Get Updates
Get notified of breaking news, exclusive insights, and must-see stories!

ಕೊಳಕು ಹಿಂದು, ಅಸಹ್ಯಕರ ನಾಯಿ ಎಂದ ಅಮೆರಿಕಾದ ತೇಜಿಂದರ್ ಸಿಂಗ್!

ನ್ಯೂಯಾರ್ಕ್, ಸೆಪ್ಟೆಂಬರ್ 1: ಟೆಕ್ಸಾಸ್‌ನಲ್ಲಿ ಸಮುದಾಯದ ನಾಲ್ಕು ಮಹಿಳೆಯರ ವಿರುದ್ಧ ದ್ವೇಷದ ಅಪರಾಧ ವರದಿಯಾದ ಬೆನ್ನಲ್ಲೇ ಅಂಥದ್ದೇ ಮತ್ತೊಂದು ಪ್ರಕರಣ ವರದಿಯಾಗಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ಅಮೆರಿಕನ್ ವ್ಯಕ್ತಿಯೊಬ್ಬ ಜನಾಂಗೀಯ ನಿಂದನೆಗೆ ಗುರಿಯಾಗಿದ್ದಾನೆ. ಈ ವ್ಯಕ್ತಿಯು "ಕೊಳಕು ಹಿಂದೂ" ಮತ್ತು "ಅಸಹ್ಯಕರ ನಾಯಿ" ಎಂದು ಜನಾಂಗೀಯ ನಿಂದನೆಗಳನ್ನು ಮಾಡಿದ್ದಾನೆ ಎಂದು ಗೊತ್ತಾಗಿದೆ.

ಕಳೆದ ಆಗಸ್ಟ್ 21ರಂದು ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ಗ್ರಿಮ್ಮರ್ ಬೌಲೆವಾರ್ಡ್‌ನಲ್ಲಿ ಇರುವ ಟ್ಯಾಕೋ ಬೆಲ್‌ನಲ್ಲಿ 37 ವರ್ಷದ ತೇಜಿಂದರ್ ಸಿಂಗ್ ಅವರು ಕೃಷ್ಣನ್ ಜಯರಾಮನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ.

Dirty Hindu, disgusting dog : Indian-American Racially Abused By Compatriot In California

ತೇಜಿಂದರ್ ಸಿಂಗ್ ವಿರುದ್ಧ ಕೇಸ್:

ನಾಗರಿಕ ಹಕ್ಕುಗಳ ಉಲ್ಲಂಘನೆ, ಹಲ್ಲೆ ಮತ್ತು ಆಕ್ಷೇಪಾರ್ಹ ಭಾಷೆಯಿಂದ ಶಾಂತಿ ಕದಡುವ ಹಾಗೂ ದ್ವೇಷದ ಅಪರಾಧದ ಆರೋಪವನ್ನು ಯೂನಿಯನ್ ಸಿಟಿಯ ತೇಜಿಂದರ್ ಸಿಂಗ್ ವಿರುದ್ಧ ಹೊರಿಸಲಾಗಿದೆ ಎಂದು ಫ್ರೀಮಾಂಟ್ ಪೊಲೀಸ್ ಇಲಾಖೆ ತಿಳಿಸಿದೆ. ತೇಜಿಂದರ್ ಸಿಂಗ್ ಅನ್ನು ಏಷ್ಯನ್ ಅಥವಾ ಭಾರತೀಯ ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

ಕೃಷ್ಣನ್ ಜಯರಾಮನ್ ಮುಖಕ್ಕೆ ಉಗಿದ ತೇಜಿಂದರ್ ಸಿಂಗ್:

ಕೃಷ್ಣನ್ ಜಯರಾಮನ್ ಹಾಗೂ ತೇಜಿಂದರ್ ಸಿಂಗ್ ನಡುವಿನ ಮಾತಿನ ಚಕಮಕಿಯನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಎಂಟು ನಿಮಿಷಗಳ ವಿಡಿಯೋದಲ್ಲಿ ಘಟನೆಯ ಬಗ್ಗೆ ಗೊತ್ತಾಗುತ್ತದೆ. ಅದರ ಪ್ರಕಾರ, "ಅಸಹ್ಯವಾಗಿ ಕಾಣುವ ಶ್ವಾನದಂತೆ ನೀವು, ಇನ್ನೊಂದು ಬಾರಿ ಈ ರೀತಿ ಸಾರ್ವಜನಿಕ ಪ್ರದೇಶಗಳಿಗೆ ಬರಬೇಡಿ," ಎಂದು ಅಶ್ಲೀಲವಾಗಿ ಮಾತನಾಡಿದ್ದಾನೆ. "ಕೊಳಕು ಹಿಂದೂ" ಎಂದು ಕರೆದಿರುವ ತೇಜಿಂದರ್ ಸಿಂಗ್, ಪದೇ ಪದೇ ಕೆಟ್ಟ ಪದವನ್ನು ಬಳಸಿದ್ದಾನೆ. ನಿನ್ನ ಮುಖ ನೋಡಿದರೆ ಮಾಂಸವನ್ನು ಅಥವಾ ಗೋಮಾಂಸವನ್ನು ತಿನ್ನುವುದಿಲ್ಲ ಎಂದು ಗೊತ್ತಾಗುತ್ತದೆ ಎಂದಿರುವ ತೇಜಿಂದರ್ ಸಿಂಗ್, ಅಲ್ಲಿದ್ದ ಕೃಷ್ಣನ್ ಜಯರಾಮನ್ ಮುಖಕ್ಕೆ ಉಗುಳುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಇದು ಭಾರತವಲ್ಲ ಎಂದ ತೇಜಿಂದರ್ ಸಿಂಗ್:

ಒಂದು ಹಂತದಲ್ಲಿ ತೇಜಿಂದರ್ ಸಿಂಗ್, "ಇದು ಭಾರತವಲ್ಲ! ನೀವು ಭಾರತದಲ್ಲಿ ಮೇಲಿರಬಹುದು, ಆದರೆ ಈಗ ನೀವು ಅಮೆರಿಕಾದಲ್ಲಿದ್ದೀಯಾ," ಎಂದು ಹೇಳುತ್ತಿರುವುದು ಕಂಡುಬಂತು. ಈ ಘಟನೆಯಿಂದ ತಾನು ಭಯಭೀತನಾಗಿದ್ದೆ ಮತ್ತು ಅಪರಾಧಿಯೂ ಭಾರತೀಯನೆಂದು ನಂತರ ತಿಳಿದು ಇನ್ನಷ್ಟು ಬೇಸರವಾಯಿತು ಎಂದು ಕೃಷ್ಣನ್ ಜಯರಾಮನ್ ಹೇಳಿದ್ದಾರೆ.

"ನಿಮ್ಮೊಂದಿಗೆ ಪ್ರಾಮಾಣಿಕವಾಗಿರಲು ನಾನು ಹೆದರುತ್ತಿದ್ದೆ, ನಾನು ಒಂದು ಕಡೆ ಕೋಪಗೊಂಡಿದ್ದೆ, ಆದರೆ ಈ ವ್ಯಕ್ತಿ ತುಂಬಾ ಜಗಳ ಮಾಡಿದ ನಂತರ ನನ್ನ ಹಿಂದೆ ಬಂದರೆ ಏನು ಎಂದು ನಾನು ಹೆದರುತ್ತಿದ್ದೆ?," ಅಂತಾ ಹೇಳಿದ್ದಾರೆ.

"ನಾನು ನಿಮ್ಮೊಂದಿಗೆ ಜಗಳವಾಡಲು ಬಂದಿಲ್ಲ" ಎಂದು ಕೃಷ್ಣನ್ ಜಯರಾಮನ್ ಹೇಳಿದರು. "ನಿಮಗೆ ಏನು ಬೇಕು? ನೀವು ಹಿಂದೂಗಳು ನಾಚಿಕೆಗೇಡು, ಅಸಹ್ಯಕರ ಎಂದು ನಿಮಗೆ ತಿಳಿದಿದೆ ಎಂದು ತೇಜಿಂದರ್ ಸಿಂಗ್ ಹೇಳಿದರು. ನಂತರ ಅವರು ನನ್ನ ಮೇಲೆ ಉಗುಳಿದರು," ಎಂದು ಕೃಷ್ಣನ್ ಉಲ್ಲೇಖಿಸಿದ್ದಾರೆ. ಆಗ ತಾನು ಮತ್ತು ರೆಸ್ಟೋರೆಂಟ್ ಉದ್ಯೋಗಿಯೊಬ್ಬರು ಫ್ರೀಮಾಂಟ್ ಪೊಲೀಸರಿಗೆ ಕರೆ ಮಾಡಿದೆವು. ಇದರ ಮಧ್ಯೆ ಎಂಟು ನಿಮಿಷಕ್ಕೂ ಹೆಚ್ಚು ಕಾಲ ಆ ವ್ಯಕ್ತಿ ಕೂಗುತ್ತಲೇ ಇದ್ದ ಎಂದು ಅವರು ಹೇಳಿದ್ದಾರೆ. ಈ ಘಟನೆಯ ಕುರಿತು ಫ್ರೀಮಾಂಟ್ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.

ಫ್ರೀಮಾಂಟ್ ಪೊಲೀಸರು ಘಟನೆ ಬಗ್ಗೆ ಹೇಳಿದ್ದೇನು?:

"ನಾವು ದ್ವೇಷದ ಘಟನೆಗಳು ಮತ್ತು ದ್ವೇಷದ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ನಮ್ಮ ಸಮುದಾಯದ ಮೇಲೆ ಅವು ಬೀರುವ ಗಮನಾರ್ಹ ಪರಿಣಾಮವನ್ನು ಅರ್ಥ ಮಾಡಿಕೊಳ್ಳುತ್ತೇವೆ. ಈ ಘಟನೆಗಳು ಹೇಯವಾಗಿವೆ. ಎಲ್ಲಾ ಸಮುದಾಯದ ಸದಸ್ಯರನ್ನು ಅವರ ಲಿಂಗ, ಜನಾಂಗ, ರಾಷ್ಟ್ರೀಯತೆ ಲೆಕ್ಕಿಸದೆ ರಕ್ಷಿಸಲು ನಾವು ಇಲ್ಲಿದ್ದೇವೆ. ಧರ್ಮ ಮತ್ತು ಇತರ ವ್ಯತ್ಯಾಸಗಳಿವೆ," ಎಂದಿದ್ದಾರೆ.

"ಸಮುದಾಯವನ್ನು ಪರಸ್ಪರ ಗೌರವಿಸುವಂತೆ ನಾವು ಒತ್ತಾಯಿಸಲು ಬಯಸುತ್ತೇವೆ. ಈ ತನಿಖೆಯ ನಂತರ ಅಪರಾಧದ ಮಟ್ಟಕ್ಕೆ ಏರಬಹುದಾದಂತಹ ಯಾವುದೇ ಸಂದರ್ಭಗಳನ್ನು ತಕ್ಷಣವೇ ವರದಿ ಮಾಡಲು ನಾವು ಬಯಸುತ್ತೇವೆ. ಫ್ರೀಮಾಂಟ್ ರಾಷ್ಟ್ರದ ಅತ್ಯಂತ ವೈವಿಧ್ಯಮಯ ಸಮುದಾಯಗಳಲ್ಲಿ ಒಂದಾಗಿದೆ. ವಿಭಿನ್ನ ಸಂಸ್ಕೃತಿಗಳ ಹಿನ್ನೆಲೆ ಸಮುದಾಯದ ಸದಸ್ಯರ ಕೊಡುಗೆಗಳಿಗೆ ನಾವು ಕೃತಜ್ಞರಾಗಿರುತ್ತೇವೆ," ಎಂದು ಪೊಲೀಸ್ ಮುಖ್ಯಸ್ಥ ಸೀನ್ ವಾಷಿಂಗ್ಟನ್ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+