ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ಬಸ್ ನಿಲ್ದಾಣದಲ್ಲಿ ಅವಳಿ ಮಕ್ಕಳ ಬಿಟ್ಟು ಹೋದ ಪೋಷಕರು!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ 27 : ಎರಡು ಮಕ್ಕಳನ್ನು ಬಿಟ್ಟು ದಂಪತಿಗಳು ಪರಾರಿಯಾಗಲು ಯತ್ನಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಕೆಎಸ್ಆರ್‌ಟಿಸಿ ಬಸ್ ನಿಲ್ಧಾಣದಲ್ಲಿ ಈ ಘಟನೆ ನಡೆದ್ದಿದ್ದು, ದಂಪತಿಗಳನ್ನು ಬಾಗಲಕೋಟೆಯ ಮುಧೋಳ ಮೂಲದವರು ಎಂದು ಗುರುತಿಸಲಾಗಿದೆ.

ಮಕ್ಕಳನ್ನು ಬಿಟ್ಟು ಪರಾರಿಯಾಗಲು ಯತ್ನಿಸಿದ ದಂಪತಿ ಅರುಣ್ ಮತ್ತು ಭಾರತಿ. ಮಂಗಳೂರಿನಲ್ಲಿ ಕೆಲಸ ಮಾಡುವಾಗ ಇಬ್ಬರಿಗೂ ಪರಿಚಯವಾಗಿತ್ತು ಆರು ವರ್ಷದ ಹಿಂದೆ ಇವರಿಬ್ಬರು ವಿವಾಹವಾಗಿದ್ದರು. ಆದರೆ, ಅಂತರ್ ಜಾತಿ ವಿವಾಹವಾದ ಕಾರಣ ಮನೆಯಿಂದ ಹೊರಹಾಕಲಾಗಿತ್ತು.

ತೆರೆಯದ ಆಂಬ್ಯುಲೆನ್ಸ್ ಬಾಗಿಲು, ಮಗುವಿನ ದಾರುಣ ಸಾವು ತೆರೆಯದ ಆಂಬ್ಯುಲೆನ್ಸ್ ಬಾಗಿಲು, ಮಗುವಿನ ದಾರುಣ ಸಾವು

ಬಾಗಲಕೋಟೆಯಲ್ಲೇ ಇದ್ದ ಜೋಡಿ, ಇತ್ತೀಚಿಗೆ ಇಬ್ಬರು ಅವಳಿ ಗಂಡು‌ಮಕ್ಕಳನ್ನು ಪಡೆದಿದ್ದರು. ಶುಕ್ರವಾರ ಉಡುಪಿಗೆ ಬಸ್ ಮೂಲಕ ಬಂದಿದ್ದ ದಂಪತಿ ಇಬ್ಬರು ಮಕ್ಕಳನ್ನು ಬಿಟ್ಟು ಹೋಗಲು ಯತ್ನಿಸಿದ್ದಾರೆ, ಅಷ್ಟರಲ್ಲಿ ಜನರ ಕೈಗೆ ಸಿಕ್ಕಿಬಿದ್ದಿದ್ದಾರೆ.

Parents leave the children in Udupi bus stand

ಜನರು ಈ ಕುರಿತು ಸಾಮಾಜಿಕ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ಪೋಷಕರ ಜೊತೆ ಮಾತುಕತೆ ನಡೆಸಿದ ಕಾರ್ಯಕರ್ತರು ಮಕ್ಕಳನ್ನು ಕರೆದೊಯ್ಯುವಂತೆ ಸೂಚಿಸಿದರು. ಆದರೆ, ಮಕ್ಕಳನ್ನು ಸಾಕಲು ಕಷ್ಟ ಎಂದು ಹೆತ್ತವರು ಅಲವತ್ತುಕೊಂಡರು.

ಅಂತಿಮವಾಗಿ ಮಕ್ಕಳನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರ ಮಾಡಲಾಯಿತು.

English summary
Bagalkot based Arun and Bharathi left the children in the Udupi KSRTC bus stand on July 27, 2018. Later children hand over to the child rescue committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X