ಆಕ್ಲೆಂಡಿನಲ್ಲಿ ಕನ್ನಡದ ಪುಟಾಣಿ ಹಕ್ಕಿಗಳ ಚಿಲಿಪಿಲಿ

ಮೊದಲ ಹತ್ತು ವರ್ಷ ಕನ್ನಡ ಕೂಟದ ಅಧ್ಯಕ್ಷರಾಗಿದ್ದ ದಿ. ಎಂ.ಕೆ.ವಾಮನ ಮೂರ್ತಿಯವರ ಸ್ಮರಣಾರ್ಥ ದಿನಾಂಕ 13ನೇ ಜೂನ್ 2009ರ ಶನಿವಾರದಂದು ಆಕ್ಲೆಂಡಿನ ಮೌಂಟ್ ರಾಸ್ಕಿಲ್ ಸಮರ ಸ್ಮಾರಕ ಭವನದಲ್ಲಿ ಮಕ್ಕಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವರ್ಷದ ಯುಗಾದಿ ಹಬ್ಬದ ಕಾರ್ಯಕ್ರಮ ವಾಮನ ಮೂರ್ತಿಯವರ ನಿಧನದ ಕಾರಣ ಮುಂದೂಡಲಾಗಿತ್ತು.
ಕು.ವರ್ಷಾ ಪೈ ಅವರಿಂದ ಪ್ರಾಥನೆಯ ನಂತರ ಕೂಟದ ಕಾರ್ಯದರ್ಶಿ ಪ್ರಕಾಶ್ ಬಿರಾದರ್ ಅವರು ಎಲ್ಲರನ್ನು ಸ್ವಾಗತಿಸಿದರು. ಆ ಮೇಲೆ ನಡೆದ ಕರ್ನಾಟಕ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಮೂವತ್ತು ಮಕ್ಕಳೂ ವೇದಿಕೆಯ ಮೇಲೆ ಉಪಸ್ಥಿತರಾಗಿ ಎಲ್ಲ ಪ್ರಶ್ನೆಗಳಿಗೂ ತಡಬಡಿಸದೆ ಉತ್ತರಿಸಿದ್ದು ವಿಶೇಷವಾಗಿತ್ತು. ಜ್ಞಾನಪೀಠ ಪ್ರಶಸ್ತಿ ವಿಜೇತರು, ಭಾರತ ರತ್ನ ಪ್ರಶಸ್ತಿ ಗಳಿಸಿದವರು, ಸಿನೆಮಾ, ಸಂಗೀತ, ಸಾಹಿತ್ಯ, ರಾಜಕೀಯ, ಕ್ರಿಕೆಟ್ ಹೀಗೆ ಹಲವು ಹತ್ತು ಬಗೆಯ ವಿಷಯಗಳನ್ನೊಳಗೊಂಡ ರಸಪ್ರಶ್ನೆಗಳಿಗೆ ಮಕ್ಕಳು ಉತ್ತರಿಸುತ್ತಿದ್ದಾಗ ಸಭಿಕರಷ್ಟೇ ಅಲ್ಲ ಕಾರ್ಯಕ್ರಮದ ನಿರ್ಣಾಯಕರಾಗಿದ್ದ ಹೊ.ನಾ. ರಾಮಚಂದ್ರ ಮತ್ತು ದತ್ತಾತ್ರೇಯ ಮಳವಳ್ಳಿ ಅವರುಗಳೂ ಚಪ್ಪಾಳೆ ತಟ್ಟುತ್ತಿದ್ದರು. ಅವಧಿ ಮುಗಿದು ಯಾರೂ ಸೋಲುವ ಸೂಚನೆ ಸಿಗದಿದ್ದಾಗ ಟೈ ಆಯಿತೆಂದು ಘೋಷಿಸಿ ಎಲ್ಲರಿಗೂ ಬಹುಮಾನ ನೀಡಲು ನಿರ್ಧರಿಸಲಾಯಿತು. ಸತ್ಯ ಕುಮಾರ್ ಕಟ್ಟೆ ಮತ್ತು ಅವಿನಾಶ್ ಅವರ ನೆರವಿನಿಂದ ಪ್ರಕಾಶ್ ರಾಜಾರಾವ್ ರಸ ಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.

ನಾಲ್ಕು ವರ್ಷದ ಕಿಶೋರಿಯರಾದ ಸಂಜನಾ [ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ] ತನ್ವಿ [ಸರ್ವ ಸಮರ್ಪಣ] ನಿಶ್ಚಲ [ಕ್ಷೀರಾಬ್ಧಿ ನಯನ ನಾರಾಯಣ] ಅವರುಗಳ ಗಾಯನ ಅದ್ಭುತವಾಗಿತ್ತು. ಪೂಜಾ ಭಗತ್ ಅವರ ಚಲನ ಚಿತ್ರಗೀತೆಗಳ ರೀಮಿಕ್ಸ್ ನೃತ್ಯ ಮತ್ತು ವರ್ಷಾ ಪೈ ಹಾಗೂ ಪೂಜಾ ಭಗತ್ ಅವರ ಮುಸ್ಸಂಜೆ ಮಾತು ಚಿತ್ರದ ಹಾಡಿಗೆ ಜೋಡಿ ನೃತ್ಯಗಳು ಮನೋಹರವಾಗಿದ್ದವು. 'ಕೆರೆ ಹಳ್ಳ ಭಾವಿ' ಎಂಬ ವಚನಕ್ಕೆ ಕು. ಸ್ನೇಹಾ ಸಾಲಿಮಠ್ ಮತ್ತು ಸ್ನೇಹಾ ಮಲಕಪ್ಪ ಅವರು ಸಂಯೋಜಿಸಿದ್ದ ನೃತ್ಯ ರೂಪಕ ಭಾಗವಹಿಸಿದ್ದ ಆರು ಬಾಲ ಕಲಾವಿದರ ಪರಿಶ್ರಮದಿಂದ ಸುಂದರವಾಗಿ ಮೂಡಿಬಂತು.
ಕನ್ನಡ ಕೂಟದ ಅಧ್ಯಕ್ಷ ರವಿ ಶಂಕರ್ ರಾವ್ ಕಾರ್ಯಕ್ರಮ ನಡೆಸಲು ನೆರವಾದ ಎಲ್ಲರನ್ನು ಅಭಿನಂದಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯ ಬೆಂಗಳೂರು ಪ್ರಭಾಕರ ಅವರು ವಂದನಾರ್ಪಣೆ ಮಾಡಿದರು. ನ್ಯೂಜಿಲೆಂಡ್ ಮತ್ತು ಭಾರತದ ರಾಷ್ಟ್ರಗೀತೆಗಳು ಹಾಗೂ ಕರ್ನಾಟಕ ನಾಡಗೀತೆಗಳನ್ನು ಹಾಡುವುದರೊಂದಿಗೆ ಮುಕ್ತಾಯವಾದ ಕಾರ್ಯಕ್ರಮ ದಿ. ವಾಮನ ಮೂರ್ತಿಯವರಿಗೆ ಸೂಕ್ತ ಶ್ರದ್ಧಾಂಜಲಿಯೆನಿಸಿತು.
ವಿ.ಸೂ. : ಜುಲೈ 4, 2009ರ ಶನಿವಾರ ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿಯವರ ಗಾಯನ ಕಾರ್ಯಕ್ರಮ ಸ್ವರ ಮಾಧುರ್ಯ ಅಕ್ಲೆಂಡಿನ ಮೌಂಟ್ ಈಡನ್ ವಾರ್ ಮೆಮೊರಿಯಲ್ ಹಾಲ್ ನಲ್ಲಿ ಬೆಳಿಗ್ಗೆ 10.00ರಿಂದ ಮಧ್ಯಾನ್ಹ 2.00 ಗಂಟೆಯವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ನ್ಯೂಜಿಲೆಂಡ್ ಕನ್ನಡ ಕೂಟದ ಅಧ್ಯಕ್ಷ ರವಿಶಂಕರ್ ರಾವ್ ಅಥವಾ ಕಾರ್ಯದರ್ಶಿ ಪ್ರಕಾಶ್ ಬಿರಾದರ್ ಅವರನ್ನು ಸಂಪರ್ಕಿಸಬೇಕೆಂದು ಕೋರಲಾಗಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications