ಡಿ.14 ರಂದು ಕಾವೇರಿ ಕಾರ್ಯಕಾರಿ ಸಮಿತಿ ಚುನಾವಣೆ
ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ಕನ್ನಡದ ಕಂಪು ಚೆಲ್ಲುತ್ತಿರುವ ಕಾವೇರಿ ಕನ್ನಡ ಸಂಘ, ತನ್ನ 2003ನೇ ವರ್ಷದ ಕಾರ್ಯಕಾರೀ ಸಮಿತಿಯ ಚುನಾವಣೆಗೆ ನಾಮ ಪತ್ರಗಳನ್ನು ಆಹ್ವಾನಿಸಿದೆ. ಡಿಸೆಂಬರ್ 14 ರಂದು ನಡೆಯುವ ಸರ್ವ ಸದಸ್ಯರ ಸಭೆಯ ಸಂದರ್ಭದಲ್ಲಿ ಗುಪ್ತ ಮತದಾನದ ಮೂಲಕ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ನಡೆಯಲಿದೆ.
ಕಾರ್ಯಕಾರಿ
ಸಮಿತಿಯ
ಸ್ಥಾನಗಳು
:
ಅಧ್ಯಕ್ಷರು
ಮತ್ತು
ಉಪಾಧ್ಯಕ್ಷರು
ಕಾರ್ಯದರ್ಶಿ
ಮತ್ತು
ಸಹಕಾರ್ಯದರ್ಶಿ
ಖಜಾಂಚಿ
ಮತ್ತು
ಸಹ
ಖಜಾಂಚಿ
ಕಾರ್ಯಕಾರೀ
ಸಮಿತಿ
ಸದಸ್ಯ
ಸ್ಥಾನಗಳು-
5
ಯುವ
ಕಾರ್ಯಕಾರೀ
ಸಮಿತಿಯ
ಸ್ಥಾನಗಳು-
4
ನೂತನ ಕಾರ್ಯಕಾರೀ ಸಮಿತಿಯ ಅಧಿಕಾರಾವಧಿ ಜನವರಿ 1, 2003ರಿಂದ ಡಿಸೆಂಬರ್ 31ರವರೆಗೆ ಇರುತ್ತದೆ.
ಕಾವೇರಿ ಸಂಘಟನೆಯ ಮಾಜಿ ಅಧ್ಯಕ್ಷರಾದ ಕೃಷ್ಣ ಮೂರ್ತಿ, ಭಾರತಿ ಶೆಟ್ಟಿ ಮತ್ತು ನಾಗಶಂಕರ್ ಚಂದ್ರಶೇಖರ್ ಈ ಬಾರಿ ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುವರು.
ನಾಮಪತ್ರ ಸಲ್ಲಿಸಲು ವಿಳಾಸ : [email protected]
ಡಿಸೆಂಬರ್ 1, 2003ರ ಸಂಜೆ ಐದು ಗಂಟೆಯಾಳಗೆ ನಾಮ ಪತ್ರ ಚುನಾವಣಾಧಿಕಾರಿಗಳ ಕೈ ಸೇರಬೇಕು. ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ- ಡಿಸೆಂಬರ್ 8.
ಕಾವೇರಿ ಕಾರ್ಯಕಾರಿ ಸಮಿತಿ ಸಭೆ ನಡೆಯುವ ಸ್ಥಳ - ಶಿವ ವಿಷ್ಣು ದೇವಾಲಯದ ಸಭಾಂಗಣದಿನಾಂಕ - ಡಿಸೆಂಬರ್ 14ರ ಭಾನುವಾರ, (ಸಂಜೆ 5ರಿಂದ 8)
ಪ್ರವೇಶ ಶುಲ್ಕವಿಲ್ಲ. ಸದಸ್ಯತ್ವ ಶುಲ್ಕ ಬಾಕಿ ಉಳಿಸಿಕೊಳ್ಳದೇ ಇರುವ ಎಲ್ಲ ಸದಸ್ಯರಿಗೆ ಮತದಾನದ ಹಕ್ಕು ಇರುತ್ತದೆ.
(ಇನ್ಫೋ ವಾರ್ತೆ)