ದೇಹದ ಕೊಬ್ಬು ಕರಗಿಸುವ ಈ ಮಾತ್ರೆ ಕೊರೊನಾ ಸೋಂಕಿಗೂ ರಾಮಬಾಣ
ನ್ಯೂಯಾರ್ಕ್, ಜುಲೈ 20: ಕೊರೊನಾ ಸೋಂಕನ್ನು ಹೋಗಲಾಡಿಲು ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ನೂರಾರು ಲಸಿಕೆಗಳನ್ನು ಕಂಡು ಹಿಡಿಯಲಾಗಿದೆ. ಆದರೆ ಅದರಲ್ಲಿ ಕೆಲವೇ ಕೆಲವಕ್ಕೆ ಒಪ್ಪಿಗೆ ದೊರೆತಿದ್ದು, ಅದೂ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ನೀಡವಂಥದ್ದಾಗಿದೆ.
Recommended Video
ಆದರೆ ದೇಹದ ಕೊಬ್ಬು ಕರಗಿಸಲು ನೀಡುವ 'ಫೆನಾಬಿಟ್ರೇಟ್' ಮಾತ್ರೆಯಿಂದ ಕೊರೊನಾವನ್ನು ಕೂಡ ದೂರ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ. ದೇಹದಲ್ಲಿರುವ ಕೊಬ್ಬಿನಾಂಶ ಕರಗಲು ನೀಡುವ ಮಾತ್ರೆಯಿಂದ ಕೊವಿಡ್ 19 ರೋಗವನ್ನು ಗುಣವಾಗಿಸಬಹುದು.
ಕೊಬ್ಬಿನಾಂಶ ಕಡಿಮೆಗೊಳಿಸುವ ಫೆನೋಫೈಬ್ರೇಟ್ ಮಾತ್ರೆಯಿಂದ ಉತ್ತಮ ಫಲಿತಾಂಶ ಲಭ್ಯವಾಗಿದೆ. ಇದು ಜೀವಕೋಶಗಳಲ್ಲಿನ ಹೆಚ್ಚಿನ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
ಹಾಗೆಯೇ ವೈರಸ್ ದೇಹದ ಮತ್ತಿತರೆ ಭಾಗಗಳಿಗೆ ಹರಡುವುದನ್ನು ನಿಯಂತ್ರಿಸುತ್ತದೆ. ಅವರ ಸಂಶೋಧನೆ ಪ್ರಕಾರ ಐದು ದಿನದ ಚಿಕಿತ್ಸೆಯಲ್ಲಿ ಕೊರೊನಾ ಸೋಂಕು ಕಣ್ಮರೆಯಾಗಿದೆ. ಇದನ್ನು ಸಾಬೀತುಪಡಿಸಲು ಅನೇಕ ಅಧ್ಯಯನ, ಪ್ರಯೋಗಗಳು ನಡೆಯಬೇಕಿದೆ.

ಮೌಂಟ್ ಸಿನಾಯ್ ಮೆಡಿಕಲ್ ಸೆಂಟರ್ ಹೇಳುವುದೇನು?
ಕೊವಿಡ್ 19 ರೋಗಿಗಳ ಶ್ವಾಸಕೋಶದ ಮೇಲೆ ಕೊರೊನಾ ಸೋಂಕು ಹೆಚ್ಚು ಪರಿಣಾಮವನ್ನು ಬೀರುತ್ತದೆ. ಹಾಗೆಯೇ ಕಾರ್ಬೊಹೈಡ್ರೇಟ್ಗಳು ಶ್ವಾಸಕೋಶದ ಮೇಲೆ ಬೀರುವ ದುಷ್ಪರಿಣಾಮವನ್ನು ಈ ಮಾತ್ರ ಕಡಿಮೆ ಮಾಡಲಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಕೊರೊನಾ ಸೋಂಕು ಶ್ವಾಸಕೋಶದೊಳಗೆ ಕೊಬ್ಬನ್ನು ಹೆಚ್ಚಿಸಲಿದೆ
ಕೊರೊನಾ ಸೋಂಕು ಶ್ವಾಸಕೋಶದೊಳಗೆ ಕೊಬ್ಬನ್ನು ಹೆಚ್ಚಿಸಲು ಕಾರಣವಾಗುತ್ತದೆ. ಸಂಶೋಧನೆ ಪ್ರಕಾರ ಇದು ಕೊವಿಡ್ 19 ಅಪಾಯದ ಹಂತವನ್ನು ವಿವರಿಸುತ್ತದೆ. ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಅಂಶ, ಅಧಿಕ ಕೊಬ್ಬಿನಾಂಶವಿರುವವರು ಹೆಚ್ಚಿನ ತೊಂದರೆ ಅನುಭವಿಸುತ್ತಾರೆ.

ವೈರಸ್ ಕಾರ್ಯ ಹೇಗಿರುತ್ತೆ?
ವೈರಸ್ ದೇಹದೊಳಗೆ ಹೇಗೆ ಕೆಲಸ ಮಾಡುತ್ತದೆ, ಅದು ಹೇಗೆ ಒಬ್ಬಂರಿಂದೊಬ್ಬರಿಗೆ ಹರಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಧ್ಯಯನದ ಉದ್ದೇಶವಾಗಿತ್ತು,ಇದು ತಿಳಿದ ಬಳಿಕ ಸಂಶೋಧಕರು ಮುಂದಿನ ವಿಧಾನಗಳ ಬಗ್ಗೆ ಗಮನ ಹರಿಸಬಹುದು. ಇದೀಗ ಇಡೀ ಜಗತ್ತಿನಲ್ಲಿ ಕೊರೊನಾಗೆ ಸರಿಯಾದ ಲಸಿಕೆ ತಯಾರಾಗಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆಯಾದರೂ ಈ ಔಷಧವು ಕೂಡ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ಫೆನೋಫೈಬ್ರೇಟ್ ಮಾತ್ರೆಯಿಂದ ಉತ್ತಮ ಫಲಿತಾಂಶ
ಕೊಬ್ಬಿನಾಂಶ ಕಡಿಮೆಗೊಳಿಸುವ ಫೆನೋಫೈಬ್ರೇಟ್ ಮಾತ್ರೆಯಿಂದ ಉತ್ತಮ ಫಲಿತಾಂಶ ಲಭ್ಯವಾಗಿದೆ. ಇದು ಜೀವಕೋಶಗಳಲ್ಲಿನ ಹೆಚ್ಚಿನ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಹಾಗೆಯೇ ವೈರಸ್ ದೇಹದ ಮತ್ತಿತರೆ ಭಾಗಗಳಿಗೆ ಹರಡುವುದನ್ನು ನಿಯಂತ್ರಿಸುತ್ತದೆ. ಅವರ ಸಂಶೋಧನೆ ಪ್ರಕಾರ ಐದು ದಿನದ ಚಿಕಿತ್ಸೆಯಲ್ಲಿ ಕೊರೊನಾ ಸೋಂಕು ಕಣ್ಮರೆಯಾಗಿದೆ. ಇದನ್ನು ಸಾಬೀತುಪಡಿಸಲು ಅನೇಕ ಅಧ್ಯಯನ, ಪ್ರಯೋಗಗಳು ನಡೆಯಬೇಕಿದೆ. ಆದರೆ ಇದರಿಂದ ಭರವಸೆ ಮತ್ತಷ್ಟು ಹೆಚ್ಚಿದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications