ಉಡುಪಿ ಹೊಳೆ ಮೀನುಗಾರಿಕೆಯಲ್ಲಿ ಕಲಹ: ಶಿಳ್ಳೆಕ್ಯಾತರ ಮೇಲೆ ಹಲ್ಲೆ,ಬೆದರಿಕೆ..ದೂರು ದಾಖಲು
ಉಡುಪಿ, ಜೂನ್ 23: ಕರಾವಳಿಯ ಮೊಗವೀರ ಮತ್ತು ಮಲೆನಾಡ ಅಲೆಮಾರಿ ಬೆಸ್ತರು ನಡುವೆ ಕಲಹ ನಡೆದಿದೆ. ಮಾತಿಗೆ ಮಾತು ಬೆಳೆದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ನಮಗೆ ಕೂಲಿ ಮಾಡಲು ಅವಕಾಶ ಕೊಡಿ ಬದುಕಲು ಬಿಡಿ ಎಂದು ಉಡುಪಿ ಜಿಲ್ಲಾಡಳಿತದ ಮುಂದೆ ಶಿಳ್ಳೆಕ್ಯಾತರು ಬೇಡಿಕೆಯಿಟ್ಟಿದ್ದಾರೆ.
ಬಸ್ರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಇರುವ ಇವರು ಕುಂದಾಪುರ ಸುತ್ತಮುತ್ತ ನೆಲೆಸಿರುವ ಶಿಳ್ಳೆಕ್ಯಾತ ಅಲೆಮಾರಿ ಜನಾಂಗದವರು. ಸ್ಥಳೀಯ ಮೊಗವೀರ ಸಮುದಾಯ ಶಿಳ್ಳೆಕ್ಯಾತರ ಜೊತೆ ಕ್ಯಾತೆ ತೆಗೆದು ಜಗಳವಾಡಿದ್ದಾರೆ ಎನ್ನಲಾಗಿದೆ. ತಿಕ್ಕಾಟ ನಡೆದು ಅಲೆಮಾರಿಗಳು ಗಾಯಕ್ಕೊಳಗಾಗಿ ಆಸ್ಪತ್ರೆ ಸೇರಿದ್ದಾರೆ.

ಗುಲ್ವಾಡಿ ಹೊಳೆಯಲ್ಲಿ ಕಳೆದ 10 -20 ವರ್ಷಗಳಿಂದ ಶಿಳ್ಳೆಕ್ಯಾತ ಅಲೆಮಾರಿ ಸಮುದಾಯದ ಐದಾರು ಕುಟುಂಬಗಳು ಮೀನು ಹಿಡಿದು ಜೀವನ ನಡೆಸುತ್ತಿದೆ. ನದಿ ಮತ್ತು ಹೊಳೆಯ ತೀರದಲ್ಲಿ ಸಣ್ಣಪುಟ್ಟ ಬಲೆಗಳನ್ನು ಹಾಕಿ ದಿನಗೂಲಿಯನ್ನು ದುಡಿಯುತ್ತಾರೆ. ಇದೇ ವಿಚಾರಕ್ಕೆ ಸ್ಥಳೀಯ ಮೊಗವೀರ ಕಾರ್ವಿ ಸಮುದಾಯದ ನಡುವೆ ಜಗಳ ಶುರುವಾಗಿದೆ. ಹಲವಾರು ವರ್ಷಗಳಿಂದ ಜಗಳ ಹೊಡೆದಾಟಗಳು ನಡೆಯುತ್ತಾ ಬಂದಿದೆ. ಈವರೆಗೆ ವಿಕೊಕಪಕ್ಕೆ ಹೋಗಿರಲಿಲ್ಲ. ಆದರೆ ಕಳೆದ ವಾರ ದೊಡ್ಡ ಮಾರಾ ಮಾರಿಯೇ ನಡೆದುಬಿಟ್ಟಿದೆ.
ಸುಮಾರು 25 ಜನ ಗಂಗೊಳ್ಳಿ ಭಾಗದ ಮೀನುಗಾರರು ತೆಪ್ಪಗಳಿಗೆ ದಾಳಿ ಮಾಡಿದ್ದಾರೆ. ಮಹಿಳೆಯರು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಗುಡಿಸಲು ಗಳಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ ಇನ್ನು ಮುಂದೆ ನದಿಗೆ ಇಳಿಯಬಾರದು ಬಲೆ ಬಿಡಲೇಬಾರದು ಕಸುಬು ನಡೆಸಬಾರದು ಎಂದು ತಾಕೀತು ಮಾಡಿದ್ದಾರೆ. ಹಲ್ಲೆ ನಡೆಸಿದವರು ವಿರುದ್ಧ ಶಿಳ್ಳೆಕ್ಯಾತ ಸಮುದಾಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.

ಅಲೆಮಾರಿ ಸಮುದಾಯ ಜೊತೆ ಕೆಲ ಸಂಘಟನೆಗಳು ಬೆಂಬಲವಾಗಿ ನಿಂತಿದೆ. ಈ ಘಟನೆಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅಲೆಮಾರಿ ಸಮುದಾಯಕ್ಕೆ ಶಿಕ್ಷಣ ಮತ್ತು ಆರ್ಥಿಕ ಶಕ್ತಿಯನ್ನು ಸರಕಾರ ನೀಡಬೇಕು ಎಂದು ಒತ್ತಾಯಿಸಿದೆ.
-
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ












Click it and Unblock the Notifications