ಕೋಟ ಡಬಲ್ ಮರ್ಡರ್ ಪ್ರಕರಣ:ಎಲ್ಲಾ ಆರೋಪಿಗಳ ಬಂಧನ
ಉಡುಪಿ, ಫೆಬ್ರವರಿ 15:ಉಡುಪಿಯನ್ನೇ ಬೆಚ್ಚಿ ಬೀಳಿಸಿದ್ದ ಕೋಟ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಕೋಟದಲ್ಲಿ ನಡೆದಿದ್ದ ಭರತ್ ಮತ್ತು ಯತೀಶ್ ಜೋಡಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಡಬಲ್ ಮರ್ಡರ್ ಪ್ರಕರಣದಲ್ಲಿ ನೇರ ಭಾಗಿಯಾಗಿರುವ ಆರೋಪಿಗಳಾದ ಚಂದ್ರಶೇಖರ ರೆಡ್ಡಿ ಹಾಗೂ ಮಲ್ಪೆ ತೊಟ್ಟಂ ನಿವಾಸಿ ರತೀಶ್ ಕರ್ಕೆರಾ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರ ಬಂಧನದ ಮೂಲಕ ಒಟ್ಟು ಆರೋಪಿಗಳ ಸಂಖ್ಯೆ 15ಕ್ಕೇರಿದೆ.
ಕೋಟ ಡಬಲ್ ಮರ್ಡರ್:ಉಡುಪಿ ಜಿ.ಪಂ.ಸದಸ್ಯ ಸೂತ್ರಧಾರಿ, ಬಂಧಿತರ ಸಂಖ್ಯೆ 6ಕ್ಕೆ ಏರಿಕೆ
ಉಡುಪಿಯ ಕೋಟದಲ್ಲಿ ಜನವರಿ.26ರ ತಡರಾತ್ರಿ ಭರತ್ ಮತ್ತು ಯತೀಶ್ ಅವರನ್ನು ಭೂವಿವಾದಕ್ಕೆ ಸಂಬಧಿಸಿದಂತೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬಿಜೆಪಿ ಜಿ.ಪಂ.ಸದಸ್ಯ ಹಾಗೂ ಇಬ್ಬರು ಪೊಲೀಸ್ ಸಂಬಂಧಿಗಳನ್ನು ಕೋಟ ಪೊಲೀಸರು ಬಂಧಿಸಿದ್ದರು.
ಇತ್ತೀಚೆಗೆ ಭರತ್ ಮತ್ತು ಯತೀಶ್ ಕೊಲೆ ವಿಚಾರದಲ್ಲಿ ಮನೆಯವರು ಮತ್ತು ಊರಿನವರು ಆರೋಪಿಗಳಿಗೆ ತಕ್ಕ ಶಾಸ್ತಿಯಾಗುವಂತೆ ದೇವರಿಗೆ ಮೊರೆ ಹೋಗಿದ್ದರು.
ಕೋಟ ಡಬಲ್ ಮರ್ಡರ್:ಪ್ರಮುಖ ಆರೋಪಿಗಳಿಬ್ಬರ ಬಂಧನ
ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನಕ್ಕೆ ಮೃತರ ಕುಟುಂಬಿಕರು, ಊರ ನಾಗರಿಕರಿಂದ ದೇವಿಗೆ ಹುಯಿಲು ಕೊಟ್ಟಿದ್ದರು. ಊರ ಮಕ್ಕಳಿಗಾದ ಅನ್ಯಾಯಕ್ಕೆ ನ್ಯಾಯ ಒದಗಿಸುವಂತೆ ಕೋರಿಕೊಂಡಿದ್ದರು.