ಅನಾರೋಗ್ಯದ ರಜಾದಲ್ಲಿದ್ದರೂ ಶ್ರೀನಗರದ ಸ್ಕ್ವಾಡ್ರನ್ ನಲ್ಲೇ ಅಭಿನಂದನ್
ಶ್ರೀನಗರ್, ಮಾರ್ಚ್ 26: ಕಳೆದ ತಿಂಗಳು ಪಾಕಿಸ್ತಾನ ಸೇನೆಗೆ ಸೆರೆ ಸಿಕ್ಕು, ಅದಾಗಿ ಎರಡು ದಿನಗಳ ನಂತರ ಭಾರತಕ್ಕೆ ಹಿಂತಿರುಗಿದ್ದ ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ತಮಾನ್ ಅವರು ಶ್ರೀನಗರ್ ನಲ್ಲಿನ ತಮ್ಮ ಸ್ಕ್ವಾಡ್ರನ್ ನಲ್ಲೇ ಇದ್ದಾರೆ. ನಾಲ್ಕು ವಾರಗಳ ರಜಾ ಇದ್ದರೂ ಶ್ರೀನಗರ್ ದಲ್ಲಿನ ಸ್ಕ್ವಾಡ್ರನ್ ಗೆ ವಾಪಸಾದರು ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರಜಾದಲ್ಲಿದ್ದರೂ ಚೆನ್ನೈನಲ್ಲಿರುವ ತಮ್ಮ ಕುಟುಂಬದ ಜತೆಗೆ ಇರಲು ತೆರಳದೆ ಶ್ರೀನಗರದಲ್ಲಿ ಸ್ಕ್ವಾಡ್ರನ್ ನಲ್ಲೇ ಇರುವುದಕ್ಕೆ ನಿಶ್ಚಯಿಸಿದರು. ಪಾಕಿಸ್ತಾನದಿಂದ ಭಾರತಕ್ಕೆ ಅಭಿನಂದನ್ ಹಿಂತಿರುಗಿದ ನಂತರ ಎರಡು ವಾರಗಳ ಕಾಲ ಅನುಸರಿಸಬೇಕಾದ ಎಲ್ಲ ನಿಯಮಗಳನ್ನು ಪೂರೈಸಿದ ಮೇಲೆ ಹನ್ನೆರಡು ದಿನ ರಜಾ ಮೇಲೆ ತೆರಳಿದರು.
ವರ್ತಮಾನ್ ಅವರು ಚೆನ್ನೈನಲ್ಲಿ ತಮ್ಮ ಪೋಷಕರ ಮನೆಗೆ ಕುಟುಂಬದ ಜತೆ ಸಮಯ ಕಳೆಯಲು ತೆರಳಬಹುದಿತ್ತು. ಆದರೆ ಅವರ ಸ್ಕ್ವಾಡ್ರನ್ ಇರುವ ಶ್ರೀನಗರಕ್ಕೆ ತೆರಳಲು ಬಯಸಿದರು ಎಂದು ಮೂಲಗಳು ತಿಳಿಸಿವೆ. ನಾಲ್ಕು ವಾರಗಳ ಅನಾರೋಗ್ಯದ ರಜಾ ನಂತರ ವೈದ್ಯಕೀಯ ಮಂಡಳಿ ಅವರ ಕ್ಷಮತೆಯನ್ನು ಪರಿಶೀಲಿಸಲಿದೆ. ಆ ನಂತರ ಅಭಿನಂದನ್ ಆಸೆಯಂತೆ ಮತ್ತೆ ಯುದ್ಧ ವಿಮಾನ ಚಲಾಯಿಸಬಹುದೇ ಎಂದು ನಿರ್ಧರಿಸಲಿದೆ.

ಫೆಬ್ರವರಿ ಇಪ್ಪತ್ತೇಳರಂದು ಪಾಕಿಸ್ತಾನ ಸೇನೆಯು ಅಭಿನಂದನ್ ರನ್ನು ಸೆರೆ ಹಿಡಿದಿತ್ತು. ಪಾಕಿಸ್ತಾನಿ ವಿಮಾನವನ್ನು ಅಭಿನಂದನ್ ಹೊಡೆದುರುಳಿಸಿದ ನಂತರ ಈ ಘಟನೆ ನಡೆದಿತ್ತು. ಮಾರ್ಚ್ ಒಂದರಂದು ಪಾಕಿಸ್ತಾನವು ಅಭಿನಂದನ್ ರನ್ನು ಬಿಡುಗಡೆ ಮಾಡಿತ್ತು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications