ಕೇರಳ; ವಿಸ್ಮಯ ಸಾವಿನ ಪ್ರಕರಣ, ಗಂಡನೇ ಹಂತಕ ಎಂದ ಕೋರ್ಟ್
ತಿರುವನಂತಪುರಂ, ಮೇ 23: ಕೇರಳದ ವಿಸ್ಮಯ ನಾಯರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಕಿರಣ್ ಕುಮಾರ್ ಅಪರಾಧಿ ಎಂದು ಕೋರ್ಟ್ ಹೇಳಿದೆ.
"ನಾನು ಬಾಗಿಲು ತೆರೆದಾಗ, ಅವನು ನನ್ನ ಕೂದಲನ್ನು ಎಳೆದು ನನ್ನನ್ನು ಹೊಡೆದನು ಮತ್ತು ನನ್ನನ್ನು ನಿಂದಿಸಿದನು" ಎಂದು 22 ವರ್ಷದ ವಿಸ್ಮಯಾ ನಾಯರ್ ತನ್ನ ಸ್ನೇಹಿತನಿಗೆ ಜೂನ್ 2021ರಲ್ಲಿ ಕಳಿಸಿದ ಈ ಸಂದೇಶವು ಕೇರಳದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿತ್ತು.
ವಿಸ್ಮಯಾ ಮರಣದ ಒಂದು ವರ್ಷದ ನಂತರ, ಆಕೆಯ ಪತಿ ಕಿರಣ್ ಕುಮಾರ್ ಅಪರಾಧಿ ಎಂದು ಘೋಷಿಸಲಾಗಿದೆ. ಕೊಲ್ಲಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸುಜಿತ್ ಕೆ. ಎನ್. ಐಪಿಸಿಯ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ), 498 ಎ (ಗಂಡ ಅಥವಾ ಸಂಬಂಧಿಕರಿಂದ ಕ್ರೌರ್ಯ), ಮತ್ತು 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಅಡಿಯಲ್ಲಿ ಕಿರಣ್ ಅವರನ್ನು ಅಪರಾಧಿ ಎಂದು ತೀರ್ಪು ನೀಡಿದ್ದಾರೆ. ಸುಪ್ರೀಂ ಕೋರ್ಟ್ ನೀಡಿದ ಜಾಮೀನನ್ನು ನ್ಯಾಯಾಲಯವು ರದ್ದುಗೊಳಿಸಿದೆ.

ಪತಿ ಅನೇಕ ಬಾರಿ ಕ್ರೂರವಾಗಿ ಥಳಿಸಿದ್ದಾನೆ ಎಂದಿದ್ದ ವಿಸ್ಮಯಾ
ಬ್ಯಾಚುಲರ್ ಆಫ್ ಆಯುರ್ವೇದ ಮೆಡಿಸಿನ್ಸ್ ಮಾಡುತ್ತಿದ್ದ ವಿಸ್ಮಯಾ ವಿ. ನಾಯರ್ ಜೂನ್ 21, 2021 ರಂದು ಕೊಲ್ಲಂನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆಕೆಗೆ 22 ವರ್ಷ ವಯಸ್ಸಾಗಿತ್ತು. ಕೊಲ್ಲಂ ಜಿಲ್ಲೆಯ ಕಡಕ್ಕಲ್ ಬಳಿಯ ನಿಲಮೇಲ್ ಮೂಲದ ಅವರು ವರದಕ್ಷಿಣೆಯ ಭಾಗವಾಗಿ ನೀಡಿದ ಕಾರಿಗೆ ತನ್ನ ಪತಿ ಅನೇಕ ಬಾರಿ ಕ್ರೂರವಾಗಿ ಥಳಿಸಿದ್ದಾನೆ ಎಂದು ತನ್ನ ಸೋದರ ಸಂಬಂಧಿಗೆ ಸಂದೇಶಗಳನ್ನು ಕಳುಹಿಸಿದ ಎರಡು ದಿನಗಳ ನಂತರ ಆಕೆಯ ಸಾವು ಸಂಭವಿಸಿತ್ತು. ಸುಮಾರು ನಾಲ್ಕು ತಿಂಗಳ ಕಾಲ ವಿಚಾರಣೆ ನಡೆಯುತ್ತಿದ್ದು, ವಿಸ್ಮಯಾ ಸಾವನ್ನಪ್ಪಿ 11 ತಿಂಗಳ ನಂತರ ಈಗ ತೀರ್ಪು ಬಂದಿದೆ.

ಕಿರಣ್ ಕೈಯಿಂದ ಎದುರಿಸುತ್ತಿರುವ ಕಿರುಕುಳ ಬಗ್ಗೆ ಮಾಹಿತಿ
ವಿಸ್ಮಯಾ ತನ್ನ ತಂದೆಗೆ ತಲುಪಿಸಿದ್ದ ಧ್ವನಿ ರೆಕಾರ್ಡಿಂಗ್ನಲ್ಲಿ ಕಿರಣ್ ಕೈಯಿಂದ ಎದುರಿಸುತ್ತಿರುವ ಕಿರುಕುಳದ ವಿವರ ಇತ್ತು. ವಿಸ್ಮಯಾ ಅವರ ಧ್ವನಿಯು ಅಳುವುದು ಕೇಳುತ್ತಿದೆ ಎಂದು ವರದಿಯಾಗಿದೆ. "ನನ್ನನ್ನು ಇಲ್ಲಿ ವಾಸಿಸುವಂತೆ ಮಾಡಿದರೆ, ನೀವು ನನ್ನನ್ನು ಮತ್ತೆ ನೋಡುವುದಿಲ್ಲ" ಎಂದು ಆಡಿಯೋ ಹೇಳುತ್ತದೆ. "ನಾನು ಏನನ್ನಾದರೂ ಮಾಡುತ್ತೇನೆ, ಆದರೆ, ಇನ್ನು ಮುಂದೆ ಸಹಿಸಲಾರೆ. ಅಚಾ (ತಂದೆ), ನಾನು ಹಿಂತಿರುಗಲು ಬಯಸುತ್ತೇನೆ. ನನಗೆ ಭಯವಾಗಿದೆ, ಈತ ನನಗೆ ಹೊಡೆಯುತ್ತೇನೆ"ಎಂದು ವಿಸ್ಮಯ ಕಣ್ಣೀರು ಹಾಕಿದ್ದರು.

ಸೋದರ ಸಂಬಂಧಿಯೊಂದಿಗೆ ಹಂಚಿಕೊಂಡ ಫೋಟೋ
2021 ರಲ್ಲಿ ತನ್ನ ಸಾವಿಗೆ ಕೆಲವು ದಿನಗಳ ಮೊದಲು ವಿಸ್ಮಯಾ ತನ್ನ ಸೋದರ ಸಂಬಂಧಿಗೆ ಕೆಲವು ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿದ್ದಳು. ಅಲ್ಲಿ ಅವಳು ತೀವ್ರ ಹಲ್ಲೆಯನ್ನು ಎದುರಿಸುತ್ತಿರುವುದನ್ನು ವಿವರಿಸಿದ್ದಳು. ತನ್ನ ಮೇಲೆ ಹಲ್ಲೆ ನಡೆಸಿದ ನಂತರ, ಆಕೆಯ ಪತಿ ತನ್ನ ಕೂದಲನ್ನು ಹಿಡಿದುಕೊಂಡು ತನ್ನ ಮುಖದ ಮೇಲೆ ಹೇಗೆ ಹೊಡೆದನು ಎಂದು ಅವರು ಬರೆದಿದ್ದಾರೆ. ತನ್ನ ಮೇಲಿನ ಹಲ್ಲೆಯ ಬಗ್ಗೆ ಯಾರಿಗೂ ಹೇಳಿಲ್ಲ ಎಂದು ಸಂದೇಶದಲ್ಲಿ ಹೇಳಿದ್ದಾಳೆ. ಅವಳು ತನ್ನ ಸೋದರ ಸಂಬಂಧಿಯೊಂದಿಗೆ ಹಂಚಿಕೊಂಡ ಫೋಟೋಗಳು ಅವಳ ಮುಖ, ಭುಜ ಮತ್ತು ಕೈಗಳ ಮೇಲೆ ಗಾಯಗಳನ್ನು ತೋರಿಸುತ್ತವೆ. ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಾಥಮಿಕ ಸಾಕ್ಷ್ಯಗಳಲ್ಲಿ ಇದೂ ಕೂಡ ಒಂದಾಗಿತ್ತು.
ವಿಸ್ಮಯಾ ಅವರ ತಂದೆ ಕುಟುಂಬವು 100 ಸವರಿನ್ ಚಿನ್ನ, ಒಂದು ಎಕರೆ ಜಮೀನು ಮತ್ತು ಟೊಯೊಟಾ ಯಾರಿಸ್ ಕಾರನ್ನು ವರದಕ್ಷಿಣೆಯಾಗಿ ನೀಡಿದೆ. ಆದರೆ ,ಅವರು ಬೇರೆ ಮಾದರಿಯ ಕಾರು ಮತ್ತು ಹೆಚ್ಚಿನ ಹಣವನ್ನು ಬಯಸಿದ್ದರು. ಕಿರಣ್ ವಿಸ್ಮಯಾ ಮೇಲೆ ಹಲ್ಲೆ ನಡೆಸಿರುವುದು ಕುಟುಂಬಕ್ಕೆ ತಿಳಿದಿತ್ತು ಎಂದು ಆಕೆಯ ತಂದೆ ತ್ರಿವೃಕಮನ್ ನಾಯರ್ ಆಕೆಯ ಸಾವಿನ ನಂತರ ತಿಳಿಸಿದ್ದರು.

306 (ಆತ್ಮಹತ್ಯೆಗೆ ಪ್ರಚೋದನೆ), 323 (ಶಿಕ್ಷೆ) ಅಡಿ ಪ್ರಕರಣ
ವಿಸ್ಮಯಾಳ ಸಾವಿನ ನಂತರ, ಆಕೆಯ ಕುಟುಂಬವು ಪೊಲೀಸರಿಗೆ ದೂರು ನೀಡಿತು. ಕಿರಣ್ರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304B (ವರದಕ್ಷಿಣೆ ಸಾವು), 498A (ಪತಿ ಅಥವಾ ಸಂಬಂಧಿಕರಿಂದ ಕ್ರೌರ್ಯ), 306 (ಆತ್ಮಹತ್ಯೆಗೆ ಪ್ರಚೋದನೆ), 323 (ಶಿಕ್ಷೆ) ಅಡಿಯಲ್ಲಿ ಬಂಧಿಸಲಾಯಿತು. ಸ್ವಯಂಪ್ರೇರಣೆಯಿಂದ ಗಾಯವನ್ನು ಉಂಟು ಮಾಡುವುದಕ್ಕಾಗಿ) ಮತ್ತು 506 (ಅಪರಾಧ ಬೆದರಿಕೆಗೆ ಶಿಕ್ಷೆ). ಮೋಟಾರು ವಾಹನ ಇಲಾಖೆಯ ಸಹಾಯಕ ಮೋಟಾರು ವಾಹನ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದ ಕಿರಣ್ ಅವರನ್ನು ನಂತರ ಆಗಸ್ಟ್ 2021ರಲ್ಲಿ ಕೇರಳ ಸರ್ಕಾರವು ಸೇವೆಯಿಂದ ವಜಾಗೊಳಿಸಿತ್ತು.
ಸೆಪ್ಟೆಂಬರ್ 2021ರಲ್ಲಿ ಕೇರಳ ಪೊಲೀಸರು 500 ಪುಟಗಳ ಚಾರ್ಜ್ಶೀಟ್ನಲ್ಲಿ ವಿಸ್ಮಯಾ ಸಾವಿನ ಪ್ರಮುಖ ಆರೋಪಿ ಕಿರಣ್ ಎಂದು ಹೆಸರಿಸಿದರು, ವಿಸ್ಮಯಾ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದರು. ಆದರೆ ಪತಿ ಕಿರಣ್ ಕುಮಾರ್ ಅವರ ನಿರಂತರ ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕ ಕಿರುಕುಳದಿಂದ ಅವಳು ಸಾವಿಗೆ ಕಾರಣ ಎಂದು ತನಿಖೆಯ ನೇತೃತ್ವ ವಹಿಸಿದ್ದ ಪೊಲೀಸ್ ಉಪಾಧೀಕ್ಷಕ ಶಾಸ್ತಕೋಟಾ, ರಾಜಕುಮಾರ್ ಅವರು, ಕಿರಣ್ ಅಪರಾಧವನ್ನು ಸಾಬೀತುಪಡಿಸುವ ಹಲವಾರು ಸ್ವತಂತ್ರ ಸಾಕ್ಷಿಗಳು ಮತ್ತು ಸಾಂದರ್ಭಿಕ ಸಾಕ್ಷ್ಯಗಳಿವೆ ಎಂದು ಹೇಳಿದ್ದರು.
ವಿಚಾರಣೆಯ ಸಂದರ್ಭದಲ್ಲಿ, 42 ಸಾಕ್ಷಿಗಳು, 102 ದಾಖಲೆಗಳು ಮತ್ತು ಹಲವಾರು ಕರೆ ದಾಖಲೆಗಳನ್ನು ನ್ಯಾಯಾಲಯದಲ್ಲಿ ಪರಿಶೀಲಿಸಲಾಯಿತು. ಸರ್ಕಾರಿ ನೌಕರನಾಗಿದ್ದರಿಂದ ಹೆಚ್ಚಿನ ವರದಕ್ಷಿಣೆ ನೀಡಬೇಕೆಂದು ಕಿರಣ್ ವಿಸ್ಮಯಾಗೆ ಕಿರುಕುಳ ನೀಡಿದ್ದಾನೆ ಎಂದು ಪ್ರಾಸಿಕ್ಯೂಷನ್ ವಾದಿಸಿತು. ಪೊಲೀಸರ ಪ್ರಕಾರ, ವಿಸ್ಮಯಾ ಅವರ ಕುಟುಂಬವು ತನಗೆ ನೀಡಿದ ಕಾರಿನ ಬಗ್ಗೆ ಅವರು ಸಂತೋಷವಾಗಿರಲಿಲ್ಲ ಮತ್ತು ಬೇರೆ ಮಾಡೆಲ್ ಬಯಸಿದ್ದರು. ಕಿರಣ್ ಅವರ ಮೇಲೆ ಹಲ್ಲೆ ನಡೆಸಿದ ನಂತರ ಪೊಲೀಸರು ವಿಸ್ಮಯಾ ಅವರ ಗಾಯಗಳಿರುವ ಫೋಟೋಗಳನ್ನು ಪಡೆದುಕೊಂಡಿದ್ದಾರೆ ಮತ್ತು ಧ್ವನಿ ಕ್ಲಿಪ್ಗಳು ಮತ್ತು ಫೋನ್ ರೆಕಾರ್ಡಿಂಗ್ಗಳನ್ನು ಸಾಕ್ಷಿಯಾಗಿ ಬಳಸಿದ್ದಾರೆ.
Recommended Video
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video












Click it and Unblock the Notifications