ವಯಾಗ್ರಾ ಓವರ್ ಡೋಸ್, ಯುವಕ ಸಾವು
ತಿಪಟೂರು, ಆ.20 : ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ತಡಸೂರು ಗ್ರಾಮದ ಚೇತನ್ ಎಂಬ ಯುವಕ ದುರಂತ ಸಾವಿಗೀಡಾಗಿದ್ದಾನೆ. ತನ್ನ ಗೆಳತಿಯೊಡನೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಲೇ ಸಾವನ್ನಪ್ಪಿದ್ದಾನೆ. ಅತಿಯಾಗಿ ಕಾಮೋತ್ತೇಜಕ ಮಾತ್ರೆ ಸೇವಿಸಿದ ಕಾರಣ ಚೇತನ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಬೇರೆ ಯಾವುದೇ ಚಟ ಇಲ್ಲದ 24 ವರ್ಷ ವಯಸ್ಸಿನ ಚೇತನ್ ಕುಮಾರ್ ಗೆ ನಿರಂತರ ಸೆಕ್ಸ್ ಮಾಡುವ ಅಭ್ಯಾಸ ಬೆಳೆದುಬಿಟ್ಟಿತ್ತು. ಇನ್ನೂ ಅವಿವಾಹಿತನಾಗಿದ್ದ ಚೇತನ್ ನ ಕೋರಿಕೆಯನ್ನು ಪುರಸ್ಕರಿಸಲು ಆತನಿಗೊಬ್ಬಳು ಗೆಳತಿ ಇದ್ದಳು.
ಶಿವಲಿಂಗಯ್ಯ ಹಾಗೂ ಗೌರಮ್ಮ ದಂಪತಿಯ ಪುತ್ರ ಚೇತನ್ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ. ಆತನ ಬಗ್ಗೆ ಎಲ್ಲರೂ ಒಳ್ಳೆ ಮಾತನಾಡುತ್ತಿದ್ದರು. ಆದರೆ, ಈಗ ಅತಿಯಾದ ಕಾಮದಾಸೆಯಿಂದ ಸಾವನ್ನಪ್ಪಿದ್ದಲ್ಲದೆ ಶಿವಲಿಂಗಯ್ಯ ದಂಪತಿಗಳು ಊರಿನಲ್ಲಿ ತಲೆ ಎತ್ತಿಕೊಂಡು ಓಡಾಡಲು ಆಗದ ಪರಿಸ್ಥಿತಿ ತಂದೊಡ್ಡಿದ್ದಾನೆ.
ಪೊಲೀಸರ ಪ್ರಕಾರ, ಚೇತನ್ ಗೆ ಒಬ್ಬ ಗೆಳತಿ ಇದ್ದಳು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಒಂದು ದಿನ ಲೈಂಗಿಕ ಕ್ರಿಯೆಗೆ ಆಹ್ವಾನ ನೀಡಿದ್ದಾನೆ. ಅಕೆ ಕೂಡಾ ಒಪ್ಪಿದ್ದಾಳೆ. ಇಬ್ಬರಿಗೂ ನೆಲೆ ಒದಗಿಸಲು ಪ್ರಕಾಶ್ ಎಂಬ ಸ್ನೇಹಿತ ಒಪ್ಪಿಕೊಂಡಿದ್ದಾನೆ. ಊರಿನ ಶಾಲೆ ಬಳಿ ಇದ್ದ ಸ್ನೇಹಿತನ ರೂಮಿನಲ್ಲಿ ಆಗಾಗ ಇಬ್ಬರು ಸಂಧಿಸುತ್ತಿರುತ್ತಾರೆ.

ಆತನಿಗೆ ಸಮಸ್ಯೆ ಇತ್ತು: ಲೈಂಗಿಕವಾಗಿ ನನ್ನ ಹುಡುಗಿಗೆ ತೃಪ್ತಿ ನೀಡಲಾಗುತ್ತಿಲ್ಲ ಎಂಬ ಕೊರಗು ಚೇತನ್ ನನ್ನು ಕಾಡುತ್ತಿತ್ತು. ಚೇತನ್ ಗೆ ಶೀಘ್ರಸ್ಖಲನ ಸಮಸ್ಯೆ ಇತ್ತು ಎನ್ನಲಾಗಿದೆ. ಹೀಗಾಗಿ ಗೆಳೆಯರ ಸಲಹೆ ಮೇರೆಗೆ ಕಾಮೋತ್ತೇಜಕ ಮಾತ್ರೆ ವಯಾಗ್ರಾ ತೆಗೆದುಕೊಳ್ಳಲು ನಿರ್ಧರಿಸಿದ್ದಾನೆ.
ಆದರೆ, ಸೂಕ್ತ ಮಾರ್ಗದರ್ಶನವಿಲ್ಲದೆ ಅತಿಯಾದ ಮಾತ್ರೆ ಸೇವಿಸಿ ಕಾಮದಾಟಕ್ಕಿಳಿದಿದ್ದಾನೆ. ಆಗಸ್ಟ್ 13 ರಂದು ಸ್ನೇಹಿತ ರೂಮಿನಲ್ಲಿ ಗೆಳತಿಯೊಂದಿಗೆ ಸುಮಾರು 45 ನಿಮಿಷಗಳ ಕಾಲ ಲೈಂಗಿಕ ಸುಖ ಅನುಭವಿಸಿದ್ದಾನೆ.
ಆದರೆ, ಈತನ ಕಾಮೋದ್ರೇಕತೆ ತಡೆದುಕೊಳ್ಳಲಾಗದೆ ಪ್ರತಿರೋಧ ಒಡ್ಡಿದ್ದಾಳೆ. ಸಡನ್ ಆಗಿ ಬಂದ ರೆಡ್ ಸಿಗ್ನಲ್ ಕಂಡು ಹೌಹಾರಿದ ಚೇತನ್ ತಕ್ಷಣವೇ ಕ್ರಿಯೆ ನಿಲ್ಲಿಸಿದ್ದಾನೆ. ಅದರೆ, ಉಸಿರಾಟದ ತೊಂದರೆ ಅನುಭವಿಸಿದ ಚೇತನ್ ಕೆಲ ನಿಮಿಷದಲ್ಲೇ ಉಸಿರು ನಿಲ್ಲಿಸಿದ್ದಾನೆ. ಗಾಬರಿಗೊಂಡ ಆತನ ಗೆಳತಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾಳೆ.
ಘಟನಾ ಸ್ಥಳದಲ್ಲಿ ಯುವಕ ಉಪಯೋಗಿಸಿದ ಕಾಂಡೋಮ್ ಮತ್ತು ವಯಾಗ್ರ ಮಾತ್ರೆ ಕವರ್ ಲಭ್ಯವಾಗಿದೆ. ತಿಪಟೂರು ನಗರ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ ಎಂದು ಎಎಸ್ಪಿ ಲಕ್ಷ್ಮಣ್ ಹೇಳಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications