ಉಡುಪಿ: ಬಿ.ಆರ್.ಶೆಟ್ಟಿ ಆಸ್ಪತ್ರೆ ವಿರುದ್ಧ ಉದ್ಘಾಟನೆಯಂದೇ ಪ್ರತಿಭಟನೆ
ಉಡುಪಿ, ನವೆಂಬರ್ 19: ನಗರದಲ್ಲಿ ನಿರ್ಮಿಸಲಾಗಿರುವ ಉದ್ಯಮಿ ಡಾ. ಬಿ.ಆರ್.ಶೆಟ್ಟಿ ಆಸ್ಪತ್ರೆಗೆ ಜನರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಅಬುಧಾಬಿಯಲ್ಲಿ ವಿಜೃಂಭಿಸಿದ ಕನ್ನಡ ರಾಜ್ಯೋತ್ಸವ
ಉಡುಪಿಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆಗೊಳಿಸಿದ ಆಸ್ಪತ್ರೆ ವಿರುದ್ಧ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇಲ್ಲಿನ ಅಜ್ಜರಕಾಡು ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಸರಕಾರ ಮತ್ತು ಬಿ.ಆರ್. ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
'ಮಹಾಭಾರತ ಸಿನಿಮಾಕ್ಕೆ ಮೋದಿ, ಮೇಕ್ ಇನ್ ಇಂಡಿಯಾವೇ ಸ್ಫೂರ್ತಿ!
ಉದ್ಯಮಿ ಬಿ.ಆರ್.ಶೆಟ್ಟಿ ಸರಕಾರಿ ಜಾಗದಲ್ಲಿ ಅರೆ ಸರಕಾರಿ ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ. ಈ ಜಾಗವನ್ನು ದಾನಿ ಹಾಜಿ ಅಬ್ದುಲ್ಲಾ ನೀಡಿದ್ದು ಇಲ್ಲಿ ಈ ಹಿಂದೆ ಜಿಲ್ಲಾ ಆಸ್ಪತ್ರೆ ಇತ್ತು. ಇದನ್ನು ಕೆಡವಿ ಆಸ್ಪತ್ರೆ ಅರೆ ಸರಕಾರಿ ಆಸ್ಪತ್ರೆ ನಿರ್ಮಾಣ ಮಾಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Comments
English summary
Businessman Dr. BR Shetty’s Hospital has received huge opposition from the people in Udupi on it’s inauguration day on November 19.