ವಿಜಯಪುರ: ಒಂದೇ ರಾತ್ರಿ 5 ಅಂಗಡಿ ದೋಚಿದ ಕಳ್ಳರು
ವಿಜಯಪುರ, ಜನವರಿ 20: ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ನಿಡಗುಂದಿ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ 5 ಅಂಗಡಿಗಳ ಬೀಗ ಒಡೆದು ಲಕ್ಷಾಂತರ ನಗದು ಹಾಗೂ ಬೆಲೆ ಬಾಳುವ ಸಾಮಗ್ರಿಗಳನ್ನು ಕಳ್ಳರು ದೋಚಿದ್ದಾರೆ.
ಶುಕ್ರವಾರ ರಾತ್ರಿ ನಿಡಗುಂದಿ ಪಟ್ಟಣದ ವೈನ್ ಶಾಪ್, ಮೆಡಿಕಲ್ ಶಾಪ್, ಗೃಹಪಯೋಗಿ ವಸ್ತುಗಳ ಅಂಗಡಿ, ಎಲೆಕ್ಟ್ರಾನಿಕ್ ಅಂಗಡಿಗಳಲ್ಲಿ ಕೈಚಳಕ ತೋರಿರುವ ಕಳ್ಳರು ಹಣ ಮತ್ತು ಲಕ್ಷಾಂತರ ಬೆಲೆಯ ಸಾಮಗ್ರಿಗಳನ್ನು ಹೊತ್ತೊಯ್ದಿದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎತ್ತಿನ
ಬಂಡಿಗೆ
ಡಿಕ್ಕಿ,
ಬೈಕ್
ಸವಾರ
ಸಾವು
ತನ್ನ
ಪಾಡಿಗೆ
ನಿಧಾನಕ್ಕೆ
ಹೋಗುತ್ತಿದ್ದ
ಎತ್ತಿನ
ಬಂಡಿಗೆ
ಹಿಂದಿನಿಂದ
ವೇಗವಾಗಿ
ಬಂದ
ಬೈಕ್
ಡಿಕ್ಕಿ
ಹೊಡೆದ
ಪರಿಣಾಮ
ಬೈಕ್
ಸವಾರ
ಸಾವನ್ನಪ್ಪಿರುವ
ಘಟನೆ
ಜಿಲ್ಲೆಯ
ನಿಡಗುಂದಿ
ಬಳಿಯ
ಚಿಮ್ಮಲಗಿ
ಬಳಿ
ನಡೆದಿದೆ.
ಬೈಕ್ ಸವಾರ ಸಾಬಣ್ಣ ಅಪಘಾತವಾದ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಕೆಯ ಪತ್ನಿಗೆ ತೀರ್ವ ಗಾಯವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.