರಿಗೆ ನ್ಯೂಜಿಲೇಂಡ್ ಕನ್ನಡ ಕೂಟದ ವತಿಯಿಂದ ಆಭಾರ ಮನ್ನಣೆ ಮಾಡಿಲಾಯಿತು.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications