ಗಾಂಧಿ ಪ್ರತಿಮೆಗೆ ಹಾನಿ ಮಾಡಿದವರು ಕೊಲೆಗಡುಕರು: ಟ್ರಂಪ್
ವಾಷಿಂಗ್ಟನ್ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಹಾನಿ ಮಾಡಿದವರು ಕೊಲೆಗಡುಕರು ಅಂತಾ ಅಮೆರಿಕ ಅಧ್ಯಕ್ಷ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಪ್ಪು ವರ್ಣೀಯ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿದ್ದವರ ವಿರುದ್ಧ ಕಿಡಿಕಾರುವಾಗ, ಗಾಂಧಿ ಪ್ರತಿಮೆ ಹಾಳು ಮಾಡಿದವರ ವಿರುದ್ಧ ಟ್ರಂಪ್ ಈ ರೀತಿ ಆಕ್ರೋಶ ಹೊರಹಾಕಿದ್ದಾರೆ. ಟ್ರಂಪ್ 2ನೇ ಅವಧಿಗೆ ಅಮೆರಿಕ ಅಧ್ಯಕ್ಷ ಪಟ್ಟಕ್ಕೇರಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಕ್ಯಾಂಪೇನ್ನಲ್ಲಿ ಟ್ರಂಪ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಹೀಗೆ ಮಿನ್ನೆಸೊಟಾ ಪ್ರಾಂತ್ಯದಲ್ಲಿ ನಿಗದಿಯಾಗಿದ್ದ ಚುನಾವಣಾ ರ್ಯಾಲಿ ಉದ್ದೇಶಿಸಿ ಟ್ರಂಪ್ ಮಾತನಾಡಿದರು, ಈ ಸಂದರ್ಭದಲ್ಲಿ ಟ್ರಂಪ್ ಫ್ಲಾಯ್ಡ್ ಹತ್ಯೆ ವಿಚಾರ ಪ್ರಸ್ತಾಪಿಸಿದರು. ಜಾರ್ಜ್ ಫ್ಲಾಯ್ಡ್ ಹತ್ಯೆ ಖಂಡಿಸಿ ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆಯನ್ನೇ ತಮ್ಮ ಭಾಷಣದ ವಿಷಯವಾಗಿಸಿಕೊಂಡ ಟ್ರಂಪ್, ಉದ್ರಿಕ್ತರ ಗುಂಪು ಅಬ್ರಾಹಂ ಲಿಂಕನ್ ಪ್ರತಿಮೆ ಕೆಡವಲು ಮುಂದಾಯಿತು.
ಆಗ ತಾಳ್ಮೆಯಿಂದ ಇರಿ ಅಂತಾ ನಾನು ಮನವಿ ಮಾಡಿದ್ದೆ. ಆದರೆ ಅದಕ್ಕೆ ಕಿವಿಗೊಡದೇ ಥಾಮಸ್ ಜೆಫರ್ಸನ್ ಸೇರಿದಂತೆ ಎಲ್ಲರ ಪ್ರತಿಮೆಗಳನ್ನೂ ಉರುಳಿಸಿದರು ಎಂದರು. ಇಷ್ಟಕ್ಕೇ ಸುಮ್ಮನಾಗದೆ ಅವರೆಲ್ಲರೂ ವಾಷಿಂಗ್ಟನ್ನ ಮಹಾತ್ಮ ಗಾಂಧಿ ಪ್ರತಿಮೆಗೂ ಹಾನಿ ಮಾಡಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದವರೆಲ್ಲಾ ಕೊಲೆಗಡುಕರು ಅಂತಾ ಟ್ರಂಪ್ ಆಕ್ರೋಶ ಹೊರಹಾಕಿದ್ದಾರೆ.

ಮಹಾತ್ಮ ಗಾಂಧೀಜಿ ಶಾಂತಿದೂತ
ತಮ್ಮ ಭಾಷಣದುದ್ದಕ್ಕೂ ಗಾಂಧೀಜಿಯನ್ನು ಹೊಗಳಿದ ಟ್ರಂಪ್, ಗಾಂಧೀಜಿ ಶಾಂತಿದೂತ. ಜೀವನದುದ್ದಕ್ಕೂ ಹಿಂಸಾಚಾರ ವಿರೋಧಿಸಲೇ ಬಂದಿದ್ದರು. ಆದರೆ ಅಂತಹ ಮಹಾತ್ಮನ ಪ್ರತಿಮೆಯನ್ನೂ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ಪ್ರತಿಭಟನಾಕಾರರಿಗೆ ಏನು ಮಾಡುತ್ತಿದ್ದೇವೆ ಎಂಬುದರ ಅರಿವು ಇರಲಿಲ್ಲ ಎನ್ನುವ ಮೂಲಕ ಅಮೆರಿಕ ಚುನಾವಣಾ ಅಖಾಡದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಇಷ್ಟು ದಿನ ಬರೀ ವಿವಾದಗಳಿಂದ ಸದ್ದು ಮಾಡಿದ್ದ ಟ್ರಂಪ್ ಗಾಂಧೀಜಿ ವಿಷಯ ಪ್ರಸ್ತಾಪಿಸುವ ಮೂಲಕ ಪ್ರಬುದ್ಧ ಮತದಾರರ ವೋಟ್ ಬ್ಯಾಂಕ್ ಸೆಳೆಯುವತ್ತ ದಾಪುಗಾಲು ಇಟ್ಟಿದ್ದಾರೆ.

ಭಾರತೀಯರ ಮತ ಸೆಳೆಯುವ ತಂತ್ರ..?
ನವೆಂಬರ್ 3ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ನಡೆಯಲಿರುವ ಮತದಾನದಲ್ಲಿ ಭಾರತೀಯರ ಮತಗಳೇ ನಿರ್ಣಾಯಕ. ಹೀಗಾಗಿ ಟ್ರಂಪ್ ಭಾರತೀಯರ ಮನ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಡೆಮಾಕ್ರಟಿಕ್ ಪಕ್ಷ ತನ್ನ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಆಯ್ಕೆ ಮಾಡಿದೆ. ಇದು ಟ್ರಂಪ್ ಎದುರಾಳಿ ಬಿಡೆನ್ ಪರವಾಗಿ ಭಾರತೀಯರ ಮತಗಳನ್ನು ಒಗ್ಗೂಡಿಸುವ ಜೊತೆಗೆ, ಆಫ್ರಿಕನ್-ಅಮೆರಿಕನ್ ಮತಗಳನ್ನೂ ಕೊಳ್ಳೆಹೊಡೆಯುವ ಮುನ್ಸೂಚನೆ ನೀಡಿದೆ. ಇಂತಹ ಹೊತ್ತಲ್ಲೇ ಭಾರತೀಯರ ಗಮನ ಸೆಳೆಯಲು ಟ್ರಂಪ್ ಗಾಂಧೀಜಿ ವಿಷಯ ಪ್ರಸ್ತಾಪಿಸಿದ್ದಾರೆ ಎಂಬುದು ವಿಪಕ್ಷ ನಾಯಕರ ಆರೋಪ.

ಫ್ಲಾಯ್ಡ್ ಹತ್ಯೆ ಕಿಚ್ಚು ಹೊತ್ತಿಸಿತ್ತು
ತಣ್ಣಗಿದ್ದ ಅಮೆರಿಕದಲ್ಲಿ ಜನಾಂಗೀಯ ಸಂಘರ್ಷದ ಬಿರುಗಾಳಿ ಎಬ್ಬಿಸಿದ್ದು ಜಾರ್ಜ್ ಫ್ಲಾಯ್ಡ್ ಹತ್ಯೆ. ಮೇ 25ರಂದು ಪೊಲೀಸ್ ಅಧಿಕಾರಿಯೊಬ್ಬರು ಫ್ಲಾಯ್ಡ್ ಎಂಬಾತನ ಕುತ್ತಿಗೆ ಮೇಲೆ ಕಾಲಿಟ್ಟು, ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ಫ್ಲಾಯ್ಡ್ ಹತ್ಯೆಯ ವೀಡಿಯೋ ಇಡೀ ಅಮೆರಿಕದಲ್ಲಿ ಹಿಂಸೆಯ ಬೆಂಕಿ ಹೊತ್ತಿಸಿತ್ತು. ವರ್ಣಬೇಧ ನೀತಿ ವಿರೋಧಿಸಿ ಕರಿಯರು, ಬಿಳಿಯರು ಒಟ್ಟಾಗಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಅಡಿಬರಹದಲ್ಲಿ ಈ ಹೋರಾಟ ಈಗಲೂ ನಡೆಯುತ್ತಿದೆ. ಇದು ಅಮೆರಿಕದ ಇತಿಹಾಸದಲ್ಲೇ ಬಹುದೊಡ್ಡ ಹೋರಾಟವಾಗಿದೆ.

ಸೋತ ಜಾಗದಲ್ಲೇ ಗೆಲುವು ಹುಡುಕುತ್ತಾರಾ..?
ಟ್ರಂಪ್ ಗಾಂಧೀಜಿ ವಿಷಯ ಪ್ರಸ್ತಾಪಿಸಿರುವ ಮಿನ್ನೆಸೊಟಾ ಪ್ರಾಂತ್ಯದಲ್ಲಿ ಹಿಂದಿನ ಚುನಾವಣೆಯಲ್ಲಿ ಭಾರಿ ಹಿನ್ನಡೆ ಕಂಡಿದ್ದರು. 2016ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಈ ಪ್ರಾಂತ್ಯದಲ್ಲಿ ಟ್ರಂಪ್ 44,000ಕ್ಕೂ ಅಧಿಕ ಮತಗಳಿಂದ ಸೋತು ಸುಣ್ಣವಾಗಿದ್ದರು. ಈ ಬಾರಿ ಫ್ಲಾಯ್ಡ್ ಹತ್ಯೆ ನಂತರ ಮಿನ್ನೆಸೊಟಾ ಪ್ರಾಂತ್ಯದಲ್ಲಿ ಮತ್ತೆ ಟ್ರಂಪ್ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಆದರೆ ಡ್ಯಾಮೇಜ್ಗೆ ತೇಪೆ ಹಾಕಲು ಖುದ್ದು ಟ್ರಂಪ್ ಮಿನ್ನೆಸೊಟಾ ಪ್ರಾಂತ್ಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕ್ಯಾಂಪೇನ್ ವೇಳೆ ಅಹಿಂಸೆಯ ಪಾಠ ಮಾಡಿದ್ದಾರೆ.

ಅಮೆರಿಕದಲ್ಲಿ ನೆಮ್ಮದಿಯೇ ಇಲ್ವಾ..?
ಕೆಲ ತಿಂಗಳಿಂದ ಅಮೆರಿಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇಂತಹ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಮೊದಲೇ ಕೊರೊನಾ ಕುಲುಮೆಯಲ್ಲಿ ಬೆಂದಿರುವ ವಿಶ್ವದ ದೊಡ್ಡಣ್ಣನಿಗೆ, ಜನಾಂಗೀಯ ಸಂಘರ್ಷ ದೊಡ್ಡ ತಲೆನೋವಾಗಿದೆ. ಅದರಲ್ಲೂ ಟ್ರಂಪ್ ಆಡಳಿತ ಸಂಘರ್ಷ ಹಾಗೂ ಗಲಭೆಗಳನ್ನು ನಿಭಾಯಿಸುತ್ತಿರುವ ರೀತಿ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ಟ್ರಂಪ್ ಶಾಂತಿ ಮಂತ್ರದ ದಾಳ ಉರುಳಿಸಿದ್ದು, ಇದು ಅಧ್ಯಕ್ಷೀಯ ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications