ಕೇರಳದಲ್ಲಿ ಕೊರೊನಾ ವೈರಸ್ ನಿಬಂಧನೆಗಿಲ್ಲ ಕವಡೆ ಕಾಸಿನ ಕಿಮ್ಮತ್ತು
ತಿರುವನಂತಪುರಂ, ಮಾರ್ಚ್.21: ಕೊರೊನಾ ವೈರಸ್ ಹರಡುತ್ತೆ. ಜನರು ಮನೆಗಳಿಂದ ಹೊರಗೆ ಬರಬೇಕು. ಗುಂಪು ಗುಂಪಾಗಿ ಸೇರಬೇಡಿ. ಕನಿಷ್ಠ ಅಂತರವನ್ನು ಕಾಯ್ದುಕೊಳ್ಳಿ ಎಂದು ಕೇಂದ್ರ ಸರ್ಕಾರವು ಈಗಾಗಲೇ ಹಲವು ಮಾರ್ಗಸೂಚಿಗಳನ್ನು ನೀಡಿದೆ.
ಕೊರೊನಾ ವೈರಸ್ ಹರಡದಂತೆ ನೀಡಿರುವ ನಿಯಮಗಳಿಗೆ ಕೇರಳದಲ್ಲಿ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರವು ಶತಪ್ರಯತ್ನ ಮಾಡುತ್ತಿದ್ದರೆ, ಜನರು ಮಾತ್ರ ತಮ್ಮ ಹಠವನ್ನು ಮುಂದುವರಿಸಿದ್ದಾರೆ.
ಭಾರತದಲ್ಲಿ ಕೊರೊನಾ ವೈರಸ್ ವೈದ್ಯಕೀಯ ತಪಾಸಣೆಗೆ 111 ಲ್ಯಾಬ್
ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ಶ್ರೀಕೃಷ್ಣ ದೇವಸ್ಥಾನದ ವತಿಯಿಂದ ಆಯೋಜಿಸಿದ ಆರತ್ತು ಎಂಬ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದಾರೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಮಾರ್ಗಸೂಚಿ ಹೊರಡಿಸಿ 48 ಗಂಟೆಗಳಲ್ಲೇ ಈ ನಿಯಮವನ್ನು ಭಕ್ತರು ಉಲ್ಲಂಘಿಸಿದ್ದಾರೆ.
Kerala: A traditional procession 'Arattu' was organised at Malayinkeezhu Sree Krishna Swami Temple in Thiruvananthapuram, yesterday. Hundreds of people participated in the procession by violating guidelines, issued to avoid large gatherings. Police probing the matter. pic.twitter.com/powjPcSEWM
— ANI (@ANI) March 21, 2020
ಕೇರಳದಲ್ಲಿ
40
ಮಂದಿಗೆ
ಕೊರೊನಾ
ವೈರಸ್:
ಕೊರೊನಾ
ವೈರಸ್
ಚೀನಾದಲ್ಲಿ
ಆರಂಭವಾದಾಗಲೇ
ಮೊದಲಿಗೆ
ಕೇರಳದಲ್ಲಿ
ನಾಲ್ಕು
ಪ್ರಕರಣಗಳು
ಪತ್ತೆಯಾಗಿದ್ದವು.
ನಂತರದಲ್ಲಿ
ನಾಲ್ವರು
ಸೋಂಕಿತರ
ಆರೋಗ್ಯದಲ್ಲಿ
ಚೇತರಿಕೆ
ಕಂಡು
ಬಂದಿತ್ತು.
ಇದೀಗ
ಮತ್ತೆ
ಸೋಂಕಿತರ
ಸಂಖ್ಯೆ
ರಾಜ್ಯದಲ್ಲಿ
ಏರಿಕೆಯಾಗಿದ್ದು,
40
ಮಂದಿ
ಕೊರೊನಾ
ವೈರಸ್
ಸೋಂಕಿತರು
ಇದ್ದಾರೆ
ಎಂದು
ತಿಳಿದು
ಬಂದಿದೆ.
ಇದರ
ನಡುವೆ
ಶುಕ್ರವಾರ
ತಿರುವನಂತಪುರಂನಲ್ಲಿ
ನಡೆದ
ಆರತ್ತು
ಕಾರ್ಯಕ್ರಮದಲ್ಲಿ
ಭಾಗಿಯಾಗಿ
ನಿಯಮ
ಉಲ್ಲಂಘಿಸಿದವರ
ವಿರುದ್ಧ
ಪೊಲೀಸರು
ತನಿಖೆ
ಆರಂಭಿಸಿದ್ದಾರೆ.