ಹೋಟೆಲ್ನಿಂದ ಪಾರ್ಸೆಲ್ ತಂದ ಪರೋಟದಲ್ಲಿ ಹಾವಿನ ಚರ್ಮ ಪತ್ತೆ
ತಿರುವನಂತಪುರಂ, ಮೇ 07: ಹೋಟೆಲ್ನಿಂದ ಎರಡು ಪರೋಟ ಪಾರ್ಸೆಲ್ ತಂದು ಮನೆಯಲ್ಲಿ ಮಗಳೊಂದಿಗೆ ಊಟಕ್ಕೆ ಕುಳಿತ ಮಹಿಳೆಗೆ ಆಘಾತ ಕಾದಿತ್ತು. ತಾವು ತಿನ್ನುತ್ತಿದ್ದ ಪರೋಟದಲ್ಲಿ ಹಾವಿನ ಚರ್ಮ ಮತ್ತು ಅದರ ಹಾವಿನ ಅವಶೇಷಗಳನ್ನು ಕಂಡು ಹೌಹಾರಿದ್ದಾರೆ. ಇಂಥದ್ದೊಂದು ಘಟನೆ ತಿರುವನಂತಪುರಂನ ನೆಡುಮಂಗಾಡ್ ನಗರದಲ್ಲಿ ನಡೆದಿದೆ.
ನೆಡುಮಂಗಾಡ್ನ ಹೋಟೆಲ್ನಲ್ಲಿ ಆಹಾರ ಪ್ಯಾಕ್ ಮಾಡಿಕೊಂಡು ಮನೆಗೆ ತೆರಳಿದ್ದ ಸ್ಥಳೀಯ ಮಹಿಳೆಯೊಬ್ಬರಿಗೆ ತಾವು ಊಟ ಮಾಡುತ್ತಿದ್ದ ಹೊತ್ತಿಗೆ ಸಮಯ ಪ್ರಜ್ಞೆಯಿಂದ ತಾವು ತಿನ್ನುತ್ತಿದ್ದ ಪರೋಟಾದಲ್ಲಿ ಹಾವಿನ ಚರ್ಮ ಕಾಣಿಸಿಕೊಂಡಿರುವುದನ್ನು ಕಂಡು ಬಳಿಕ ಸಂಬಂಧಿಸಿದ ಇಲಾಖೆಗೆ ದೂರು ನೀಡಿದ್ದಾರೆ. ಇನ್ನು ಆಹಾರ ಸುರಕ್ಷತಾ ಅಧಿಕಾರಿಗಳು ತಾತ್ಕಾಲಿಕವಾಗಿ ಈ ಹೋಟೆಲ್ನ್ನು ಮುಚ್ಚಿಸಿದ್ದಾರೆ.
ಇನ್ನು ಇದನ್ನು ಪರಿಶೀಲನೆ ನಡೆಸಿರುವ ಅಧಿಕಾರಿಗಳು ಹಾವಿನ ಚರ್ಮದ ಅವಶೇಷಗಳು ಆಹಾರವನ್ನು ಪ್ಯಾಕ್ ಮಾಡಲು ಬಳಸುವ ಪತ್ರಿಕೆಯಲ್ಲಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಪರೋಟ ಪಾರ್ಸಲ್ ಖರೀದಿ ಮಾಡಿದ್ದ ಮಹಿಳೆ ಪೊಟ್ಟಣದಲ್ಲಿ ಹಾವಿನ ಚರ್ಮದ ಅವಶೇಷಗಳನ್ನು ಕಂಡುಕೊಂಡಿದ್ದಾರೆ. ಮೇ 5 ರಂದು ಗುರುವಾರ ಚಂದಾಮುಕ್ಕು ಹೋಟೆಲ್ನಿಂದ ಪರೋಟಾ ಖರೀದಿಸಿದ್ದರು. ಈ ಘಟನೆ ವರದಿಯಾದ ನಂತರ ಹೋಟೆಲ್ನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ತಿರುವನಂತಪುರಂನ ಆಹಾರ ಸುರಕ್ಷತೆಯ ಸಹಾಯಕ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.

ಪ್ರಿಯಾ ಎಂಬ ಮಹಿಳೆ ಮತ್ತು ಅವರ ಮಗಳು ತಮ್ಮ ಊಟಕ್ಕೆ ಎರಡು ಪರೋಟಾಗಳನ್ನು ಖರೀದಿಸಿದ್ದರು. ಅದರಲ್ಲಿ ಮಗಳು ಒಂದನ್ನು ತಿಂದರು ಮತ್ತು ತಾಯಿ ಇನ್ನೊಂದು ಪರೋಟಾ ತಿನ್ನುತ್ತಿದ್ದಾಗ ಆಗ ಪಾರ್ಸೆಲ್ನಲ್ಲಿ ಹಾವಿನ ಚರ್ಮದ ಒಂದು ಭಾಗ ಪತ್ತೆಯಾಗಿದೆ. ಬಳಕ ಗ್ರಾಹಕ ವೇದಿಕೆಯಿಂದ ಮಹಿಳೆ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ. ಹೋಟೆಲ್ ಪರಿಶೀಲಿಸಿದ ನಂತರ ಹೋಟೆಲ್ ಅಧಿಕಾರಿಗಳು ಮುಚ್ಚಲು ಆದೇಶಿಸಿದರು.

"ಈ ಘಟನೆ ವರದಿಯ ನಂತರ ನಾವು ತಕ್ಷಣವೇ ಹೋಟೆಲ್ನ್ನು ಪರಿಶೀಲಿಸಿದ್ದೇವೆ. ಅಡುಗೆ ಕೋಣೆಗೆ ಸಾಕಷ್ಟು ಬೆಳಕು ಇರಲಿಲ್ಲ ಮತ್ತು ಸ್ಕ್ರ್ಯಾಪ್ನ್ನು ಹೊರಗೆ ಎಸೆಯಲಾಗಿದೆ. ತಕ್ಷಣವೇ ಔಟ್ಲೆಟ್ ಮುಚ್ಚಿ ಹೋಟೆಲ್ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಲಾಯಿತು. ಆಹಾರದ ಪ್ಯಾಕಿಂಗ್ಗೆ ಬಳಸಲಾದ ಪತ್ರಿಕೆಯಲ್ಲಿ ಹಾವು ಸತ್ತ ಚರ್ಮವಿದೆ ಎಂಬುದು ನಮ್ಮ ಪ್ರಾಥಮಿಕ ಸಂಶೋಧನೆಯಿಂದ ಗೊತ್ತಾಗಿದೆ ಎಂದು ನೆಡುಮಂಗಾಡ್ ಸರ್ಕಲ್ನ ಆಹಾರ ಸುರಕ್ಷತಾ ಅಧಿಕಾರಿ ಅರ್ಶಿತಾ ಬಶೀರ್ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಕಾಸರಗೋಡು ಜಿಲ್ಲೆಯಲ್ಲೂ ಇಂತಹ ಘಟನೆ ನಡೆದಿದ್ದು 16 ವರ್ಷದ ಬಾಲಕಿಯೊಬ್ಬಳು ವಿಷ ಆಹಾರ ತಿಂದು ಮೃತಪಟ್ಟಿದ್ದಳು. ಕನಿಷ್ಠ 40 ಮಂದಿ ವಿಷಾಹಾರ ಸೇವನೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೋಟೆಲ್ ಮಾಲೀಕ ಸೇರಿ ಕಾರ್ಮಿಕರಲ್ಲಿ ಮೂವರನ್ನು ಬಂಧಿಸಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 304 (ನಿರ್ಲಕ್ಷ್ಯದಿಂದ ಸಾವು), 308 ಮತ್ತು 272 (ಕಲಬೆರಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ವೈದ್ಯಾಧಿಕಾರಿ ಈ ಘಟನೆ ಕುರಿತು ಡಾ.ಎ.ವಿ.ರಾಮದಾಸ್ ಪ್ರಕಾರ ಶಿಗೆಲ್ಲ ಎಂಬ ಮಾರಣಾಂತಿಕ ಬ್ಯಾಕ್ಟೀರಿಯಾದಿಂದ ಆಹಾರ ವಿಷಪೂರಿತವಾಗಿದೆ ಎಂದು ಗೊತ್ತಾಗಿದೆ.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications