ಅಯ್ಯಪ್ಪ ಭಕ್ತರಿಗೆ ಸಡ್ಡುಹೊಡೆಯಲು ಕೇರಳ ಸರಕಾರದ ಭಾರೀ ಪ್ಲಾನ್?
ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ, ತುಲಾ ಮಾಸದ ಪೂಜೆಗಾಗಿ ಅಕ್ಟೋಬರ್ 17ರಂದು ಸಂಜೆ ತೆರೆಯಲಾಗಿದ್ದ ಪುರಾಣಪ್ರಸಿದ್ದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಗರ್ಭಗುಡಿಯನ್ನು, ಶಾಸ್ತ್ರೋಕ್ತವಾಗಿ ಅಕ್ಟೋಬರ್ 22ರಂದು ಮುಚ್ಚಲಾಗಿತ್ತು. ಎಲ್ಲಾ ಅಡೆತಡೆಗಳನ್ನು ಮೀರಿ, ಮಹಿಳೆಯರು ದೇವಾಲಯ ಪ್ರವೇಶಿಸುವುದಕ್ಕೆ ಅಯ್ಯಪ್ಪ ಭಕ್ತರು ಮತ್ತು ದೇವಾಲಯದ ಅರ್ಚಕರು ಯಶಸ್ವಿಯಾಗಿದ್ದರು.
ಮಂಡಲಪೂಜೆ, ಮಕರ ಸಂಕ್ರಾಂತಿ, ಮಕರವಿಳಕ್ಕು (ಜ್ಯೋತಿ) ಪೂಜೆಗಾಗಿ ಮುಂದಿನ ತಿಂಗಳಲ್ಲಿ (ನವೆಂಬರ್) ದೇವಾಲಯವನ್ನು ಮತ್ತೆ ತೆರೆಯಲಾಗುತ್ತದೆ. ನವೆಂಬರ್ ತಿಂಗಳಿನಿಂದ ಮುಂದಿನ ಜನವರಿ ತಿಂಗಳ ಅವಧಿಯಲ್ಲಿ, ದೇವಾಲಯ ಸುಮಾರು 36ದಿನ ತೆರೆದಿರುತ್ತದೆ.
ತುಲಾಮಾಸದ ಪೂಜೆಗೆ ಎಷ್ಟು ಭಕ್ತರು ಆಗಮಿಸುತ್ತಾರೋ, ಅದಕ್ಕಿಂತ ಕನಿಷ್ಠ ನಾಲ್ಕು ಪಟ್ಟು ಹೆಚ್ಚು ಅಯ್ಯಪ್ಪ ಭಕ್ತರು ಈ ಅವಧಿಯಲ್ಲಿ ಬರುವುದರಿಂದ, ಕೇರಳ ಪೊಲೀಸರಿಗೆ ಮತ್ತು ಸರಕಾರಕ್ಕೆ ಇದೊಂದು ಸವಾಲಿನ ಸಂಗತಿಯಾಗಿದೆ. ಈ ನಡುವೆ, ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಅರ್ಜಿಯ ವಿಚಾರಣೆ ನವೆಂಬರ್ 13ರಂದು ಬರಲಿದೆ.
ಅಯ್ಯಪ್ಪ ಭಕ್ತರನ್ನು ಬಂಧಿಸಿರುವುದಕ್ಕೆ ಕೇರಳ ಹೈಕೋರ್ಟ್ ಕೂಡಾ ಪಿಣರಾಯಿ ಸರಕಾರ ವಿರುದ್ದ ಅಸಮಾಧಾನ ಹೊರಹಾಕಿದೆ. ಕಾನೂನುಬಾಹಿರವಾಗಿ ಬಂಧಿಸಿರುವುದು ರುಜುವಾತಾದರೆ ತೀವ್ರತರವಾದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
ಮುಂದಿನ ಮೂರು ತಿಂಗಳು ಶಬರಿಮಲೆ ದೇವಾಲಯದ ಎಲ್ಲಾ ವಿಷಯಗಳ ಮೇಲೆ ನಿಯಂತ್ರಣ ಸಾಧಿಸಲು, ಪಿಣರಾಯಿ ಸರಕಾರ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು, ಅಯ್ಯಪ್ಪ ಭಕ್ತರ ಮತ್ತು ಹಿಂದೂಗಳ ಭಾವನೆಯನ್ನು ಕೆರಳಿಸುವ ಸಾಧ್ಯತೆಯಿದೆ. ಸಿಪಿಐ(ಎಂ) ಕಾರ್ಯಕರ್ತರು ಶಬರಿಮಲೆ ದೇವಾಲಯಕ್ಕೆ ನೇಮಕ?, ಮುಂದೆ ಓದಿ

ಪಥನಂತಿಟ್ಟ, ತಿರುವನಂತಪುರಂ, ಕೋಳಿಕ್ಕೋಡ್, ಎರ್ನಾಕುಲಂ ಜಿಲ್ಲೆ
ಮಹಿಳಾ ಪ್ರವೇಶಕ್ಕೆ ನಿರ್ಬಂಧ ಹೇರಿದ ಆರೋಪದ ಮೇಲೆ, ಇದುವರೆಗೆ ಪಥನಂತಿಟ್ಟ, ತಿರುವನಂತಪುರಂ, ಕೋಳಿಕ್ಕೋಡ್ ಮತ್ತು ಎರ್ನಾಕುಲಂ ಜಿಲ್ಲೆಯಲ್ಲಿ ಒಟ್ಟು 2,053 ಜನರನ್ನು ಬಂಧಿಸಲಾಗಿದೆ. ಇದರ ಜೊತೆಗೆ, 450 ವಿವಿಧ ಪ್ರಕರಣಗಳು ದಾಖಲಾಗಿದೆ. ಕಾನೂನು ಬಾಹಿರವಾಗಿ ಬಂಧಿಸಲಾಗುತ್ತಿದೆ ಎನ್ನುವ ಮಾಹಿತಿ ನಮಗೆ ಲಭ್ಯವಾಗಿದೆ, ಎಚ್ಚರ ಎಂದು ಕೇರಳ ಹೈಕೋರ್ಟ್ ಇದೇ ಕಾರಣಕ್ಕೆ ಪಿಣರಾಯಿ ಸರಕಾರಕ್ಕೆ ಚಾಟಿ ಬೀಸಿದ್ದು.

ಶಬರಿಮಲೆ ದೇವಾಲಯದ ದಾರಿಯ ನಿಯಂತ್ರಣ ಪೊಲೀಸ್ ಇಲಾಖೆಗೆ
ಶಬರಿಮಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಂಪಾದಿಂದ ಶಬರಿಮಲೆ ದೇವಾಲಯದ ವರೆಗಿನ ದಾರಿಯನ್ನು ಪೊಲೀಸರಿಗೆ ವಹಿಸುವ ನಿರ್ಧಾರಕ್ಕೆ ಸರಕಾರ ಬಂದಿದೆ. ಈ ಪ್ರದೇಶದ ಎರಡೂ ಬದಿಯನ್ನು ಪೊಲೀಸ್ ಸುರಕ್ಷಾ ವಲಯವನ್ನಾಗಿ ಪರಿವರ್ತಿಸಲು ಪಿಣರಾಯಿ ಸರಕಾರ ತೀರ್ಮಾನಿಸಿದೆ. ಸರಕಾರದ ಈ ಕ್ರಮದ ಬಗ್ಗೆ ನಮಗೂ ಮಾಹಿತಿಯಿದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟ ಪಡಿಸಿದೆ.

ಮಂಡಲಪೂಜೆ, ಮಕರವಿಳಕ್ಕು ಪೂಜೆ
ಶಬರಿಮಲೆ ದೇವಾಲಯ ನವೆಂಬರ್ ನಿಂದ ಜನವರಿ ತಿಂಗಳವರೆಗೆ ಈ ಕೆಳಗಿನ ದಿನಾಂಕಗಳಲ್ಲಿ ಭಕ್ತರಿಗೆ ತೆರೆದಿರುತ್ತದೆ.
ನವೆಂಬರ್ 5 ರಿಂದ 6 - ತಿರುನಾಲ್ ಅಟ್ಟ ವಿಶೇಷಂ ಪೂಜೆ
ನವೆಂಬರ್ 16 ರಿಂದ ಡಿಸೆಂಬರ್ 27 - ಮಂಡಲಪೂಜೆ
ಡಿಸೆಂಬರ್ 30 ರಿಂದ ಜನವರಿ 20 - ಮಕರವಿಳಕ್ಕು ಪೂಜೆ

1,700 ಸಿಪಿಐ(ಎಂ) ಕಾರ್ಯಕರ್ತರ ನೇಮಕ
ಮುಂದಿನ ಮೂರು ತಿಂಗಳಲ್ಲಿ ಶಬರಿಮಲೆ ದೇವಾಲಯದಲ್ಲಿ ನಡೆಯುವ ಪೂಜಾ ಕೈಂಕರ್ಯ, ಧಾರ್ಮಿಕ ವಿಧಿವಿದಾನಗಳ ಮೇಲೆ ಕೇರಳ ಸರಕಾರ ನಿಯಂತ್ರಿಸಲು ಹೊರಟಿದ್ದು, 1,700 ಸಿಪಿಐ(ಎಂ) ಕಾರ್ಯಕರ್ತರನ್ನು ದೇವಾಲಯಕ್ಕೆ ಪಾರ್ಟ್ ಟೈಂ ಕೆಲಸಗಾರರನ್ನಾಗಿ ನೇಮಿಸಲು ನಿರ್ಧರಿಸಿದೆ ಎನ್ನುವ ಬಲವಾದ ಮಾಹಿತಿ ಹರಿದಾಡುತ್ತಿದೆ.

ಟ್ರಾವಂಕೂರು ದೇವಸ್ವಮ್ ಬೋರ್ಡ್
ಶಬರಿಮಲೆ ದೇವಾಲಯದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಟ್ರಾವಂಕೂರು ದೇವಸ್ವಮ್ ಬೋರ್ಡ್ ಅಧಿಕಾರಿಗಳಿಗೂ, ಕೇರಳ ಸರಕಾರ ಸೂಚನೆಯನ್ನು ನೀಡಿದೆ ಎನ್ನಲಾಗುತ್ತಿದೆ. ಸಿಪಿಐಎಂ ಮೂಲದವರನ್ನೇ, ದೇವಾಲಯಕ್ಕೆ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ಸೂಚಿಸಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications