ಲಾಕ್ ಡೌನ್: ದೇವಸ್ಥಾನದಲ್ಲಿ ಭಿಕ್ಷೆ ಬೇಡುತ್ತಿದ್ದ ಅಜ್ಜಿ ಬೀದಿಗೆ
ತಿಪಟೂರು, ಮಾರ್ಚ್ 25: ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡಲು ಇಡೀ ಭಾರತ ದೇಶ ಲಾಕ್ ಡೌನ್ ಆಗಿದೆ. ವೈರಸ್ ಹರಡುವ ಭೀತಿಯಿಂದ ಎಲ್ಲ ದೇವಸ್ಥಾನಗಳು ಬಂದ್ ಆಗಿದೆ. ಆದರೆ, ಇದರಿಂದ ದೇವಸ್ಥಾನದ ಬಳಿ ಭಿಕ್ಷೆ ಬೇಡುತ್ತಿದ್ದ ಅಜ್ಜಿಯೊಬ್ಬರು ಬೀದಿಗೆ ಬಿದ್ದಿದ್ದಾರೆ.
ಈ ಘಟನೆ ತಿಪಟೂರಿನಲ್ಲಿ ನಡೆದಿದೆ. ತಿಪಟೂರಿನ ಬೀದಿಗಳಲ್ಲಿ ಹೊಟ್ಟೆಗೆ ಊಟ ಇಲ್ಲದೆ, ಅಲೆದಾಡುತ್ತಿದ್ದ ಅಜ್ಜಿಯನ್ನು ಗಮನಿಸಿದ ಸಾರ್ವಜನಿಕರು ಅಲ್ಲಿನ ಅಧಿಕಾರಿಯ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ರೇಖಾ, ಅಜ್ಜಿಗೆ ಸೂರು ಕೊಡಿಸುವ ಕೆಲಸ ಮಾಡಿದ್ದಾರೆ.
ಸದ್ಯ, ಅಜ್ಜಿ ವೃದ್ಧಶ್ರಾಮದಲ್ಲಿದೆ. ತಿಪಟೂರಿನ ಯಶಸ್ವಿನಿ ವೃದ್ಧಾಶ್ರಮದಲ್ಲಿ ಅಜ್ಜಿಯನ್ನು ನೋಡಿಕೊಳ್ಳುತ್ತಿದ್ದಾರೆ. ಈ ಘಟನೆಯನ್ನು ಬಗ್ಗೆ ಟ್ವಿಟ್ಟರ್ ಖಾತೆಯಲ್ಲಿ ರೇಖಾ ಹಂಚಿಕೊಂಡಿದ್ದಾರೆ.

ಅನಾಥ ಅಜ್ಜಿ
''ಇವತ್ತು (ನಿನ್ನೆ ನಡೆದ ಘಟನೆ) ಮಧ್ಯಾಹ್ನ 03ಕ್ಕೆ ತಿಪಟೂರಿನ unknown ನಂಬರ್ ಇಂದ ಕರೆ ಬಂತು. ಒಬ್ಬರು ವಯೋವೃದ್ಧೆ ರಸ್ತೆಯಲ್ಲಿ ಅನಾಥವಾಗಿ ಇದ್ದಾರೆ ಅಂತ ಸ್ಥಳಕ್ಕೆ ಧಾವಿಸಿದೆ. ಆದರೆ ನನ್ನ ಅಧಿಕಾರ ವ್ಯಾಪ್ತಿಗೆ ಬರೋದಿಲ್ಲ!. ಆದರೆ ಮಾನವೀಯತೆಯ ವ್ಯಾಪ್ತಿ, ವಿಶ್ವದಗಲ ಅಲ್ಲವೇ? ಸತತ ಎರಡು ಗಂಟೆಗಳ ತನಿಖೆ ನಂತರ ಅಜ್ಜಿ ಅನಾಥೆ ಅಂತ ತಿಳಿಯಿತು'' ಎಂದು ರೇಖಾ ಘಟನೆಯನ್ನು ವಿವರಿಸಿದ್ದಾರೆ.
|
ಹೆತ್ತ ಮಕ್ಕಳೂ ಒಂಟಿ ಮಾಡಿದ್ದಾಳೆ
''ಕರ್ಫ್ಯೂ ಕಾರಣಕ್ಕೆ ಎಲ್ಲಾ ಇಲಾಖೆಗಳು ಬ್ಯುಸಿ, ಯಾವುದೇ ವಾಹನ ಸಿಗಲಿಲ್ಲ ಮುಸ್ಸಂಜೆ, ಮಳೆಯಾಗುವ ಸಂಭವ ನೆರೆದಿದ್ದ ಜನರೆಲ್ಲಾ ಒಬ್ಬೊಬ್ಬರೇ ಮನೆಗೆ ಹೊರಟರು. ಉಳಿದಿದ್ದು ನಾನು & ಅಜ್ಜಿ ಇಬ್ಬರೇ. ಹೆತ್ತ ಮಕ್ಕಳೂ ಒಂಟಿ ಮಾಡಿದ್ರೂ ಅಂತ ನನ್ನ ಕಣ್ಣನ್ನ ಒದ್ದೆ ಮಾಡಿದ್ದೂ ಸುಳ್ಳಲ್ಲ. ಹೇಗೋ ಒಬ್ಬ ಪುಣ್ಯಾತ್ಮ ಅಜ್ಜಿಯನ್ನ ಆಟೋಗೆ ಹತ್ತಿಸಿದ.''- ರೇಖಾ

ಎಲ್ಲ ಕಡೆ ಕೊರೋನಾ ಎಮರ್ಜೆನ್ಸಿ
''ಆಸ್ಪತ್ರೆಯಲ್ಲೂ ಕೊರೋನಾ ಕಾರಣಕ್ಕೆ, ಒಂದು ದಿನದ ಮಟ್ಟಿಗೆ ಆಶ್ರಯ ಕೊಡಲು ಸಾಧ್ಯವಾಗಲಿಲ್ಲ ಎಂದರು. ಪೊಲೀಸ್ ಠಾಣೆಗೆ ಹೋದರೆ ಮತ್ತದೇ ಕೊರೋನಾ ಎಮರ್ಜೆನ್ಸಿ. ಕೊನೆಗೆ ಗೊತ್ತಾಗಿದ್ದು ಅಜ್ಜಿಯ ಕೆಲಸ ಭಿಕ್ಷಾಟನೆ. ಕರ್ಫ್ಯೂ ಕಾರಣಕ್ಕೆ ದೇವಸ್ಥಾನದ ಬಳಿ ಇರುವ ಭಿಕ್ಷುಕರೆಲ್ಲ ಈ ರೀತಿ ರಸ್ತೆಪಾಲಾಗಿದ್ದರೆ ಅಂತ. ಎಲ್ಲಾ ಇಲಾಖೆಗಳ ಕಾರ್ಯವ್ಯಾಪ್ತಿಯನ್ನ ಮೀರಿ ನಮಗೆ ಪ್ರತಿಕ್ರಿಯೆ ನೀಡಿ, ಸ್ಪಂದಿಸಿ ಅಜ್ಜಿಗೆ ರಾತ್ರಿ ಸುಮಾರು 07:30ಕ್ಕೆ ಶೀಘ್ರ ಆಶ್ರಯ ನೀಡಿದ್ದು ಯಶಸ್ವಿನಿ ವೃದ್ಧಾಶ್ರಮ.''- ರೇಖಾ
|
ಹೊಟ್ಟೆ ತುಂಬುವಷ್ಟು ಅನ್ನ
''ಹೋದಕೂಡಲೇ ಅವರು ಕೊಟ್ಟಿದ್ದು ಹೊಟ್ಟೆ ತುಂಬುವಷ್ಟು ಅನ್ನ. ಇದಲ್ಲವೇ ಸೇವೆ Folded hands ಇದಲ್ಲವೇ ಮನುಷ್ಯತ್ವ Folded hands. ಇವರ ಮುಂದೆ ಇಷ್ಟು ದೊಡ್ಡ ಇಲಾಖೆಗಳೂ ಗೌಣವಾಗಿದ್ದು ಸತ್ಯ. ನಿಮ್ಮನ್ನೆಲ್ಲಾ ಕೇಳಿಕೊಳ್ಳೋದು ಇಷ್ಟೇ, ಖಂಡಿತವಾಗಿಯೂ ನಮ್ಮ ಸಮಾಜದಲ್ಲಿ ನಿಷ್ಠೆಯಿಂದ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳು ಇವೆ. ಅವುಗಳನ್ನ ಗುರ್ತಿಸಿ ನಮ್ಮಿಂದ ಆಗುವಷ್ಟು ಸಹಾಯ(ಸೇವೆಯೆಂಬ
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications