Get Updates
Get notified of breaking news, exclusive insights, and must-see stories!

ಕೋವಿಡ್ ನಿರ್ವಹಣೆಯಲ್ಲಿ ಮತ್ತೆ ದೇಶಕ್ಕೆ ಮಾದರಿಯಾದ ಪಿಣರಾಯಿ ಸರಕಾರ

ತಿರುವನಂತಪುರಂ, ಮೇ 13: ಕೊರೊನಾ ಮೊದಲನೇ ಅಲೆಯಿಂದಲೇ ತಮ್ಮದೇ ವಿಶಿಷ್ಟ ಕಾರ್ಯತಂತ್ರ/ಮಾರ್ಗಸೂಚಿಯಿಂದ ಸುದ್ದಿ ಮಾಡಿದ್ದ ಕೇರಳ, ಈಗ, ಲಸಿಕೆ ಬಳಕೆಯಲ್ಲೂ ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿದೆ.

Recommended Video

      ಮತ್ತೊಮ್ಮೆ ದೇಶಕ್ಕೆ ಮಾದರಿಯಾದ ಕೇರಳ ಸರ್ಕಾರ | Oneindia Kannada

      ಕೆಲವು ದಿನಗಳ ಹಿಂದೆ ಲಸಿಕೆ ಸದ್ಬಳಕೆ ವಿಚಾರದಲ್ಲಿ ಪ್ರಧಾನಿ ಮೋದಿಯಿಂದ ಮೆಚ್ಚುಗೆ ಪಡೆದಿದ್ದ ಕೇರಳ ಸರಕಾರ, ಲಸಿಕೆ ಜೀರೋ ವೇಸ್ಟೇಜ್ ಮೂಲಕ ನಾಡಿಗೆ ಮಾದರಿಯಾಗಿದೆ.

      ಇಷ್ಟೇ ಅಲ್ಲದೇ, ರಾಜ್ಯಕ್ಕೆ ನಿಗದಿಯಾಗಿದ್ದ ಕೋಟಾದಲ್ಲಿ ಹೆಚ್ಚುವರಿಯಾಗಿ ಉಳಿಕೆಯಾದ ಒಂದು ಲಕ್ಷ ರೆಮ್ಡಿಸಿವಿರ್ ಲಸಿಕೆಯನ್ನು ಕೇಂದ್ರ ಸರಕಾರಕ್ಕೆ ಹಿಂದಿರುಗಿಸಿದೆ. ಆ ಮೂಲಕ, ಲಸಿಕೆ ಅಭಾವವಿರುವ ರಾಜ್ಯಗಳಿಗೆ ಹೆಚ್ಚುವರಿಯಾಗಿ ಕೇರಳದ ಕೋಟಾದಿಂದ ಉಪಯೋಗವಾಗಲಿದೆ.

      Covid 19, Kerala Leads By Example, Zero Wastage, Returned One Lac Vaccine To Center

      "ಕೇರಳ ಸರಕಾರ ನಮ್ಮಲ್ಲಿ ಹೆಚ್ಚುವರಿಯಾಗಿ ಉಳಿದಿರುವ ಒಂದು ಲಕ್ಷ ಲಸಿಕೆಯನ್ನು ಕೇಂದ್ರ ಸರಕಾರಕ್ಕೆ ಹಿಂದಿರುಗಿಸಿದ್ದೇವೆ. ಆ ಮೂಲಕ, ಅಭಾವವಿರುವ ರಾಜ್ಯಗಳಿಗೆ ಇದರಿಂದ ಉಪಯೋಗವಾಗಲಿ" ಎಂದು ರಾಜ್ಯದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

      ಈ ತಿಂಗಳ ಮೇ ಹದಿನಾರರವರೆಗೆ ಬೇಕಾಗುವಷ್ಟು ರೆಮ್ಡಿಸಿವಿರ್ ಲಸಿಕೆಯನ್ನು ಎಲ್ಲಾ ರಾಜ್ಯಗಳಿಗೆ ಹಂಚಲಾಗಿತ್ತು. ಏಪ್ರಿಲ್ 21-ಮೇ 16ರ ಅವಧಿಗೆ 53ಲಕ್ಷ ಲಸಿಕೆಯನ್ನು ಕೇಂದ್ರ ಸರಕಾರ ರಾಜ್ಯಗಳಿಗೆ ಹಂಚಿತ್ತು.

      ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಈ ಲಸಿಕೆಯ ಅಭಾವ ಕಾಡುತ್ತಿತ್ತು. ಜೊತೆಗೆ, ಕಾಳಸಂತೆಯಲ್ಲೂ ಇದು ಮಾರಾಟವಾಗಿತ್ತು. ಬೇರೆ ರಾಜ್ಯಗಳ ಪರಿಸ್ಥಿತಿ ಹೀಗಿರುವಾಗ, ಪಿಣರಾಯಿ ವಿಜಯನ್ ಸರಕಾರದ ಕಾರ್ಯವೈಖರಿ ಇತರರಿಗೂ ಮಾದರಿಯಾಗುವಂತದ್ದು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+