ಕೊಳಕು ಹಿಂದು, ಅಸಹ್ಯಕರ ನಾಯಿ ಎಂದ ಅಮೆರಿಕಾದ ತೇಜಿಂದರ್ ಸಿಂಗ್!
ನ್ಯೂಯಾರ್ಕ್, ಸೆಪ್ಟೆಂಬರ್ 1: ಟೆಕ್ಸಾಸ್ನಲ್ಲಿ ಸಮುದಾಯದ ನಾಲ್ಕು ಮಹಿಳೆಯರ ವಿರುದ್ಧ ದ್ವೇಷದ ಅಪರಾಧ ವರದಿಯಾದ ಬೆನ್ನಲ್ಲೇ ಅಂಥದ್ದೇ ಮತ್ತೊಂದು ಪ್ರಕರಣ ವರದಿಯಾಗಿದೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ಅಮೆರಿಕನ್ ವ್ಯಕ್ತಿಯೊಬ್ಬ ಜನಾಂಗೀಯ ನಿಂದನೆಗೆ ಗುರಿಯಾಗಿದ್ದಾನೆ. ಈ ವ್ಯಕ್ತಿಯು "ಕೊಳಕು ಹಿಂದೂ" ಮತ್ತು "ಅಸಹ್ಯಕರ ನಾಯಿ" ಎಂದು ಜನಾಂಗೀಯ ನಿಂದನೆಗಳನ್ನು ಮಾಡಿದ್ದಾನೆ ಎಂದು ಗೊತ್ತಾಗಿದೆ.
ಕಳೆದ ಆಗಸ್ಟ್ 21ರಂದು ಕ್ಯಾಲಿಫೋರ್ನಿಯಾದ ಫ್ರೀಮಾಂಟ್ನಲ್ಲಿರುವ ಗ್ರಿಮ್ಮರ್ ಬೌಲೆವಾರ್ಡ್ನಲ್ಲಿ ಇರುವ ಟ್ಯಾಕೋ ಬೆಲ್ನಲ್ಲಿ 37 ವರ್ಷದ ತೇಜಿಂದರ್ ಸಿಂಗ್ ಅವರು ಕೃಷ್ಣನ್ ಜಯರಾಮನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ಎನ್ಬಿಸಿ ನ್ಯೂಸ್ ವರದಿ ಮಾಡಿದೆ.

ತೇಜಿಂದರ್ ಸಿಂಗ್ ವಿರುದ್ಧ ಕೇಸ್:
ನಾಗರಿಕ ಹಕ್ಕುಗಳ ಉಲ್ಲಂಘನೆ, ಹಲ್ಲೆ ಮತ್ತು ಆಕ್ಷೇಪಾರ್ಹ ಭಾಷೆಯಿಂದ ಶಾಂತಿ ಕದಡುವ ಹಾಗೂ ದ್ವೇಷದ ಅಪರಾಧದ ಆರೋಪವನ್ನು ಯೂನಿಯನ್ ಸಿಟಿಯ ತೇಜಿಂದರ್ ಸಿಂಗ್ ವಿರುದ್ಧ ಹೊರಿಸಲಾಗಿದೆ ಎಂದು ಫ್ರೀಮಾಂಟ್ ಪೊಲೀಸ್ ಇಲಾಖೆ ತಿಳಿಸಿದೆ. ತೇಜಿಂದರ್ ಸಿಂಗ್ ಅನ್ನು ಏಷ್ಯನ್ ಅಥವಾ ಭಾರತೀಯ ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಕೃಷ್ಣನ್ ಜಯರಾಮನ್ ಮುಖಕ್ಕೆ ಉಗಿದ ತೇಜಿಂದರ್ ಸಿಂಗ್:
ಕೃಷ್ಣನ್ ಜಯರಾಮನ್ ಹಾಗೂ ತೇಜಿಂದರ್ ಸಿಂಗ್ ನಡುವಿನ ಮಾತಿನ ಚಕಮಕಿಯನ್ನು ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಎಂಟು ನಿಮಿಷಗಳ ವಿಡಿಯೋದಲ್ಲಿ ಘಟನೆಯ ಬಗ್ಗೆ ಗೊತ್ತಾಗುತ್ತದೆ. ಅದರ ಪ್ರಕಾರ, "ಅಸಹ್ಯವಾಗಿ ಕಾಣುವ ಶ್ವಾನದಂತೆ ನೀವು, ಇನ್ನೊಂದು ಬಾರಿ ಈ ರೀತಿ ಸಾರ್ವಜನಿಕ ಪ್ರದೇಶಗಳಿಗೆ ಬರಬೇಡಿ," ಎಂದು ಅಶ್ಲೀಲವಾಗಿ ಮಾತನಾಡಿದ್ದಾನೆ. "ಕೊಳಕು ಹಿಂದೂ" ಎಂದು ಕರೆದಿರುವ ತೇಜಿಂದರ್ ಸಿಂಗ್, ಪದೇ ಪದೇ ಕೆಟ್ಟ ಪದವನ್ನು ಬಳಸಿದ್ದಾನೆ. ನಿನ್ನ ಮುಖ ನೋಡಿದರೆ ಮಾಂಸವನ್ನು ಅಥವಾ ಗೋಮಾಂಸವನ್ನು ತಿನ್ನುವುದಿಲ್ಲ ಎಂದು ಗೊತ್ತಾಗುತ್ತದೆ ಎಂದಿರುವ ತೇಜಿಂದರ್ ಸಿಂಗ್, ಅಲ್ಲಿದ್ದ ಕೃಷ್ಣನ್ ಜಯರಾಮನ್ ಮುಖಕ್ಕೆ ಉಗುಳುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಇದು ಭಾರತವಲ್ಲ ಎಂದ ತೇಜಿಂದರ್ ಸಿಂಗ್:
ಒಂದು ಹಂತದಲ್ಲಿ ತೇಜಿಂದರ್ ಸಿಂಗ್, "ಇದು ಭಾರತವಲ್ಲ! ನೀವು ಭಾರತದಲ್ಲಿ ಮೇಲಿರಬಹುದು, ಆದರೆ ಈಗ ನೀವು ಅಮೆರಿಕಾದಲ್ಲಿದ್ದೀಯಾ," ಎಂದು ಹೇಳುತ್ತಿರುವುದು ಕಂಡುಬಂತು. ಈ ಘಟನೆಯಿಂದ ತಾನು ಭಯಭೀತನಾಗಿದ್ದೆ ಮತ್ತು ಅಪರಾಧಿಯೂ ಭಾರತೀಯನೆಂದು ನಂತರ ತಿಳಿದು ಇನ್ನಷ್ಟು ಬೇಸರವಾಯಿತು ಎಂದು ಕೃಷ್ಣನ್ ಜಯರಾಮನ್ ಹೇಳಿದ್ದಾರೆ.
"ನಿಮ್ಮೊಂದಿಗೆ ಪ್ರಾಮಾಣಿಕವಾಗಿರಲು ನಾನು ಹೆದರುತ್ತಿದ್ದೆ, ನಾನು ಒಂದು ಕಡೆ ಕೋಪಗೊಂಡಿದ್ದೆ, ಆದರೆ ಈ ವ್ಯಕ್ತಿ ತುಂಬಾ ಜಗಳ ಮಾಡಿದ ನಂತರ ನನ್ನ ಹಿಂದೆ ಬಂದರೆ ಏನು ಎಂದು ನಾನು ಹೆದರುತ್ತಿದ್ದೆ?," ಅಂತಾ ಹೇಳಿದ್ದಾರೆ.
"ನಾನು ನಿಮ್ಮೊಂದಿಗೆ ಜಗಳವಾಡಲು ಬಂದಿಲ್ಲ" ಎಂದು ಕೃಷ್ಣನ್ ಜಯರಾಮನ್ ಹೇಳಿದರು. "ನಿಮಗೆ ಏನು ಬೇಕು? ನೀವು ಹಿಂದೂಗಳು ನಾಚಿಕೆಗೇಡು, ಅಸಹ್ಯಕರ ಎಂದು ನಿಮಗೆ ತಿಳಿದಿದೆ ಎಂದು ತೇಜಿಂದರ್ ಸಿಂಗ್ ಹೇಳಿದರು. ನಂತರ ಅವರು ನನ್ನ ಮೇಲೆ ಉಗುಳಿದರು," ಎಂದು ಕೃಷ್ಣನ್ ಉಲ್ಲೇಖಿಸಿದ್ದಾರೆ. ಆಗ ತಾನು ಮತ್ತು ರೆಸ್ಟೋರೆಂಟ್ ಉದ್ಯೋಗಿಯೊಬ್ಬರು ಫ್ರೀಮಾಂಟ್ ಪೊಲೀಸರಿಗೆ ಕರೆ ಮಾಡಿದೆವು. ಇದರ ಮಧ್ಯೆ ಎಂಟು ನಿಮಿಷಕ್ಕೂ ಹೆಚ್ಚು ಕಾಲ ಆ ವ್ಯಕ್ತಿ ಕೂಗುತ್ತಲೇ ಇದ್ದ ಎಂದು ಅವರು ಹೇಳಿದ್ದಾರೆ. ಈ ಘಟನೆಯ ಕುರಿತು ಫ್ರೀಮಾಂಟ್ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.
ಫ್ರೀಮಾಂಟ್ ಪೊಲೀಸರು ಘಟನೆ ಬಗ್ಗೆ ಹೇಳಿದ್ದೇನು?:
"ನಾವು ದ್ವೇಷದ ಘಟನೆಗಳು ಮತ್ತು ದ್ವೇಷದ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ನಮ್ಮ ಸಮುದಾಯದ ಮೇಲೆ ಅವು ಬೀರುವ ಗಮನಾರ್ಹ ಪರಿಣಾಮವನ್ನು ಅರ್ಥ ಮಾಡಿಕೊಳ್ಳುತ್ತೇವೆ. ಈ ಘಟನೆಗಳು ಹೇಯವಾಗಿವೆ. ಎಲ್ಲಾ ಸಮುದಾಯದ ಸದಸ್ಯರನ್ನು ಅವರ ಲಿಂಗ, ಜನಾಂಗ, ರಾಷ್ಟ್ರೀಯತೆ ಲೆಕ್ಕಿಸದೆ ರಕ್ಷಿಸಲು ನಾವು ಇಲ್ಲಿದ್ದೇವೆ. ಧರ್ಮ ಮತ್ತು ಇತರ ವ್ಯತ್ಯಾಸಗಳಿವೆ," ಎಂದಿದ್ದಾರೆ.
"ಸಮುದಾಯವನ್ನು ಪರಸ್ಪರ ಗೌರವಿಸುವಂತೆ ನಾವು ಒತ್ತಾಯಿಸಲು ಬಯಸುತ್ತೇವೆ. ಈ ತನಿಖೆಯ ನಂತರ ಅಪರಾಧದ ಮಟ್ಟಕ್ಕೆ ಏರಬಹುದಾದಂತಹ ಯಾವುದೇ ಸಂದರ್ಭಗಳನ್ನು ತಕ್ಷಣವೇ ವರದಿ ಮಾಡಲು ನಾವು ಬಯಸುತ್ತೇವೆ. ಫ್ರೀಮಾಂಟ್ ರಾಷ್ಟ್ರದ ಅತ್ಯಂತ ವೈವಿಧ್ಯಮಯ ಸಮುದಾಯಗಳಲ್ಲಿ ಒಂದಾಗಿದೆ. ವಿಭಿನ್ನ ಸಂಸ್ಕೃತಿಗಳ ಹಿನ್ನೆಲೆ ಸಮುದಾಯದ ಸದಸ್ಯರ ಕೊಡುಗೆಗಳಿಗೆ ನಾವು ಕೃತಜ್ಞರಾಗಿರುತ್ತೇವೆ," ಎಂದು ಪೊಲೀಸ್ ಮುಖ್ಯಸ್ಥ ಸೀನ್ ವಾಷಿಂಗ್ಟನ್ ತಿಳಿಸಿದ್ದಾರೆ.
-
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Love Mocktail 3 Row: ಕೃತಿಚೌರ್ಯ ವಿವಾದದ ನಡುವೆ ಸತ್ಯ ಮತ್ತು ನೈತಿಕತೆ ಚರ್ಚೆ: ಮಧು ವೈ.ಎನ್ ಬರಹ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
IPL Tickets: ನಾವು ವಿಐಪಿಗಳು; 5 ಫ್ರೀ ಟಿಕೆಟ್ ಕೊಡಲಿ: ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ -
Tejasvi Surya: ಕೆಎಸ್ಸಿಎನಿಂದ ಐಪಿಎಲ್ ಫ್ರೀ ಟಿಕೆಟ್ ಚರ್ಚೆ: ಕಾಂಗ್ರೆಸ್ ಶಾಸಕರಿಗೆ ಸಂಸದ ತೇಜಸ್ವಿ ಸೂರ್ಯ ಕ್ಲಾಸ್ -
Political Trends: ನಿಂದಾ ರಾಜಕೀಯದ ದಾರಿ ತಪ್ಪಿದ ಪ್ರಜಾತಂತ್ರ: ಯಾವ ಮನೆಯ ಸಾಸಿವೆ ತರ ಹೊರಟಿದ್ದೀರಿ: ರಾಜಾರಾಂ ತಲ್ಲೂರು ಬರಹ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Water: ಅನಂತರಪುರ ಜಿಲ್ಲೆಯ ಬರಡು ಭೂಮಿಯ ಯಶೋಗಾಥೆ: ಜಗದೀಶ್ ಕೊಪ್ಪ ಬರಹ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್












Click it and Unblock the Notifications