ರಸ್ತೆ ಕಾಮಗಾರಿ ನೆಪದಲ್ಲಿ ಕೋಟಿ ಕೋಟಿ ಹಣ ಗುಳುಂ ಸ್ವಾಹ!
ಈ ರಸ್ತೆ ನೋಡಿ ಎಲ್ಲೋ ಪಾಕ್ ಆಕ್ರಮಿತ ಕಾಶ್ಮೀರದ್ದು ಅಂದುಕೊಳ್ಳಬೇಡಿ. ನಮ್ಮದೇ ರಾಜ್ಯದ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ಗಡಿ ಪ್ರದೇಶವಾಗಿರುವ ಬೈಂದೂರು ತಾಲೂಕಿನಿಂದ 32 ಕಿಲೋಮೀಟರ್ ಸಾಗಿದರೆ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿರುವ ಯಡಮೊಗ್ಗೆ ಗ್ರಾಮದ ದುಸ್ಥಿತಿ ಇದು.
ಈ ರಸ್ತೆಯ ಫೋಟೋ ಮತ್ತು ವೀಡಿಯೋಗಳನ್ನು ಸರಿಯಾಗಿ ನೋಡಿ. ವೀಡಿಯೋ ನೋಡಿ,ಫೋಟೋ ನೋಡಿದ್ರೆನೆ ಬೆಚ್ಚಿ ಬೀಳೋ ಪರಿಸ್ಥಿತಿ ಇದೆ. ಇನ್ನು ಈ ರಸ್ತೆಯಲ್ಲಿ ದಿನಾ ಸಂಚರಿಸುವವರ ಪಾಡು ಹೇಗಿರಬೇಡ ಹೇಳಿ? ಬಸುರಿ ಹೆಂಗಸರನ್ನೇನಾದರೂ ಈ ರಸ್ತೆಯಲ್ಲಿ ಕರೆದುಕೊಂಡು ಹೋದರೆ ಹೆರಿಗೆಗೆ ಆಸ್ಪತ್ರೆ ತಲುಪುವುದೇ ಬೇಡ!
ಸೇತುವೆ ನೋಡಿದ್ರೆ ಈಗ ಬೀಳುತ್ತೋ ಅಥವಾ ಆಮೇಲೆ ಬೀಳುತ್ತೋ ಅನ್ನೋ ಪರಿಸ್ಥಿತಿ. ಈ ಸೇತುವೆ ನಿರ್ಮಾಣ ಗೊಂಡು 50 ವರ್ಷಗಳಿಗೂ ಹೆಚ್ಚಾಗಿದೆ. ನಿರ್ಮಸಿದ್ದು ಬಿಟ್ಟರೆ ಅದರ ನಂತರ ಇದರ ದುರಸ್ತಿ ಕಾರ್ಯವೇ ಆಗಿಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದ್ರೂ ರಸ್ತೆ ನಿರ್ಮಾಣ ಕಾರ್ಯ ಒಂದು ಬಾರಿಯೂ ಆಗಿಲ್ಲ.
ತೀರಾ ಕುಗ್ರಾಮ ಒಂದೆಡೆಯಾದರೆ ನಕ್ಸಲ್ ಪೀಡಿತ ಪ್ರದೇಶ ಎಂಬ ಹಣೆಪಟ್ಟಿಯಲ್ಲಿರುವ ಗ್ರಾಮ ಯಡಮೊಗ್ಗೆ.
ಪ್ರತಿ ನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಸೇತುವೆ ಸರಿ ಮಾಡಿ, ರಸ್ತೆ ರಿಪೇರಿ ಮಾಡಿಕೊಡಿ ಎಂದು ಇಲ್ಲಿನ ಗ್ರಾಮಸ್ಥರು ಅದೆಷ್ಟು ಬಾರಿ ಅಧಿಕಾರಿಗಳ ಕಾಲು ಹಿಡ್ಕೊಂಡಿದ್ದಾರೋ ಆ ದೇವರಿಗೇ ಗೊತ್ತು. ಇವತ್ತು, ನಾಳೆ, ಕೇಂದ್ರ ಸರ್ಕಾರ, ರಾಜ್ಯಸರ್ಕಾರ ಅಂತ ಅಡಗೋಲಜ್ಜಿ ಕಥೆ ಹೇಳಿ ಗ್ರಾಮಸ್ಥರನ್ನು ವಾಪಾಸ್ ಕಳಿಸಲಾಗುತ್ತಿದೆ.

ರಸ್ತೆ ಕಾಮಗಾರಿ ನೆಪದಲ್ಲಿ ಕೋಟಿ ಕೋಟಿ ಹಣ ಗುಳುಂ ಸ್ವಾಹ!
ಓಟು ಕೇಳುವ ಸಂದರ್ಭದಲ್ಲಿ ಮಾತ್ರವೇ ಈ ಊರಿನಲ್ಲಿ ಪ್ರತ್ಯಕ್ಷವಾಗುವ ರಾಜಕಾರಣಿಗಳು ಆಮೇಲೆ ಮುಖ ಸಹ ಹಾಕೋದಿಲ್ಲ. ಇಲ್ಲಿನ ರಸ್ತೆಗಳ ನಿರ್ಮಾಣ ಕಾರ್ಯಕ್ಕಾಗಿ ಸಿಆರ್ ಎಫ್ ನ ಹಣ ಬಿಡುಗಡೆಗೊಂಡಿರೋದು ಎಷ್ಟು ಗೊತ್ತಾ? ಬರೋಬ್ಬರಿ 2,138.69 ಕೋಟಿ ರುಪಾಯಿಗಳು. ಆದರೆ ಅಧಿಕಾರಿಗಳನ್ನು ಕೇಳಿದ್ರೆ 2 ಕೋಟಿ ಬಿಡುಗಡೆಯಾಗಿದೆ. ಈ ಸಲ ನಿಮ್ಮ ರಸ್ತೆನಾ ಹೈವೇ ತರಹ ಮಾಡಿಕೊಡ್ತೀವಿ ಅಂತ ಬಂಡಲ್ ಬಡಾಯಿ ಬಿಡ್ತಾ ಇದ್ದಾರೆ. ಇಂತಹ ಸುಳ್ಳು ಕಥೆಗಳನ್ನು ಗ್ರಾಮಸ್ಥರು ಇದೀಗ ಹಲವು ವರ್ಷಗಳಿಂದ ಕೇಳುತ್ತಲೇ ಬಂದಿದ್ದಾರೆ. ಹಣ ಎಲ್ಲಿ ಹೋಯ್ತೋ.ಅದ್ಯಾವ್ಯಾವ ಅಧಿಕಾರಿಯ ಹೊಟ್ಟೆ ತುಂಬಿಸ್ತೋ , ಯಾರ್ಯಾರು ಗುಳುಂ ಸ್ವಾಹ ಮಾಡಿದ್ರೋ ಆ ದೇವರಿಗೇ ಗೊತ್ತು. ಗ್ರಾಮಸ್ಥರು ಮಾತ್ರ ದಿನಾ ಈ ರಸ್ತೆಯಲ್ಲಿ ಓಡಾಡುವಾಗ ಜೀವ ಕೈಯಲ್ಲಿ ಹಿಡ್ಕೊಂಡಿರ್ತಾರೆ.

ಕಮಲಶಿಲೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆ
ಹೊಸಂಗಡಿಯಿಂದ ಯಡಮೊಗ್ಗೆ ಮೂಲಕ ಕಮಲಶಿಲೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸುಮಾರು 10 ಕಿಲೋಮೀಟರ್ ಇದೆ. ಎಂಎಲ್ಎ ಸುಕುಮಾರ್ ಶೆಟ್ರು ಇಲ್ಲಿಗೆ ಕಾಲಿಟ್ಟಿದ್ದು ಎಲೆಕ್ಷನ್ ಸಮಯದಲ್ಲಿ. ಇನ್ನು ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಈ ಸೇರುವ ಈ ಜಾಗಕ್ಕೆ ಇಲ್ಲಿಂದ ಆಯ್ಕೆಯಾದ ಎಂಪಿ ರಾಘವೇಂದ್ರ ಅವರು ಕಾಲಿಟ್ಟಿದ್ದು ಕೂಡ ಎಲೆಕ್ಷನ್ ಸಮಯದಲ್ಲಿ ಮಾತ್ರ. ಈ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿರುವ ಅಧಿಕಾರಿಗಳು ಇತ್ತ ಕಡೆ ತಲೆ ಹಾಕಿದ ದಾಖಲಾತಿಯೇ ಇಲ್ಲ.

ಗ್ರಾಮಸ್ಥರೇ ಸ್ವತಃ ಲಕ್ಷಾಂತರ ರುಪಾಯಿ ಖರ್ಚು ಮಾಡಿದ್ದಾರೆ
ಹಾಳಾಗಿರೋ ಸೇತುವೆ, ಹೊಂಡ ಬಿದ್ದಿರೋ ರಸ್ತೆಗಾಗಿ ಗ್ರಾಮಸ್ಥರೇ ಸ್ವತಃ ಲಕ್ಷಾಂತರ ರುಪಾಯಿ ಖರ್ಚು ಮಾಡಿದ್ದಾರೆ. ಆದರೆ ಈ ಬಾರಿಯ ಮಳೆಯಿಂದ ಅವರು ಮಾಡಿದ ಕೆಲಸವೆಲ್ಲಾ ಪುನಃ ಶಿಥಿಲವಾಗಿದೆ. ಸೇತುವೆಯ ಪಿಲ್ಲರ್ ಗೆ ಅಳವಡಿಸಿದ ಶಿಲೆಗಲ್ಲುಗಳು ಕುಬ್ಜಾ ನದಿಯ ರಭಸಕ್ಕೆ ಕೊಚ್ಚಿ ಹೋಗಿದೆ. ಸ್ಲ್ಯಾಬ್ ಮೇಲ್ಬಾಗದಲ್ಲಿ ದೊಡ್ಡ ಹೊಂಡ ಬಿದ್ದಿದೆ. ಸ್ವಲ್ಪ ಯಾಮಾರಿದ್ರೆ ಖಂಡಿತ ಕುಬ್ಜಾ ನದಿಯಲ್ಲಿ ಕೊಚ್ಚಿ ಹೋಗಬೇಕಾಗುತ್ತದೆ.

ರಸ್ತೆ ರಸ್ತೆ ಇಲ್ಲದೆ ಸಂಚಾರಕ್ಕೆ ಪರದಾಡುತ್ತಿರುವ ಜನರು
ಪ್ರತಿ ದಿನ ಸರಿಯಾದ ರಸ್ತೆ ಇಲ್ಲದೆ ಸಂಚಾರಕ್ಕೆ ಪರದಾಡುತ್ತಿರುವ ಜನರ ಗೋಳನ್ನು ಆದಷ್ಟು ಬೇಗ ಸಂಬಂಧಪಟ್ಟವರು ಪರಿಹರಿಸಬೇಕಾಗಿದೆ. ಸರ್ಕಾರವೇ ಬಿಡುಗಡೆಗೊಳಿಸಿರುವ ಹಣ ಎಲ್ಲಿ ಹೋಗಿದೆ ಎಂದು ತಿಳಿಯಬೇಕಾಗಿದೆ. ಹೀಗೆ ಕೋಟಿ ಕೋಟಿ ಹಣ ನುಂಗಣ್ಣರ ಪಾಲಾಗದೆ ಜನರ ಸೇವೆಗೆ ಬಳಕೆಯಾಗಬೇಕಾಗಿದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications