ಚುನಾವಣೋತ್ತರ ಸಮೀಕ್ಷೆಗಳಲ್ಲೇ ವಿರೋಧಾಭಾಸ: ಎಂಬಿ ಪಾಟೀಲ್ ಬೇಸರ
ವಿಜಯಪುರ, ಮೇ 13: ಚುನಾವಣೋತ್ತರ ಸಮೀಕ್ಷೆ ಕುರಿತು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಒಂದಕ್ಕೊಂದು ತಾಳ-ಮೇಳ ಇಲ್ಲ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೊಂದು ಸಮೀಕ್ಷೆ ಒಂದೊಂದು ರೀತಿ ಹೇಳುತ್ತಿವೆ, ಯಾವುದಕ್ಕೂ ಒಂದಕ್ಕೊಂದು ಸಂಬಂಧವಿಲ್ಲ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುವ ವಿಶ್ವಾಸವಿದೆ. ಯಾರೊಂದಿಗೂ ಕೈಜೋಡಿಸುವ ಪ್ರಶ್ನೆ ಇಲ್ಲ ಎಂದು ಹೇಳಿದರು.

ಬ್ರ್ಯಾಂಡ್ ಸಿದ್ದರಾಮಯ್ಯ, ಬ್ರ್ಯಾಂಡ್ ಮೋದಿಯಲ್ಲಿ ಮಹಳ ವ್ಯಾತ್ಯಾಸವಿದೆ. ಮೋದಿ ಬರಿ ಸುಳ್ಳ ಭಾಷಣದಿಂದ ಜನರನ್ನು ಮರಳು ಮಾಡುತ್ತಿದ್ದಾರೆ, ಅವರ ಭಾಷಣದಲ್ಲಿ ಹುರುಳಿಲ್ಲ, ಜನರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎನ್ನುವ ನಂಬಿಕೆ ನನಗಿದೆ. ಮೋದಿಯದ್ದು ಕಾಮ್ ಕೀ ಬಾತ್ ಇಲ್ಲ, ಸಿಂಎ ಸಿದ್ದರಾಮಯ್ಯ ಕಾಯಕ ದಾಸೋಹ ಮಾಡಿದ್ದಾರೆ. ರಾಜ್ಯದಲ್ಲಿ ಮೋದಿಯನ್ನು ಜನರು ತಿರಸ್ಕರಿಸಲಿದ್ದಾರೆ ಎಂದರು.











Click it and Unblock the Notifications