ವಯಾಗ್ರಾ ಓವರ್ ಡೋಸ್, ಯುವಕ ಸಾವು
ತಿಪಟೂರು, ಆ.20 : ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ತಡಸೂರು ಗ್ರಾಮದ ಚೇತನ್ ಎಂಬ ಯುವಕ ದುರಂತ ಸಾವಿಗೀಡಾಗಿದ್ದಾನೆ. ತನ್ನ ಗೆಳತಿಯೊಡನೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಲೇ ಸಾವನ್ನಪ್ಪಿದ್ದಾನೆ. ಅತಿಯಾಗಿ ಕಾಮೋತ್ತೇಜಕ ಮಾತ್ರೆ ಸೇವಿಸಿದ ಕಾರಣ ಚೇತನ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಬೇರೆ ಯಾವುದೇ ಚಟ ಇಲ್ಲದ 24 ವರ್ಷ ವಯಸ್ಸಿನ ಚೇತನ್ ಕುಮಾರ್ ಗೆ ನಿರಂತರ ಸೆಕ್ಸ್ ಮಾಡುವ ಅಭ್ಯಾಸ ಬೆಳೆದುಬಿಟ್ಟಿತ್ತು. ಇನ್ನೂ ಅವಿವಾಹಿತನಾಗಿದ್ದ ಚೇತನ್ ನ ಕೋರಿಕೆಯನ್ನು ಪುರಸ್ಕರಿಸಲು ಆತನಿಗೊಬ್ಬಳು ಗೆಳತಿ ಇದ್ದಳು.
ಶಿವಲಿಂಗಯ್ಯ ಹಾಗೂ ಗೌರಮ್ಮ ದಂಪತಿಯ ಪುತ್ರ ಚೇತನ್ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ. ಆತನ ಬಗ್ಗೆ ಎಲ್ಲರೂ ಒಳ್ಳೆ ಮಾತನಾಡುತ್ತಿದ್ದರು. ಆದರೆ, ಈಗ ಅತಿಯಾದ ಕಾಮದಾಸೆಯಿಂದ ಸಾವನ್ನಪ್ಪಿದ್ದಲ್ಲದೆ ಶಿವಲಿಂಗಯ್ಯ ದಂಪತಿಗಳು ಊರಿನಲ್ಲಿ ತಲೆ ಎತ್ತಿಕೊಂಡು ಓಡಾಡಲು ಆಗದ ಪರಿಸ್ಥಿತಿ ತಂದೊಡ್ಡಿದ್ದಾನೆ.
ಪೊಲೀಸರ ಪ್ರಕಾರ, ಚೇತನ್ ಗೆ ಒಬ್ಬ ಗೆಳತಿ ಇದ್ದಳು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಒಂದು ದಿನ ಲೈಂಗಿಕ ಕ್ರಿಯೆಗೆ ಆಹ್ವಾನ ನೀಡಿದ್ದಾನೆ. ಅಕೆ ಕೂಡಾ ಒಪ್ಪಿದ್ದಾಳೆ. ಇಬ್ಬರಿಗೂ ನೆಲೆ ಒದಗಿಸಲು ಪ್ರಕಾಶ್ ಎಂಬ ಸ್ನೇಹಿತ ಒಪ್ಪಿಕೊಂಡಿದ್ದಾನೆ. ಊರಿನ ಶಾಲೆ ಬಳಿ ಇದ್ದ ಸ್ನೇಹಿತನ ರೂಮಿನಲ್ಲಿ ಆಗಾಗ ಇಬ್ಬರು ಸಂಧಿಸುತ್ತಿರುತ್ತಾರೆ.

ಆತನಿಗೆ ಸಮಸ್ಯೆ ಇತ್ತು: ಲೈಂಗಿಕವಾಗಿ ನನ್ನ ಹುಡುಗಿಗೆ ತೃಪ್ತಿ ನೀಡಲಾಗುತ್ತಿಲ್ಲ ಎಂಬ ಕೊರಗು ಚೇತನ್ ನನ್ನು ಕಾಡುತ್ತಿತ್ತು. ಚೇತನ್ ಗೆ ಶೀಘ್ರಸ್ಖಲನ ಸಮಸ್ಯೆ ಇತ್ತು ಎನ್ನಲಾಗಿದೆ. ಹೀಗಾಗಿ ಗೆಳೆಯರ ಸಲಹೆ ಮೇರೆಗೆ ಕಾಮೋತ್ತೇಜಕ ಮಾತ್ರೆ ವಯಾಗ್ರಾ ತೆಗೆದುಕೊಳ್ಳಲು ನಿರ್ಧರಿಸಿದ್ದಾನೆ.
ಆದರೆ, ಸೂಕ್ತ ಮಾರ್ಗದರ್ಶನವಿಲ್ಲದೆ ಅತಿಯಾದ ಮಾತ್ರೆ ಸೇವಿಸಿ ಕಾಮದಾಟಕ್ಕಿಳಿದಿದ್ದಾನೆ. ಆಗಸ್ಟ್ 13 ರಂದು ಸ್ನೇಹಿತ ರೂಮಿನಲ್ಲಿ ಗೆಳತಿಯೊಂದಿಗೆ ಸುಮಾರು 45 ನಿಮಿಷಗಳ ಕಾಲ ಲೈಂಗಿಕ ಸುಖ ಅನುಭವಿಸಿದ್ದಾನೆ.
ಆದರೆ, ಈತನ ಕಾಮೋದ್ರೇಕತೆ ತಡೆದುಕೊಳ್ಳಲಾಗದೆ ಪ್ರತಿರೋಧ ಒಡ್ಡಿದ್ದಾಳೆ. ಸಡನ್ ಆಗಿ ಬಂದ ರೆಡ್ ಸಿಗ್ನಲ್ ಕಂಡು ಹೌಹಾರಿದ ಚೇತನ್ ತಕ್ಷಣವೇ ಕ್ರಿಯೆ ನಿಲ್ಲಿಸಿದ್ದಾನೆ. ಅದರೆ, ಉಸಿರಾಟದ ತೊಂದರೆ ಅನುಭವಿಸಿದ ಚೇತನ್ ಕೆಲ ನಿಮಿಷದಲ್ಲೇ ಉಸಿರು ನಿಲ್ಲಿಸಿದ್ದಾನೆ. ಗಾಬರಿಗೊಂಡ ಆತನ ಗೆಳತಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾಳೆ.
ಘಟನಾ ಸ್ಥಳದಲ್ಲಿ ಯುವಕ ಉಪಯೋಗಿಸಿದ ಕಾಂಡೋಮ್ ಮತ್ತು ವಯಾಗ್ರ ಮಾತ್ರೆ ಕವರ್ ಲಭ್ಯವಾಗಿದೆ. ತಿಪಟೂರು ನಗರ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ ಎಂದು ಎಎಸ್ಪಿ ಲಕ್ಷ್ಮಣ್ ಹೇಳಿದ್ದಾರೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications