ಉಡುಪಿ ಹೊಳೆ ಮೀನುಗಾರಿಕೆಯಲ್ಲಿ ಕಲಹ: ಶಿಳ್ಳೆಕ್ಯಾತರ ಮೇಲೆ ಹಲ್ಲೆ,ಬೆದರಿಕೆ..ದೂರು ದಾಖಲು
ಉಡುಪಿ, ಜೂನ್ 23: ಕರಾವಳಿಯ ಮೊಗವೀರ ಮತ್ತು ಮಲೆನಾಡ ಅಲೆಮಾರಿ ಬೆಸ್ತರು ನಡುವೆ ಕಲಹ ನಡೆದಿದೆ. ಮಾತಿಗೆ ಮಾತು ಬೆಳೆದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ನಮಗೆ ಕೂಲಿ ಮಾಡಲು ಅವಕಾಶ ಕೊಡಿ ಬದುಕಲು ಬಿಡಿ ಎಂದು ಉಡುಪಿ ಜಿಲ್ಲಾಡಳಿತದ ಮುಂದೆ ಶಿಳ್ಳೆಕ್ಯಾತರು ಬೇಡಿಕೆಯಿಟ್ಟಿದ್ದಾರೆ.
ಬಸ್ರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಇರುವ ಇವರು ಕುಂದಾಪುರ ಸುತ್ತಮುತ್ತ ನೆಲೆಸಿರುವ ಶಿಳ್ಳೆಕ್ಯಾತ ಅಲೆಮಾರಿ ಜನಾಂಗದವರು. ಸ್ಥಳೀಯ ಮೊಗವೀರ ಸಮುದಾಯ ಶಿಳ್ಳೆಕ್ಯಾತರ ಜೊತೆ ಕ್ಯಾತೆ ತೆಗೆದು ಜಗಳವಾಡಿದ್ದಾರೆ ಎನ್ನಲಾಗಿದೆ. ತಿಕ್ಕಾಟ ನಡೆದು ಅಲೆಮಾರಿಗಳು ಗಾಯಕ್ಕೊಳಗಾಗಿ ಆಸ್ಪತ್ರೆ ಸೇರಿದ್ದಾರೆ.

ಗುಲ್ವಾಡಿ ಹೊಳೆಯಲ್ಲಿ ಕಳೆದ 10 -20 ವರ್ಷಗಳಿಂದ ಶಿಳ್ಳೆಕ್ಯಾತ ಅಲೆಮಾರಿ ಸಮುದಾಯದ ಐದಾರು ಕುಟುಂಬಗಳು ಮೀನು ಹಿಡಿದು ಜೀವನ ನಡೆಸುತ್ತಿದೆ. ನದಿ ಮತ್ತು ಹೊಳೆಯ ತೀರದಲ್ಲಿ ಸಣ್ಣಪುಟ್ಟ ಬಲೆಗಳನ್ನು ಹಾಕಿ ದಿನಗೂಲಿಯನ್ನು ದುಡಿಯುತ್ತಾರೆ. ಇದೇ ವಿಚಾರಕ್ಕೆ ಸ್ಥಳೀಯ ಮೊಗವೀರ ಕಾರ್ವಿ ಸಮುದಾಯದ ನಡುವೆ ಜಗಳ ಶುರುವಾಗಿದೆ. ಹಲವಾರು ವರ್ಷಗಳಿಂದ ಜಗಳ ಹೊಡೆದಾಟಗಳು ನಡೆಯುತ್ತಾ ಬಂದಿದೆ. ಈವರೆಗೆ ವಿಕೊಕಪಕ್ಕೆ ಹೋಗಿರಲಿಲ್ಲ. ಆದರೆ ಕಳೆದ ವಾರ ದೊಡ್ಡ ಮಾರಾ ಮಾರಿಯೇ ನಡೆದುಬಿಟ್ಟಿದೆ.
ಸುಮಾರು 25 ಜನ ಗಂಗೊಳ್ಳಿ ಭಾಗದ ಮೀನುಗಾರರು ತೆಪ್ಪಗಳಿಗೆ ದಾಳಿ ಮಾಡಿದ್ದಾರೆ. ಮಹಿಳೆಯರು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಗುಡಿಸಲು ಗಳಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ ಇನ್ನು ಮುಂದೆ ನದಿಗೆ ಇಳಿಯಬಾರದು ಬಲೆ ಬಿಡಲೇಬಾರದು ಕಸುಬು ನಡೆಸಬಾರದು ಎಂದು ತಾಕೀತು ಮಾಡಿದ್ದಾರೆ. ಹಲ್ಲೆ ನಡೆಸಿದವರು ವಿರುದ್ಧ ಶಿಳ್ಳೆಕ್ಯಾತ ಸಮುದಾಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.

ಅಲೆಮಾರಿ ಸಮುದಾಯ ಜೊತೆ ಕೆಲ ಸಂಘಟನೆಗಳು ಬೆಂಬಲವಾಗಿ ನಿಂತಿದೆ. ಈ ಘಟನೆಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅಲೆಮಾರಿ ಸಮುದಾಯಕ್ಕೆ ಶಿಕ್ಷಣ ಮತ್ತು ಆರ್ಥಿಕ ಶಕ್ತಿಯನ್ನು ಸರಕಾರ ನೀಡಬೇಕು ಎಂದು ಒತ್ತಾಯಿಸಿದೆ.
-
ಜನವರಿ 9 ರ ದಿನ ಭವಿಷ್ಯ: ಈ ರಾಶಿಯವರಿಗೆ ಹಣಕಾಸಿನಲ್ಲಿ ಸಂಯಮ ಅಗತ್ಯ. -
ಹಸಿಬಿಸಿ ದೃಶ್ಯದಲ್ಲಿ ಯಶ್: ಟ್ರೆಂಡ್ ಆಯ್ತು 'ಟಾಕ್ಸಿಕ್ ಟೀಸರ್ ನೋಡಿದ ರಾಧಿಕಾ ಪಂಡಿತ್ ರಿಯಾಕ್ಷನ್' -
Makar Sankranti: ಯಶವಂತಪುರ - ತಾಳಗುಪ್ಪ ಮಾರ್ಗಕ್ಕೆ ಮತ್ತೊಂದು ರೈಲು: ಇಲ್ಲಿದೆ ಸಂಪೂರ್ಣ ವಿವರ -
ಬೆಂಗಳೂರು: ಮಾಗಡಿ-ಮೈಸೂರು ಪ್ರಮುಖ ರಸ್ತೆಯ ಉದ್ಘಾಟನೆ ದಿನಾಂಕದ ಬಗ್ಗೆ ಮಹತ್ವದ ಅಪ್ಡೇಟ್ -
Tour Package: ಪ್ರವಾಸೋದ್ಯಮ ಇಲಾಖೆಯಿಂದ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ, ಎಲ್ಲಿಂದ-ಎಲ್ಲಿಗೆ? -
ನಾವು ಇಲ್ಲದಿದ್ದರೆ ಬೆಂಗಳೂರು ಶೂನ್ಯ: ಗ್ರೇಟ್ ಕೇರಳ ಟ್ವೀಟ್, ಕನ್ನಡಿಗರು ಹೇಳಿದ್ದೇನು -
School: ಕರ್ನಾಟಕದ ಶಾಲೆಗಳಲ್ಲಿ ಹಾಜರಾತಿ ವಿಚಾರದಲ್ಲಿ ಮಹತ್ವದ ಬದಲಾವಣೆ! -
ಜನವರಿ 8ರ ದಿನ ಭವಿಷ್ಯ: ಈ ರಾಶಿಯವರಿಗೆ ಆರೋಗ್ಯದಲ್ಲಿ ಸಮಸ್ಯೆ -
ಇದು ನಮ್ ಪ್ರಾಬ್ಲಂ ಸೋಮಣ್ಣ ಸಾರ್: ಗೋಳು ತೋಡಿಕೊಂಡ ಬೆಂಗಳೂರು - ಮೈಸೂರು ರೈಲು ಪ್ರಯಾಣಿಕರು -
ಹಸಿ ದೃಶ್ಯಗಳ ಟೀಸರ್ ಯುಟ್ಯೂಬ್ಗೆ ಬಂದ್ರೆ ಮಕ್ಕಳು ನೋಡಲ್ವಾ? ಟಾಕ್ಸಿಕ್ ಬಗ್ಗೆ ಮನಃಶಾಸ್ತಜ್ಞೆಯ ಪ್ರಶ್ನೆ -
Shreyanka Patil: ಡಬ್ಲ್ಯೂಪಿಎಲ್ ಆರಂಭಕ್ಕೂ ಮುನ್ನ ಆರ್ಸಿಬಿ ಆಲ್ರೌಂಡರ್ ಕನ್ನಡತಿ ಶ್ರೇಯಾಂಕಾ ಪಾಟೀಲ್ ಹೇಳಿಕೆ ಭಾರೀ ವೈರಲ್ -
ಲಿವಿನ್ ಅಪ್ಪ, ಪತಂಗದಂಥ ಅಮ್ಮ, ಮಗನ ಬದುಕು ಅಯೋಮಯ: ಡಾ ರೂಪಾ ರಾವ್ ಬರಹ












Click it and Unblock the Notifications