ನೀರಾವರಿ ತಜ್ಞ ಪರಮಶಿವಯ್ಯ ವಿಧಿವಶ
ತುಮಕೂರು, ಮಾ.11 : ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಯಲು ಸೀಮೆ 9 ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ ವರದಿ ತಯಾರಿಸಿದ್ದ ಹಿರಿಯ ನೀರಾವರಿ ತಜ್ಞ ಪರಮಶಿವಯ್ಯ ವಿಧಿವಶರಾಗಿದ್ದಾರೆ. ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಅವರು ಮೃತಪಟ್ಟಿದ್ದಾರೆ.
ಡಾ.ಜಿ.ಎಸ್.
ಪರಮಶಿವಯ್ಯ
(97)
ಅವರು
ಮಂಗಳವಾರ
ಬೆಳಗ್ಗೆ
ಹೃದಯಾಘಾತದಿಂದಾಗಿ
ತುಮಕೂರಿನ
ಖಾಸಗಿ
ಆಸ್ಪತ್ರೆಯಲ್ಲಿ
ಮೃತಪಟ್ಟಿದ್ದಾರೆ.
ಬಯಲು
ಸೀಮೆಗೆ
ಶಾಶ್ವತ
ನೀರಾವರಿ
ಸೌಲಭ್ಯ
ಒದಗಿಸುವ
ಕನಸು
ಕಂಡಿದ್ದ
ಅವರು,
ಅದಕ್ಕಾಗಿ
ವರದಿಯನ್ನು
ಸಿದ್ಧಪಡಿಸಿ
ಸರ್ಕಾರಕ್ಕೆ
ಸಲ್ಲಿಸಿದ್ದರು.
ಅದು
ಪರಮಶಿವಯ್ಯ
ವರದಿ
ಎಂದೇ
ಪ್ರಸಿದ್ಧವಾಗಿದೆ.
ನೀರಾವರಿ ತಜ್ಞ ಪರಮಶಿವಯ್ಯ ಅವರು ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಹೋರಾಟ ನಡೆಸಿದ್ದರು ಮತ್ತು ನೇತ್ರಾವತಿ ನದಿ ತಿರುವು ಯೋಜನೆ ಕುರಿತು ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದರು. ವರದಿಯನ್ನು ಅನುಷ್ಠಾನಗೊಳಿಸದಿದ್ದರೆ ವಿಧಾನಸೌಧ ಮುಂದೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.
ನೀರಾವರಿಗೆ ಕ್ಷೇತ್ರಕ್ಕೆ ಪರಮಶಿವಯ್ಯ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸರ್ಕಾರ 2012ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಅವರಿಗೆ ನೀಡಿತ್ತು. ಲಭಿಸಿದೆ. ಕೆಲವು ದಿನಗಳ ಹಿಂದೆ ಶಂಕುಸ್ಥಾಪನೆ ನರೆವೇರಿಸಿದ ವಿವಾದಿತ ಎತ್ತಿನಹೊಳೆ ಯೋಜನೆಗೆ ರಾಜ್ಯ ಸರ್ಕಾರ ಪರಮಶಿವಯ್ಯ ಅವರು ನೀಡಿದ್ದ ವರದಿಯಲ್ಲಿನ ಕೆಲವು ಅಂಶಗಳನ್ನು ಮಾತ್ರ ಪರಿಗಣಿಸಿದೆ. ವರದಿಯನ್ನು ಸಂಪೂರ್ಣವಾಗಿ ಅನುಷ್ಟಾನಕ್ಕೆ ತಂದಿಲ್ಲ ಎಂಬ ಆರೋಪಗಳು ಇವೆ. [ಎತ್ತಿನಹೊಳೆ ಯೋಜನೆ ಕುಡಿಯುವ ನೀರಿಗಾಗಿ ಮಾತ್ರ]