ಚಿನ್ನದಂಗಡಿಯಲ್ಲಿ ಕಳ್ಳತನ : 1 ಕೋಟಿ ಮೌಲ್ಯದ ಚಿನ್ನಾಭರಣ ಕಳವು
ಚಿನ್ನಾಭರಣ ಅಂಗಡಿಯಲ್ಲಿ ಕಳ್ಳತನ ಮಾಡಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನ ಜ್ಯವೆಲರಿ ಶಾಪ್ ನಲ್ಲಿ ನಡೆದಿದೆ. ಅಂಗಡಿಯ ಸಂಪೂರ್ಣ ಮಾಹಿತಿ ಇರುವವರೆ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಉಡುಪಿ, ಎಪ್ರಿಲ್ 4: ಚಿನ್ನಾಭರಣ ಅಂಗಡಿಯಲ್ಲಿ ಕಳ್ಳತನ ಮಾಡಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನ ಜ್ಯವೆಲರಿ ಶಾಪ್ ನಲ್ಲಿ ನಡೆದಿದೆ.
ಗೋಲ್ಡನ್ ಜ್ಯೂವೆಲ್ಲರ್ಸ್ ಎಂಬ ಅಂಗಡಿಯ ಗೋಡೆ ಕೊರೆದು ಹಿಂಭಾಗದಿಂದ ನುಗ್ಗಿದ ಕಳ್ಳರು ಎರಡೂವರೆ ಕೆಜಿ ಚಿನ್ನ, ನಾಲ್ಕು ಕೆ.ಜಿ. ಬೆಳ್ಳಿ ಕಳ್ಳತನ ಮಾಡಿದ್ದಾರೆ. ಇದು ನೂರುಲ್ಲಾ ಅಹ್ಮದ್ ಎನ್ನುವವರಿಗೆ ಜ್ಯೂವೆಲ್ಲರ್ಸ್ ಅಂಗಡಿಯಾಗಿದೆ.[ಉಡುಪಿಯಲ್ಲಿ ಏಪ್ರಿಲ್ ಅಂತ್ಯಕ್ಕೆ ಮೋಜಿನ ಹೆಲಿಕಾಪ್ಟರ್ ಹಾರಾಟ ಆರಂಭ]

ಶಾಪ್ ನ ಹಿಂಭಾಗದಲ್ಲಿದ್ದ ಚಿಕ್ಕ ಕಿಟಕಿಯನ್ನು ಗ್ಯಾಸ್ ಕಟ್ಟರ್ ಮೂಲಕ ಕೊರೆದು ಒಳನುಗ್ಗಿದ ಕಳ್ಳರು ಒಂದು ಕೋಟಿಗೂ ಮಿಕ್ಕಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಅಂಗಡಿಯಲ್ಲಿರುವ ಸಿ.ಸಿ. ಕ್ಯಾಮರಾ ಇತ್ತು. ಆದರೆ ಇದರ ಸಂಪರ್ಕವನ್ನು ಕಡಿತಗೊಳಿಸಿ, ಹಾರ್ಡ್ ಡಿಸ್ಕ್ ಅನ್ನು ಸಹ ಕೊಂಡೊಯ್ಯಲಾಗಿದೆ.[ಕಣ್ಣು ಕಾಣದಿದ್ದರೇನಂತೆ, ಚೆಸ್ ಬೋರ್ಡ್ ಮೇಲೆ ಇವರೇ ಚಾಂಪಿಯನ್]

ಅಂಗಡಿಯ ಸಂಪೂರ್ಣ ಮಾಹಿತಿ ಇರುವವರೆ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications