ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಕೋರ್ಟಿಗೆ ಸರ್ಕಾರದ ಭರವಸೆ: ಶಬರಿಮಲೆ ವಿವಾದ ಇನ್ನೊಂದು ಮಜಲಿಗೆ?

|
Google Oneindia Kannada News

Recommended Video

Sabarimala Verdict : ಶಬರಿಮಲೈ ವಿವಾದಕ್ಕೆ ಹೊಸ ಟ್ವಿಸ್ಟ್ | Oneindia Kannada

ಕೊಚ್ಚಿನ್, ನ 23: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ವಿಚಾರದಲ್ಲಿನ ವಿವಾದ, ಕೇರಳದ ಪಿಣರಾಯಿ ವಿಜಯನ್ ಸರಕಾರ, ಉಚ್ಚ ನ್ಯಾಯಾಲಯಕ್ಕೆ ನೀಡಿದ ಭರವಸೆಯ ನಂತರ ಇನ್ನೊಂದು ಮಜಲಿಗೆ ಹೋಗುವ ಸಾಧ್ಯತೆಯಿದೆ.

ಸುಪ್ರಿಂ ತೀರ್ಪು ವಿವಾದ: ಶಬರಿಮಲೆ ಆದಾಯದಲ್ಲಿ ತೀವ್ರ ಕುಸಿತಸುಪ್ರಿಂ ತೀರ್ಪು ವಿವಾದ: ಶಬರಿಮಲೆ ಆದಾಯದಲ್ಲಿ ತೀವ್ರ ಕುಸಿತ

ಕೇರಳ ಉಚ್ಚ ನ್ಯಾಯಾಲಯಕ್ಕೆ ಮೌಖಿಕ ಭರವಸೆ ನೀಡಿರುವ ಕೇರಳ ಸರಕಾರ, ಎರಡು ದಿನ ಮಹಿಳೆಯರಿಗೆ ಮಾತ್ರ ಪ್ರವೇಶ ನೀಡುವ ವಿಚಾರದಲ್ಲಿ, ಸಾಧ್ಯವಾಗುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದೆ.

ಈ ಬಾರಿ ಮೈಸೂರು ಜಿಲ್ಲೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳ ಸಂಖ್ಯೆ ಇಳಿಮುಖ ಈ ಬಾರಿ ಮೈಸೂರು ಜಿಲ್ಲೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳ ಸಂಖ್ಯೆ ಇಳಿಮುಖ

ಈಗ ನಡೆಯುತ್ತಿರುವ ಮಂಡಲ/ಮಕರವಿಳಕ್ಕು ಸೀಸನ್ ನಲ್ಲಿ, ಎರಡು ದಿನ ಮಹಿಳೆಯರಿಗೆ ಪ್ರವೇಶ ನೀಡುವ ವಿಚಾರದಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆಯ ಜೊತೆ ತುರ್ತಾಗಿ ಸಭೆ ಕರೆದು, ನಿರ್ಧರಿಸುವುದಾಗಿ ಸರಕಾರ, ನ್ಯಾಯಾಲಯಕ್ಕೆ ತಿಳಿಸಿದೆ.

Sabarimala: Kerala government ready to explore possibility of 2days for women

ನಾಲ್ಕು ಮಹಿಳೆಯರು ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸುವ ವಿಚಾರದಲ್ಲಿ ಭದ್ರತೆ ಒದಗಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾ. ಹೃಷಿಕೇಶ ರಾಯ್ ಮತ್ತು ಜಯಶಂಕರನ್ ನಂಬಿಯಾರ್ ಇದ್ದ ನ್ಯಾಯಪೀಠಕ್ಕೆ ಸರಕಾರ ಮೌಖಿಕವಾಗಿ ಈ ಭರವಸೆಯನ್ನು ನೀಡಿದೆ.

ಕಣ್ಣೂರು ಜಿಲ್ಲೆಯ ಎರಡು ಕಡೆ ಅಯ್ಯಪ್ಪ ಭಕ್ತರಿಗಾಗಿ ವಿಶ್ರಾಂತಿ ಕೇಂದ್ರ ವ್ಯವಸ್ಥೆ ಕಣ್ಣೂರು ಜಿಲ್ಲೆಯ ಎರಡು ಕಡೆ ಅಯ್ಯಪ್ಪ ಭಕ್ತರಿಗಾಗಿ ವಿಶ್ರಾಂತಿ ಕೇಂದ್ರ ವ್ಯವಸ್ಥೆ

ನಾಲ್ವರು ಮಹಿಳೆಯರು ಅಯ್ಯಪ್ಪನ ಭಕ್ತರಾಗಿದ್ದು, ದೇವಾಲಯಕ್ಕೆ ಪ್ರವೇಶಿಸಲು ಬಯಸಿದ್ದಾರೆ. ನವೆಂಬರ್ 19ರಂದು ಆನ್ಲೈನ್ ಮೂಲಕ, ಅಯ್ಯಪ್ಪನ ದರ್ಶನಕ್ಕೆ ನೊಂದಣಿ ಮಾಡಿಕೊಂಡಿದ್ದಾರೆಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದಾರೆ.

ರೇಷ್ಮಾ ನಿಶಾಂತ್, ಶನಿಲಾ ಸತೀಶ್, ವಿ ಎಸ್ ಧನ್ಯಾ ಸೇರಿದಂತೆ ನಾಲ್ವರು ಮಹಿಳೆಯರು, ದೇವಾಲಯ ಪ್ರವೇಶಿಸಲು ನೊಂದಣಿ ಮಾಡಿಕೊಂಡಿರುವುದು, ಜೊತೆಗೆ, ಹೈಕೋರ್ಟಿಗೆ ಕೇರಳ ಸರಕಾರ ಮೌಖಿಕ ಭರವಸೆ ನೀಡಿರುವುದರಿಂದ, ಈ ವಿಚಾರ ಹೊಸ ಆಯಾಮ ಪಡೆಯುವ ಎಲ್ಲಾ ಸಾಧ್ಯತೆಯಿದೆ.

English summary
The Kerala government has informed the Kerala High Court in an oral submission that it was ready to explore the possibility of keeping aside two days in the entire Mandalam season exclusively for allowing women devotees to conduct darshan in Sabarimala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X