ಮಂಗಳ ಗ್ರಹದಲ್ಲೂ 'ಫೇಮಸ್' ಆಗಬೇಕೇ? ನಾಸಾದಲ್ಲಿ ಹೆಸರು ನಮೂದಿಸಿ
ವಾಷಿಂಗ್ಟನ್, ಮೇ 22: 'ಚಂದಿರನ ಮೇಲೆ ನಿನ್ನ ಹೆಸರು ಬರೆಯುವ ಆಸೆ' ಎಂಬ ಸಾಲುಗಳನ್ನು ಗುನುಗಿ ಪ್ರೇಯಸಿಗೆ ಆಸೆ ತೋರಿಸುವ ಪ್ರೇಮಿಗಳಿಗೆ ಅಪೂರ್ವ ಅವಕಾಶವೊಂದು ಲಭಿಸಿದೆ. ಆದರೆ, ಚಂದ್ರನ ಮೇಲೆ ಸದ್ಯಕ್ಕಂತೂ ಸಾಧ್ಯವಿಲ್ಲ. ಬದಲಾಗಿ ಕೆಂಪುಗ್ರಹದ ಮೇಲೆ ನಿಮ್ಮ ಹೆಸರು ಮೂಡಿಸಬಹುದು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಮಂಗಳ ಗ್ರಹಕ್ಕೆ ಮೊದಲ ಬಾರಿಗೆ ಮಾನವರನ್ನು ಕಳಿಸುವ ಮಹತ್ವಾಕಾಂಕ್ಷಿ ಯೋಜನೆ ಕಾರ್ಯಗತಗೊಳ್ಳಲು ಇನ್ನೂ ವರ್ಷಗಳು ಬಾಕಿ ಇರುವಂತೆಯೇ ನಾಸಾ, 2020ರ ಕೆಂಪುಗ್ರಹಕ್ಕೆ ಹೋಗಲು ಹೆಸರು ಕಳುಹಿಸುವಂತೆ ಸಾರ್ವಜನಿಕರಿಗೆ ಆಹ್ವಾನ ನೀಡಿದೆ.
ಮಾರ್ಸ್ 2020 ರೋವರ್ನೊಂದಿಗೆ ಜನರು ನೀಡಿದ ಹೆಸರುಗಳು ಮೈಕ್ರೋಚಿಪ್ನಲ್ಲಿ ಬಾಹ್ಯಾಕಾಶಯಾನ ಕೈಗೊಳ್ಳಲಿದ್ದು, ಅದಕ್ಕೆ ಹೆಸರು ಪ್ರದರ್ಶಿಸುವ ಬೋರ್ಡಿಂಗ್ ಪಾಸ್ಗಳನ್ನು ನೀಡಲಾಗುತ್ತದೆ.

ಅಂಗಾರಕನ ಅಂಗಳಕ್ಕೆ ಕಾಲಿರಿಸುವ ನಾಸಾದ ಯೋಜನೆಗೆ ತಮ್ಮ ಹೆಸರು ಕಳುಹಿಸುವ ಬಯಕೆಯುಳ್ಳ ಜನರು ಅದರ ಬೋರ್ಡಿಂಗ್ ಪಾಸ್ ಪಡೆದುಕೊಳ್ಳಬಹುದು. ಅವರ ಹೆಸರುಳ್ಳ ಮೈಕ್ರೋಚಿಪ್ ರೋವರ್ಗೆ ಅಳವಡಿಕೆಯಾಗಲಿದೆ.
ಈ ರೋವರ್ 2020ರ ಜುಲೈನಲ್ಲಿ ಉಡಾವಣೆಗೊಳ್ಳುವ ಸಾಧ್ಯತೆ ಇದೆ. ಇದು 2021ರ ಫೆಬ್ರವರಿ ತಿಂಗಳಿನಲ್ಲಿ ಅಂಗಾರಕನ ಅಂಗಳಕ್ಕೆ ಇಳಿಯುವ ನಿರೀಕ್ಷೆಯಿದೆ.
Want to join me on Mars? Send your name to the surface of the Red Planet with @NASA's next rover, #Mars2020.
— Curiosity Rover (@MarsCuriosity) 21 May 2019
Click here to send your name to Mars: https://t.co/NBYLhDCjs4 pic.twitter.com/b3M7EKeary
ಸುಮಾರು 1,000 ಕೆ.ಜಿ. ತೂಕವಿರುವ ಈ ಐತಿಹಾಸಿಕ ಮಾರ್ಸ್ ಯೋಜನೆ, ಅಲ್ಲಿ ಇದ್ದಿರಬಹುದಾದ ಜೀವಿಗಳ ಆವಾಸ, ಗ್ರಹದ ವಾತಾವರಣ ಮತ್ತು ಪರಿಸರ ಪರಿಸ್ಥಿತಿಗಳಿಗೆ ಹುಡುಕಾಟ ನಡೆಸಲಿದೆ. ಜತೆಗೆ ಅಲ್ಲಿನ ಕೆಲವು ಮಾದರಿಗಳನ್ನು ಭೂಮಿಗೆ ಹೊತ್ತು ಬರಲಿದೆ. ಇದು ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವ ಯೋಜನೆಗೆ ನೆರವಾಗಲಿದೆ.
ಈಗಾಗಲೇ ಎರಡು ಮಿಲಿಯನ್ ಹೆಸರುಗಳು ನಾಸಾಕ್ಕೆ ತಲುಪಿವೆ. ಸೆಪ್ಟೆಂಬರ್ 30ರ ಒಳಗೆ ನಿಮ್ಮ ಹೆಸರನ್ನು ಕಳುಹಿಸಬೇಕು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications