ಮಂದಾರಗಿರಿಯಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಜೀವವೈವಿಧ್ಯ ವನ
ತುಮಕೂರು ಮತ್ತು ಬೆಂಗಳೂರು ರಸ್ತೆಯಲ್ಲಿ ತುಮಕೂರಿನಿಂದ ಸುಮಾರು ಹತ್ತು ಕಿಲೋಮೀಟರ್ ಕ್ರಮಿಸಿದ ನಂತರ ರಸ್ತೆಯ ಎಡಕ್ಕೆ ಅನತಿ ದೂರದಲ್ಲಿ ಕಡೆದು ಕೊರೆದು ನುಣುಪಾಗಿಸಿ ಪ್ರತಿಷ್ಠಾಪಿಸಿದಂತೆ ಕಾಣುವ ಗುಡ್ಡವೊಂದನ್ನು ಎಲ್ಲರೂ ನೋಡಿಯೇ ಇರುತ್ತೀರಿ.
ಬೆಟ್ಟದ ಮೇಲೆ ಸರಳ ರೇಖೆಯಂತ ಮೆಟ್ಟಿಲುಗಳ ಸಾಲು ಗಮನ ಸೆಳೆಯುತ್ತವೆ. ಈ ಬೆಟ್ಟದ ಹೆಸರು ಮಂದಾರಗಿರಿ. ನಾನು ಚಿಕ್ಕಂದಿನಿಂದ ಈ ಬೆಟ್ಟವನ್ನು ಗಮನಿಸುತ್ತಿದ್ದೇನಾದರೂ ಇಲ್ಲಿಗೆ ಬಂದದ್ದು ತೀರಾ ವಿರಳ. ನಿನ್ನೆ ಪೂರ್ವನಿಯೋಜಿತ ಕೆಲಸದ ಮೇಲೆ ಇಲ್ಲಿಗೆ ಬರಬೇಕಾಯಿತು.
ಮಂದಾರಗಿರಿ ಈಗ ಪ್ರವಾಸಿ ತಾಣವಾಗಿ ರೂಪುಗೊಂಡಿದೆ. ನೂರಾರು ಕಾರು, ಬೈಕ್ ಗಳಲ್ಲಿ ಪ್ರವಾಸಿಗರು ದಿನದ ಔಟಿಂಗ್ ಗಾಗಿ ಬಂದು ಜಮಾಯಿಸಿದ್ದರು. ನಮ್ಮ ಸುತ್ತಲೇ ಇರುವ ಬೆಟ್ಟ ಗುಡ್ಡಗಳು "ಬೆಳೆವ ಪರಿ" ಕಂಡ ಸೋಜಿಗ ನನ್ನದು.

ಮಂದಾರಗಿರಿ ಬುಡದಲ್ಲಿ ಕುರಚಲು ಗುಡ್ಡ-ಕಲ್ಲುಗಳಿಂದ ಕೂಡಿದ ಎಂಟೂವರೆ ಎಕರೆ ಪ್ರದೇಶ ಶ್ರೀ ಸಿದ್ದಗಂಗಾ ಮಠಕ್ಕೆ ಸೇರಿದ ಜಮೀನಿದೆ. ಪ್ರಕೃತಿ ಸಹಜವಾಗಿ ಹೊಂಗೆ, ಮುತ್ತುಗದ ಮರಗಳು ಹೇರಳವಾಗಿ ಬೆಳೆದು ನಿಂತಿವೆ. ಈ ಜಾಗವನ್ನೀಗ ಶ್ರೀ ಶಿವಕುಮಾರ ಸ್ವಾಮಿಗಳ ಹೆಸರಿನಲ್ಲಿ ಜೀವವೈವಿಧ್ಯ ವನವನ್ನು ನಿರ್ಮಿಸುವ ಕೆಲಸ ಆರಂಭವಾಗಿದೆ.
ಇದರ ರೂವಾರಿ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ರುದ್ರಮೂರ್ತಿ. ಅವರ ಜೊತೆ ಜೊತೆಗೆ ನನ್ನ ಎರಡೂವರೆ ದಶಕದ ಗೆಳೆಯ ದೇವರಾಜ್. ಇವರಿಬ್ಬರ ಒತ್ತಾಯವೋ, ಪ್ರೀತಿಯ ಆಮಂತ್ರಣವೋ ನಾನಿಲ್ಲಿಗೆ ಬರಬೇಕಾಯಿತು. ಇಲ್ಲೊಂದು ಜೀವ ವೈವಿಧ್ಯ ವನ ನಿರ್ಮಿಸುವ ಕೆಲಸಕ್ಕೆ ಆರಂಭದಿಂದಲೇ ತೊಡಗಿಸಿಕೊಳ್ಳುವ ಅವಕಾಶ ಇವರೀರ್ವರೂ ನನಗೆ ಕಲ್ಪಿಸಿದ್ದಾರೆ.

ವನ ನಿರ್ಮಿಸುವ ಕೆಲಸವೇ ಮಹತ್ವದ್ದು, ಅದೂ ಶ್ರೀ ಮಠದ ಗುರುಗಳ ಹೆಸರಿನ ವನವೆಂದರೆ ಮಹತ್ವದ ಕೆಲಸಕ್ಕೆ ಭಾಗ್ಯ ಒದಗಿಬಂದಂತೆ. ಮುಂದಿನ ದಿನಗಳಲ್ಲಿ ಏನೆಲ್ಲಾ ಮಾಡಬೇಕೆಂಬುದರ ಬಗ್ಗೆ ನಮ್ಮೆಲ್ಲರ ಒಳನೋಟಗಳು ಮಾತಾಗಿ ಹಂಚಿಹೋದವು. ಇನ್ನು ಉಳಿದಿರುವುದು ಕ್ರಿಯೆ. ಕಾಯಕವೇ ಕೈಲಾಸ ಎಂಬ ಶರಣ ತತ್ವದ ಮೇಲೆ ನಡೆವುದಷ್ಟೇ ಬಾಕಿ.
ಅಂದಹಾಗೆ ಶ್ರೀ ಮಠದ ಜಮೀನಿನ ಸುತ್ತಲ ಸರ್ಕಾರಿ ಭೂಮಿಯಲ್ಲಿ ಕೈಗಾರಿಕೆ ತ್ಯಾಜ್ಯ ಸುರಿದಿರುವುದನ್ನು ಕಂಡು ಕೊಂಚ ಆತಂಕಗೊಂಡೆನು. ತುಮಕೂರು ಜಿಲ್ಲಾಡಳಿತ ಆ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು.

ಸುತ್ತಲ ಅಷ್ಟೂ ಭೂಮಿಯಲ್ಲಿ ಹಸಿರುಕ್ಕಿಸುವ ಕಾಯಕ ಜೀವ ವೈವಿಧ್ಯ ವನ ನಿರ್ಮಾಣದಲ್ಲಿ ತೊಡಗಿರುವ ನಾವೇ ಮಾಡುತ್ತೇವೆ. ಸುಮಾರು ಮುನ್ನೂರೋ ನಾನೂರೋ ಎಕರೆಯಷ್ಟು ವಿಶಾಲವಾಗಿ ಹರವಿಕೊಂಡಿರುವ ಕುರುಚಲು ಗುಡ್ಡಗಳಲ್ಲಿ ಲಕ್ಷ ಲಕ್ಷ ಸಸಿಗಳನ್ನು ನೆಡುವ ಕೆಲಸ ನಮಗೇ ಇರಲಿ. ಅಲ್ಲಿಂದ ಕೈಗಾರಿಕೆ ತ್ಯಾಜ್ಯ ತೆಗೆಸಿ ಪರಿಸರವನ್ನು ಕಾಪಾಡುವ ಜವಾಬ್ದಾರಿ ಜಿಲ್ಲಾಡಳಿತ ವಹಿಸಿಕೊಳ್ಳಲಿ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications