ವಿಜಯಪುರದಲ್ಲಿ ಸುಣ್ಣದ ಡಬ್ಬಿ ನುಂಗಿ ಮಗು ಸಾವು
ವಿಜಯಪುರ, ಸೆಪ್ಟೆಂಬರ್ 11: ಸುಣ್ಣದ ಡಬ್ಬಿಯನ್ನು ನುಂಗಿ ಮಗುವೊಂದು ಮೃತಪಟ್ಟಿರುವ ಘಟನೆ ವಿಜಯಪುರದ ತಿಕೋಟಾದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಭಾರತ್ ಬಂದ್: ಕುಡಚಿ ಬಳಿ ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಾತಾಯಿ
ಮಗುವಿರುವ ಮನೆಯಲ್ಲಿ ಮಕ್ಕಳು ಬಾಯಿಗೆ ಹಾಕಿಕೊಳ್ಳುವಂತಹ ವಸ್ತುಗಳನ್ನು ಯಾವುದೇ ಕಾರಣಕ್ಕೂ ಕೆಳಗೆ ಇಡಬಾರದು ನೋಡಿ ಹೀಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಇಟ್ಟಿದ್ದ ತಪ್ಪಿಗೆ ಮಗುವಿನ ಜೀವಕ್ಕೆ ಸಂಚಕಾರ ಸಂಚಕಾರ ತಂದುಬಿಡುತ್ತದೆ. ಕಾಯಿನ್ ಗಳು, ಸರದ ಮಣಿಗಳು, ಪೆನ್ನು ಈ ರೀತಿಯ ವಸ್ತುಗಳನ್ನು ಮಗುವಿನಿಂದ ದೂರವಿಡಬೇಕು.
ಉಸಿರಾಟದ ಸಮಸ್ಯೆಯಿಂದ ವಿಮಾನದಲ್ಲೇ ಅಸುನೀಗಿದ ಬೆಂಗಳೂರಿನ ಹಸುಗೂಸು
ಸುಣ್ಣದ ಡಬ್ಬಿ ನುಂಗಿ ಒಂಭತ್ತು ತಿಂಗಳ ಮಗು ಮೃತಪಟ್ಟಿದೆ, ತಿಕೋಟದ ನಿವಾಸಿ ವಿಶ್ವನಾಥ ಎನ್ನುವವರ ಮಗು ಇದಾಗಿದೆ. ಮನೆಯಲ್ಲಿ ಮಗು ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಸುಣ್ಣದ ಡಬ್ಬಿಯನ್ನು ನುಂಗಿದೆ.
ಇದನ್ನು ಪೋಷಕರು ಗಮನಿಸಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ವೈದ್ಯರು ಕೂಡ ಹರಸಾಹಸ ಪಟ್ಟು ಡಬ್ಬಿಯನ್ನು ತೆಗೆಯುವಲ್ಲಿ ಯಶಸ್ವಿಯಾದರು ಆದರೆ ಸುಣ್ಣ ಮಗುವಿನ ದೇಹವನ್ನು ಸೇರಿದ್ದ ಕಾರಣ ಮಗು ಮೃತಪಟ್ಟಿದೆ, ಈ ಕುರಿತು ತಿಕೋಟ ಪೊಲೀಸ್ ಠಾಣೆಯಲ್ಲಿ ಪ್ರಕಟಣ ದಾಖಲಾಗಿದೆ.
ಒಂದೂವರೆ ವರ್ಷದ ಮಗು ಸಾವು: ಪಾಲಕರಿಂದ ವೈದ್ಯರ ವಿರುದ್ಧ ಆರೋಪ
ಇನ್ನುಮುಂದಾದರೂ ಮಕ್ಕಳಿರುವ ಮನೆಯಲ್ಲಿ ಕೈಗೆ ಸಿಗುವ ರೀತಿಯಲ್ಲಿ ಯಾವುದೇ ಪ್ರಾಣಕ್ಕೆ ಕುತ್ತು ತರುವ ವಸ್ತುಗಳನ್ನು ಇರಿಸಬಾರದು ಎನ್ನುವ ಎಚ್ಚರಿಕೆಯೂ ಈ ಸುದ್ದಿ ನೀಡುತ್ತದೆ.