ಪಾಕಿಸ್ತಾನದ ಹೆಸರೆತ್ತದೆ ಮಾತಿನಲ್ಲಿ ತಿವಿದ ಪ್ರಧಾನಿ ನರೇಂದ್ರ ಮೋದಿ
ಹ್ಯೂಸ್ಟನ್ (ಅಮೆರಿಕ), ಸೆಪ್ಟೆಂಬರ್ 22: "ನಾವಿಲ್ಲಿ ಹೊಸ ಇತಿಹಾಸ ಹಾಗೂ ಬಾಂಧವ್ಯವನ್ನು ನೋಡುತ್ತಿದ್ದೇವೆ" ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಹ್ಯೂಸ್ಟನ್ ನಲ್ಲಿ ಭಾನುವಾರ ಆಯೋಜಿಸಿದ್ದ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಭಾರತ ಹಾಗೂ ಅಮೆರಿಕ ಮಧ್ಯದ ನಂಟಿನ ಬಗ್ಗೆ ಅವರು ಮಾತನಾಡಿದರು.
ನರೇಂದ್ರ ಮೋದಿ ಅವರ ಭಾಷಣದ ಮುಖ್ಯಾಂಶ ಇಲ್ಲಿದೆ:
* ಈ ಕಾರ್ಯಕ್ರಮದ ಹೆಸರು 'ಹೌಡಿ ಮೋದಿ'. ಆದರೆ ಮೋದಿ ಏಕಾಂಗಿಯಾಗಿ ಏನೂ ಅಲ್ಲ. ನಾನೊಬ್ಬ ಸಾಮಾನ್ಯ ವ್ಯಕ್ತಿ. ನೂರಾ ಮೂವತ್ತು ಕೋಟಿ ಜನರ ಆದೇಶದ ಮೇಲೆ ಕೆಲಸ ಮಾಡುವ ವ್ಯಕ್ತಿ. ನೀವು 'ಹೌಡಿ ಮೋದಿ' ಅಂದರೆ, ಎವರಿಥಿಂಗ್ ಫೈನ್ ಇನ್ ಇಂಡಿಯಾ ಎನ್ನುತ್ತೇನೆ.
* ಭಾರತದಲ್ಲಿ ವೈವಿಧ್ಯತೆ ಬಗ್ಗೆ ತಿಳಿಸುವ ಉದ್ದೇಶದಿಂದ, ಎವರಿಥಿಂಗ್ ಇಸ್ ಫೈನ್ ಎನ್ನುವುದನ್ನು ಕನ್ನಡವೂ ಸೇರಿದ ಹಾಗೆ ತಮಿಳು, ತೆಲುಗು, ಮಲಯಾಳಂ... ಹೀಗೆ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಎಲ್ಲವೂ ಚೆನ್ನಾಗಿದೆ ಎಂಬುದನ್ನು ಮೋದಿ ಹೇಳಿದರು.

* ಕಳೆದ ಅರವತ್ತು ವರ್ಷಗಳಲ್ಲಿ ಭಾರತದಲ್ಲಿ ಬಹುಮತದ ಸರ್ಕಾರ ಎರಡನೇ ಬಾರಿ ಹೆಚ್ಚು ಮತ ಪ್ರಮಾಣದೊಂದಿಗೆ ಅಧಿಕಾರಕ್ಕೆ ಬಂದಿದೆ.
* ನಾವು ನಮ್ಮ ಜತೆಗೇ ಸ್ಪರ್ಧಿಸುತ್ತಿದ್ದೇವೆ. ನಮ್ಮ ಜತೆಗೆ ಸವಾಲಿಗೆ ಇಳಿದಿದ್ದೇವೆ. ಆದ್ದರಿಂದಲೇ ನಾವು ಅಭಿವೃದ್ಧಿ ಪಥದಲ್ಲಿ ಇದ್ದೇವೆ. ನಮ್ಮ ಗುರಿ ಎತ್ತರದಲ್ಲಿದೆ. ನಾವು ಎತ್ತರ ಇರುವುದನ್ನೇ ಸಾಧಿಸಿದ್ದೇವೆ.
* ಇಡೀ ಜಗತ್ತಿನಲ್ಲಿ ಎಲ್ಲಾದರೂ ಕೈಗೆಟುಕುವ ಬೆಲೆಗೆ ಇಂಟರ್ ನೆಟ್ ಡೇಟಾ ದೊರೆಯುತ್ತಿದ್ದರೆ ಅದು ಭಾರತದಲ್ಲಿ. ಒಂದು ಜಿ. ಬಿ. ಡೇಟಾ ಇಪ್ಪತ್ತೈದು ಸೆಂಟ್ಸ್ ಗೆ ಸಿಗುತ್ತದೆ. ಡಿಜಿಟಲ್ ಇಂಡಿಯಾ ಅಡಿಯಲ್ಲಿ ಇದು ಸಾಧ್ಯವಾಗಿದೆ. ಇ ಆಡಳಿತದಿಂದ ಆದಾಯ ತೆರಿಗೆ ರಿಟರ್ನ್ಸ್ ತನಕ ಎಲ್ಲ ಅನುಕೂಲವು ಈ ಅಗ್ಗದ ಡೇಟಾದಿಂದ ಸಾಧ್ಯವಾಗಿದೆ.
* ಈ ಅಕ್ಟೋಬರ್ ಎರಡಕ್ಕೆ ಬಯಲು ಶೌಚಾಲಯಕ್ಕೆ ನಾವು ಕೊನೆ ಹಾಡಲಿದ್ದೇವೆ. ಎಪ್ಪತ್ತು ವರ್ಷಗಳಿಂದ ಇದ್ದ ಜಮ್ಮು- ಕಾಶ್ಮೀರದ ವಿಶೇಷ ಸ್ಥಾನ ಮಾನ ತೆಗೆದಿದ್ದೇವೆ. ಅಭಿವೃದ್ಧಿಯಿಂದ ವಂಚಿತವಾಗಿದ್ದ ಜಮ್ಮು- ಕಾಶ್ಮೀರ, ಲಡಾಖ್ ನ ಜನರಿಗೆ ಇದರ ಅನುಕೂಲ ಆಗಲಿದೆ. ಇಲ್ಲಿವರೆಗಿನ ಅಲ್ಲಿನ ಸಮಸ್ಯೆಗಳ ಅನುಕೂಲವನ್ನು ಪ್ರತ್ಯೇಕತಾವಾದಿಗಳು ಹಾಗೂ ಭಯೋತ್ಪಾದಕರು ಪಡೆದಿದ್ದರು.
* ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದು ತನ್ನದೇ ದೇಶವನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗಿಲ್ಲದ ದೇಶಕ್ಕೆ ಇರುಸುಮುರುಸು ಮಾಡಿದೆ. ಅದು ಯಾವುದೇ ಭಯೋತ್ಪಾದನೆ ದಾಳಿ ಇರಲಿ ವಿದ್ರೋಹಿಗಳು ಆ ಒಂದು ದೇಶದಲ್ಲೇ ಕಂಡುಬರುತ್ತಾರೆ.
* ಭಾರತದಲ್ಲಿ ಕಾರ್ಪೊರೇಟ್ ತೆರಿಗೆ ಕಡಿಮೆ ಮಾಡಿದ ನಿರ್ಧಾರದಿಂದ ಜಗತ್ತಿನಾದ್ಯಂತ ಇರುವ ಉದ್ಯಮಿಗಳಿಗೆ ಸಕಾರಾತ್ಮಕ ಸಂದೇಶ ರವಾನೆಯಾಗಿದೆ.
* ಸುಲಭವಾಗಿ ವ್ಯವಹಾರ ಮಾಡಲು ಸಾಧ್ಯವಾಗಬೇಕು ಎಂಬುದು ನಮಗೆ ಬಹಳ ಮುಖ್ಯ. ಅದರ ಜತೆಗೆ ಆರಾಮವಾಗಿ ಬದುಕುವುದು ಸಹ ಅಷ್ಟೇ ಮುಖ್ಯ. ಅದಕ್ಕಾಗಿ ಜನರನ್ನು ಸಶಕ್ತರನ್ನಾಗಿ ಮಾಡಬೇಕು. ಆಗ ಮಾತ್ರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ವೇಗ ಪಡೆದುಕೊಳ್ಳಲು ಸಾಧ್ಯ.
* ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಕುಟುಂಬವನ್ನು ಭಾರತಕ್ಕೆ ಬರುವಂತೆ ನರೇಂದ್ರ ಮೋದಿ ಆಹ್ವಾನ ನೀಡಿದರು.
-
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ












Click it and Unblock the Notifications