ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಣಿಪಾಲದಲ್ಲಿ ಬೆಂಕಿ ಅವಘಡ, ಧಗಧಗನೆ ಹೊತ್ತಿ ಉರಿದ ವಾಣಿಜ್ಯ ಸಮುಚ್ಛಯ

|
Google Oneindia Kannada News

ಉಡುಪಿ, ಮಾರ್ಚ್ 20: ಉಡುಪಿಯಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದೆ. ನಗರ ಹೊರವಲಯದ ಮಣಿಪಾಲದಲ್ಲಿ ವಾಣಿಜ್ಯ ಸಮುಚ್ಛಯವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅವಘಡದಿಂದಾಗಿ ಕಟ್ಟಡ ಬಹುತೇಕ ಬೆಂಕಿಗಾಹುತಿಯಾಗಿದೆ.

ಮಣಿಪಾಲದ ಈಶ್ವರನಗರದಲ್ಲಿರುವ ಸಪ್ತಮಿ ಎನ್ನುವ ವಾಣಿಜ್ಯ ಸಂಕೀರ್ಣದಲ್ಲಿ ಈ ಅವಘಡ ಸಂಭವಿಸಿದ್ದು, ಕಟ್ಟಡದ ನಾಲ್ಕು ಮಳಿಗೆಗೂ ಬೆಂಕಿ ಆವರಿಸಿಕೊಂಡಿದೆ.

ಕಟ್ಟಡದಲ್ಲಿರುವ ಪೇಯಿಂಟ್ ಅಂಗಡಿಯಲ್ಲಿ ಉಂಟಾದ ಶಾಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡಿದೆ ಎಂದು ಹೇಳಲಾಗಿದೆ. ಬೆಂಕಿ ಪೇಯಿಂಟ್ ಅಂಗಡಿ ಮಾತ್ರಲ್ಲದೆ, ಪಕ್ಕದಲ್ಲೇ ಇದ್ದ ಡಾಲ್ಫಿನ್‌ ಹೋಟೆಲ್, ತರಕಾರಿ ಅಂಗಡಿ ಸೇರಿದಂತೆ ಇನ್ನಿತರ ಅಂಗಡಿ, ಕಚೇರಿಗಳಿಗೂ ಆವರಿಸಿದೆ.

Fire broke out at Commercial Complex in Manipal

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

English summary
Fire broke out at Sapthami Building in Manipal. Firefighters rushed to the spot. Exact cause for outbreak of fire is short circuit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X