ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಯನೀ ಏಕಾದಶಿ ವಿಶೇಷ, ಪೇಜಾವರ ಶ್ರೀಗಳಿಂದ ನೃತ್ಯ ಸೇವೆ

|
Google Oneindia Kannada News

ಉಡುಪಿ, ಜುಲೈ 6: ಶಯನೀ ಏಕಾದಶಿಯಾದ ಬುಧವಾರ ಉಡುಪಿಯಲ್ಲಿ ಅಪರೂಪದ ಸನ್ನಿವೇಶಕ್ಕೆ ಭಕ್ತರು ಸಾಕ್ಷಿಯಾದರು. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕೃಷ್ಣ ಮಠದಲ್ಲಿ ತುಳಸಿ ತುಂಬಿದ ಹರಿವಾಣವನ್ನು ತಲೆಯ ಮೇಲಿಟ್ಟು 'ಡಂಗುರವ ಸಾರಿ ಹರಿಯ' ಎಂಬ ದಾಸರ ಪದಕ್ಕೆ ಹೆಜ್ಜೆ ಹಾಕುವ ಮೂಲಕ ದೇವರಿಗೆ ನೃತ್ಯ ಸೇವೆ ಸಲ್ಲಿಸಿದರು.

ಆಷಾಢ ಏಕಾದಶಿ ದಿನ ಉಪವಾಸ ಏಕೆ ಮಾಡಬೇಕು?ಆಷಾಢ ಏಕಾದಶಿ ದಿನ ಉಪವಾಸ ಏಕೆ ಮಾಡಬೇಕು?

ಕೃಷ್ಣನಿಗೆ ರಾತ್ರಿ ಪೂಜೆ ಸಲ್ಲಿಸಿದ ನಂತರ ಸೂರ್ಯವಾದ್ಯ, ನಾದಸ್ವರ, ಸಂಕೀರ್ತನೆ, ಸಂಗೀತ, ಭಾಗವತ ಪುರಾಣಗಳು ಚಂದ್ರಶಾಲೆಯಲ್ಲಿ ನಡೆದವು. ಆ ನಂತರ ದೇವರ ಎದುರಿನ ಮಂಟಪದಲ್ಲಿ ಇಬ್ಬರೂ ಯತಿಗಳು ಮಂಗಳಾರತಿ ಮಾಡಿದರು. ಅದಾದ ಮೇಲೆ ತುಳಸಿ ತುಂಬಿದ ಹರಿವಾಣವನ್ನು ತಲೆಯ ಮೇಲೆ ಇಟ್ಟುಕೊಂಡು ದಾಸರ ಪದಕ್ಕೆ ನೃತ್ಯ ಮಾಡಿ ಸೇವೆ ಸಲ್ಲಿಸಿದರು.

Nrutya seva to god from Pejawar Seer in Udupi

ಆ ನಂತರ ಪ್ರದಕ್ಷಿಣೆ ಹಾಕಿದರು. ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತೀಕ ಮಾಸದ ಶುಕ್ಲ ಪಕ್ಷದ ಏಕಾದಶಿಯವರೆಗೆ ಚಾತುರ್ಮಾಸ್ಯ ವ್ರತಾಚರಣೆ ನಡೆಯಲಿದ್ದು. ಈ ಮಧ್ಯದ ಎಂಟು ಏಕಾದಶಿಗಳಂದು ಈ ರೀತಿಯ ಆಚರಣೆ ನಡೆಯುತ್ತದೆ.

English summary
Nrutya seva to god from Pejawar Seer in Udupi on the occasion of Shayani ekadashi (Wednesday).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X