ಸಂತಸ ಸಂಭ್ರಮದ 'ಮಲ್ಲಿಗೆ' ಯುಗಾದಿ

ಸರಸ, ವಿನೋದಗಳಿಂದ ಇಡೀ ಕಾರ್ಯಕ್ರಮವನ್ನು ನಿರೂಪಿಸಿ ಅಂದಗಾಣಿಸಿದವರು ಜಯಶ್ರೀ ಮತ್ತು ಪ್ರಕಾಶ್ ಮೂರ್ತಿ. ಲಕ್ಷ್ಮಣ್ ಮಂಜುನಾಥ್ ವಕ್ರತುಂಡ ಮಾಹಾಕಾಯನಿಗೆ ವಂದಿಸಿದ ಮೇಲೆ, ಆದಿತ್ಯ ಮತ್ತು ಅರ್ಚನಾ ಮೂರ್ತಿಯವರು ಗಂ ಗಣಪತೇ ಎಂದು ಹಾಡಿದರು. ನಂತರ ಇಲ್ಲಿನ ಅರಳು ಮಲ್ಲಿಗೆ ಕನ್ನಡ ಶಾಲೆಯ ಮಕ್ಕಳಿಂದ, ರೂಪ ಶ್ರೀನಿವಾಸ್ ನಿರ್ದೇಶನದಲ್ಲಿ ಹಾಡು ನೃತ್ಯಗಳ ಸಂಭ್ರಮ.
ಶ್ರೀನಾಥ್ ಬೆಲ್ಡೋನಾ ಅವರ ಸ್ವಾಗತ ಭಾಷಣಕ್ಕೆ ಪೂರಕವಾಗಿ, ರಮೇಶ್ ಮೇಲ್ಕೋಟೆ ಬರೆದ 'ಧರಣಿ ಮಂಡಲ ಮಧ್ಯದೊಳಗೆ ಮಾದರಿ ಸ್ವಾಗತ ಗೀತೆ, ಮಾಹಿತಿ ಮತ್ತು ಮನರಂಜನೆಗಳ ಸಂಗಮವಾಗಿತ್ತು. ಆನಂದ ಪ್ರಾಡಕ್ಟ್ಸ್ಗಳನ್ನು ಜನರಿಗೆ ಪರಿಚಯಿಸುವ ನೃತ್ಯ ಜಯಂತಿ ಶಾಸ್ತ್ರಿ ಮತ್ತು ಕಲ್ಪನಾ ಮೂರ್ತಿಯವರ ನಿರ್ದೇಶನದಲ್ಲಿ ಚೆನ್ನಾಗಿ ಮೂಡಿಬಂತು. ಸುಮನಾ ಹೆಗ್ಡೆ ಅವರ ತಯಾರಿಯಲ್ಲಿ ಅನೇಕ ಮಕ್ಕಳು ನಡೆಸಿಕೊಟ್ಟ ಆರ್ಕೆಸ್ಟ್ರಾ ಮನಮುದಗೊಳಿಸಿತು. ಪಿಟೀಲು ಮತ್ತು ಮೃದಂಗದಲ್ಲಿಯೂ ಮಕ್ಕಳೇ ಜೊತೆಯಾಗಿದ್ದು ವಿಶೇಷ.
ಜೋಗಿ ಜೋಗಿ, ರಾಜಾ ಮುಂತಾದ ಹಾಡುಗಳಿಗೆ ಥಳುಕು ಬಳುಕಿನ ಉಡಿಗೆಯಲ್ಲಿನ ಮೂರು ಪುಟ್ಟ ಪೋರಿಯರು ಕುಣಿದದ್ದು ಪ್ರೇಕ್ಷಕರ ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಿದರು. ಮಕ್ಕಳನ್ನು ತಯಾರುಗೊಳಿಸಿದವರು ಶಿಲ್ಪಾ ನಾಗರಾಜ್. ನಂತರ ಅಖಿಲ ರಾವ್ ಅವರ ಶಿಷ್ಯೆಯರಿಂದ ಮೋಹಕ ಕಥಕ್ ನೃತ್ಯ. ಸಂಧ್ಯಾ ಹೊನ್ನವಳ್ಳಿ ಅವರ ಉತ್ತಮ ತರಬೇತಿಯಲ್ಲಿ ಮೂಡಿ ಬಂದ ಚಿಕ್ಕ ಚೊಕ್ಕ ನಾಟಕ "ದೇವರು ಏನು ಮಾಡಿದ ಗೊತ್ತಾ?" ಎಲ್ಲಾ ಪುಟಾಣಿಗಳೂ ಅಚ್ಚುಕಟ್ಟಾಗಿ ಸ್ವಚ್ಛ ಕನ್ನಡದಲ್ಲಿ ಮಾತಾಡಿ ಎಲ್ಲರ ಮನ ಗೆದ್ದರು.
ಸುಲತಾ ತಲಗೇರಿಯವರು ಇಲ್ಲಿನ ಉತ್ಸಾಹೀ ವನಿತೆಯರನ್ನು ತರಬೇತುಗೊಳಿಸಿ ಬಾರಯ್ಯ ಬಾರಯ್ಯ ಎಂಬ ನೃತ್ಯ ಪ್ರಸ್ತುತಪಡಿಸಿದರು. ಶ್ರೀವತ್ಸ ರಾಮನಾಥನ್ ನಿರ್ದೇಶನದ ಲಕ್ಷ್ಮಣನ ರಾಮಾಯಣ ನಾಟಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು. ಒಬ್ಬೊಬ್ಬ ಪಾತ್ರಧಾರಿಯೂ ಒಂದೊಂದು ಶೈಲಿಯಲ್ಲಿ ಮಾತನಾಡಿದ್ದು ಬಹಳ ವಿನೋದವಾಗಿತ್ತು.
ಪುಟಾಣಿ ಖುಷಿ ಮತ್ತು ನವ್ಯ ಜೊತೆ ಎಲ್ಲರೂ ಜನಗಣಮನ ಎಂದು ಭಾರತಕ್ಕೆ ಜಯಕಾರ ಹಾಕಿದರು. ನಂತರ ವೇದಿಕೆಯೇರಿದ ಮತ್ತಷ್ಟು ಮಕ್ಕಳು ನಕ್ಷತ್ರ ಖಚಿತ ಅಮೆರಿಕಾ ಧ್ವಜಕ್ಕೆ ರಾಷ್ಟ್ರಗೀತೆಯೊಂದಿಗೆ ವಂದಿಸಿದರು. ನಂತರ ಸ್ವಾದಿಷ್ಟ ಭೂರಿ ಭೋಜನ ಎಲ್ಲರನ್ನೂ ತೃಪ್ತಿಪಡಿಸಿತು. ಈ ಕಾರ್ಯಕ್ರಮದ ಚಿತ್ರಪಟಗಳನ್ನು ಮೂರ್ತಿಯವರ ಕ್ಯಾಮರಾ ಕಣ್ಣಿನಿಂದ ಇಲ್ಲಿ ನೋಡಬಹುದು.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications