ಕೇರಳದಲ್ಲಿ ಅಕ್ಟೋಬರ್ನಿಂದ 'ವಾಟರ್ ಟ್ಯಾಕ್ಸಿ' ಸೇವೆ ಆರಂಭ
ತಿರುವನಂತಪುರಂ, ಸೆಪ್ಟೆಂಬರ್ 16: ಕೇರಳದಲ್ಲಿ ಮೊಟ್ಟ ಮೊದಲ ಬಾರಿಗೆ 'ವಾಟರ್ ಟ್ಯಾಕ್ಸಿ' ಸೇವೆಯನ್ನು ಆರಂಭಿಸಲಾಗುತ್ತಿದೆ.
ಅಕ್ಟೋಬರ್ನಿಂದ ಪರೀಕ್ಷಾರ್ಥವಾಗಿ 10 ವಾಟರ್ ಟ್ಯಾಕ್ಸಿಯನ್ನು ಆರಂಭಿಸಲಾಗುತ್ತಿದೆ. ಆಲಪ್ಪುಳ ಜಿಲ್ಲೆಯಲ್ಲಿರುವ ಹಿನ್ನೀರಿನಲ್ಲಿ ಈ ವಾಟರ್ ಟ್ಯಾಕ್ಸಿಗೆ ಚಾಲನೆ ದೊರೆಯಲಿದೆ.
ರಾಜ್ಯದ ಪ್ರವಾಸಿಗರ ಮ್ಯಾಪ್ನಲ್ಲಿ ಈ ಸ್ಥಳವೂ ಇದೆ. ಸ್ಟೇಟ್ ವಾಟರ್ ಟ್ರಾನ್ಸ್ಪೋರ್ಟ್ ಬೋರ್ಡ್ ನಾಲ್ಕು ಬೋಟ್ಗಳಿಗೆ ಆರ್ಡರ್ ಮಾಡಿದೆ. ಕಳೆದ ವರ್ಷ ಸಾಕಷ್ಟು ಅಧ್ಯಯನ ಮಾಡಿದ ಬಳಿಕ ಸಾರ್ವಜನಿಕ ಬಳಕೆಗೆ ವಾಟರ್ ಟ್ಯಾಕ್ಸಿಗಳನ್ನು ಖರೀದಿಸಲು ಮುಂದಾಗಿದೆ.

ರಸ್ತೆಯಲ್ಲಿರುವ ಟ್ಯಾಕ್ಸಿಗಳಂತೆಯೇ ಕಾರ್ಯ ನಿರ್ವಹಣೆ
ರಸ್ತೆಗಳಲ್ಲಿಸ ಸಂಚರಿಸುವ ಟ್ಯಾಕ್ಸಿಗಳಂತೆಯೇ ಇದ್ದರೂ ಕೂಡ ನೀರಿನಲ್ಲಿ ಸಂಚರಿಸುವುದಾಗಿದೆ. ಸಾರ್ವಜನಿಕರ ಬಳಕೆಗಾಗಿ ಟ್ಯಾಕ್ಸಿ ಖರೀದಿಸಲಾಗುತ್ತಿದೆ. ನಿಗದಿತ ಸಂಖ್ಯೆಗೆ ಕರೆ ಮಾಡಿ ಬುಕ್ ಮಾಡಬಹುದಾಗಿದೆ. ಟ್ಯಾಕ್ಸಿಯು ಹೇಳಿದ ಸ್ಥಳಕ್ಕೆ ಆಗಮಿಸಿ ಪಿಕ್ ಮಾಡಲಿದೆ. ಬಳಿಕ ಮತ್ತೆ ನೀವು ಹೇಳಿದ ಜಾಗಕ್ಕೆ ಕರೆದೊಯ್ಯಲಿದೆ.

ಗಂಟೆಯ ಲೆಕ್ಕದಲ್ಲಿ ಹಣ ನೀಡಬೇಕು
ಪ್ರತಿ ಗಂಟೆಯ ಲೆಕ್ಕದಲ್ಲಿ ಹಣ ನೀಡಬೇಕು, ಹಾಗೆಯೇ ಸಾಮಾನ್ಯ ಜನರು ಪಾವತಿಸಬಹುದಾದ ಬೆಲೆಯನ್ನೇ ಇರಿಸಲಾಗಿದೆ ಎಂದು ಎಸ್ಡಬ್ಲ್ಯೂಟಿಡಿ ನಿರ್ದೇಶಕ ತಿಳಿಸಿದ್ದಾರೆ.

ಕಾರ್ಯ ನಿರ್ವಹಣೆ ಹೇಗೆ
ಇದು ಡೀಸೆಲ್ನಿಂದ ಚಲಿಸುತ್ತದೆ. 10 ಮಂದಿ ಕೂರುವಷ್ಟು ಸಾಮರ್ಥ್ಯವಿರಲಿದೆ. ಗಂಟೆಗೆ 15 ಕಿ.ಮೀ ಸಂಚರಿಸಬಲ್ಲದು. ಹೀಗಾಗಿ ಜನರನ್ನು ಬೇಗ ಬೇಗ ಅವರು ತಲುಪಬೇಕಾದ ಜಾಗವನ್ನು ತಲುಪಿಸಬಲ್ಲದು.

ಬೋಟ್ ಸ್ಟೇಷನ್ಗಳಿಗೆ ಸಂಪರ್ಕ
ಈ ವಾಟರ್ ಟ್ಯಾಕ್ಸಿಗಳು ಬೀಟ್ ಸ್ಟೇಷನ್ಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಅಲ್ಲಿಂದ ಬೋಟ್ನಲ್ಲಿ ತೆರಳಬಹುದಾಗಿದೆ. ಬೋಟ್ಗಳನ್ನು ನವಗತಿ ಅಭಿವೃದ್ಧಿಪಡಿಸಿವೆ. ಕೊಚ್ಚಿ ಮೂಲದ ಫರ್ಮ್ ಇದಾಗಿದೆ. ಬೋಟ್ಗಳನ್ನು ಫೈಬರ್ನಿಂದ ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಗಂಟೆಗೆ 30 ಲೀಟರ್ ಇಂಧನವನ್ನು ಬಳಕೆ ಮಾಡಲಿದೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications