'ಬಂದೂಕು, ಭಯೋತ್ಪಾದನೆ, ಭಯಕ್ಕೆ ಪುನರ್ಜನ್ಮ ನೀಡಿದ್ದೇ ಬಿಜೆಪಿ'
ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಏಪ್ರಿಲ್ 15: ಬಿಜೆಪಿಯು ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ (ಪಿಡಿಪಿ) ಮತ್ತು ಪೀಪಲ್ಸ್ ಕಾನ್ಫರೆನ್ಸ್ (ಪಿಸಿ) ಜತೆ ಮೈತ್ರಿ ಮಾಡಿಕೊಂಡಿದ್ದ ಕಾರ್ಯ ಸೂಚಿಯೇ (ಅಜೆಂಡಾ) ಬಂದೂಕು, ಭಯೋತ್ಪಾದನೆ, ಭಯ ಹಾಗೂ ಆತಂಕಕ್ಕೆ ಜಮ್ಮು-ಕಾಶ್ಮೀರದಲ್ಲಿ ಪುನರ್ಜನ್ಮ ನೀಡುವುದಾಗಿತ್ತು ಎಂದು ಸೋಮವಾರ ಮಾಜಿ ಮುಖ್ಯಮುಂತ್ರಿ ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ.
ಪಿಡಿಪಿ ಹಾಗೂ ಪಿಸಿಪಿ ಜತೆಗೆ ಮೈತ್ರಿ ಮಾಡಿಕೊಂಡಿದ್ದರಿಂದ ಮಾಡಿದ ಸಾಧನೆ ಏನು ಎಂದು ಪ್ರಧಾನಮಂತ್ರಿಗಳನ್ನು ಕೇಳಲು ಬಯಸುತ್ತೇನೆ. ನೀವು ಕೊಟ್ಟಿದ್ದು ಏನೆಂದರೆ, ಬಂದೂಕುಗಳು, ಭಯೋತ್ಪಾದನೆ, ದಾಳಿಗಳು, ಭಯ ಮತ್ತು ಆತಂಕಕ್ಕೆ ಪುನರ್ಜನ್ಮ ಎಂದು ಆವರು ಚುನಾವಣೆ ಪ್ರಚಾರದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಪರಿಸ್ಥಿತಿಯನ್ನು ನೋಡಿ. ಒಂದು ವೇಳೆ ಪರಿಚ್ಛೇದ 370A ಮೇಲೆ ದಾಳಿ ನಡೆಸಿದರೆ, ಪರಿಚ್ಛೇದ 35A ದುರ್ಬಲಗೊಳಿಸಿದರೆ, ಅದಕ್ಕೆ ಬಿಜೆಪಿ, ಪಿಡಿಪಿ ಹಾಗೂ ಪಿಸಿ ಮಧ್ಯದಮೈತ್ರಿ ಕಾರ್ಯಸೂಚಿಯೇ ಕಾರಣ. ನ್ಯಾಷನಲ್ ಕಾನ್ಫರೆನ್ಸ್ ನಿಂದ ವಿಧಾನಸಭೆಯಲ್ಲಿ 35A ರಕ್ಷಿಸಿಕೊಳ್ಳಬೇಕು ಎಂದು ಹೇಳುವವರೆಗೆ ಮೆಹಬೂಬಾ ಮುಫ್ತಿ 35A ಎಂದರೇನು ಅಂತ ಕೇಳಿರಲಿಲ್ಲ ಎಂದಿದ್ದಾರೆ ಒಮರ್ ಅಬ್ದುಲ್ಲಾ.
ದೊಡ್ಡ ಸಂಖ್ಯೆಯಲ್ಲಿ ಬಂಕರ್ ಗಳನ್ನು ನಿರ್ಮಿಸಿದ್ದಕ್ಕೆ ಬಿಜೆಪಿ ವಿರುದ್ಧ ಟೀಕೆ ಮಾಡಿದ ಅವರು, ನನ್ನ ಆಡಳಿತಾವಧಿಯಲ್ಲಿ ನಲವತ್ತು ಬಂಕರ್ ಗಳನ್ನು ತೆಗೆದೆವು. ಆದರೆ ಅವರು ಆಡಳಿತಾವಧಿಯಲ್ಲಿ ಎರಡಂತಸ್ತಿನ ಬಂಕರ್ ಗಳನ್ನು ನಿರ್ಮಿಸಿದರು ಎಂದು ಹೇಳಿದ್ದಾರೆ.

ನಾಲ್ಕು ವರ್ಷದ ಹಿಂದೆ ಮಾಡಿದ್ದೇನು?
ಒಮರ್ ಅಬ್ದುಲ್ಲಾ ಹಾಗೂ ಮುಫ್ತಿ ಕುಟುಂಬದ ನಿರ್ಗಮನದ ನಂತರವೇ ಜಮ್ಮು-ಕಾಶ್ಮೀರದ ಭವಿಷ್ಯ ಉಜ್ವಲವಾಗಿರುತ್ತದೆ ಎಂಬ ಪ್ರಧಾನಿ ಮೋದಿ ಮಾತಿಗೆ ಉತ್ತರಿಸಿದ ಅವರು, ಜನರು ಬಿಜೆಪಿಯನ್ನು ಆರಿಸಿದರೆ ಈ ಎರಡು ಕುಟುಂಬವನ್ನು ಮುಗಿಸುವುದಾಗಿ ನೀವು ಹೇಳಿದ್ದಿರಿ. ನಾಲ್ಕು ವರ್ಷದ ಹಿಂದೆ ಮಾಡಿದ್ದೇನು? ಎರಡರಲ್ಲಿ ಒಂದು ಕುಟುಂಬವನ್ನು ಸ್ವಾಗತಿಸಿದಿರಿ ಎಂದು ತಿವಿದಿದ್ದಾರೆ.

ಅದೇ ಕುಟುಂಬದಿಂದ ಇಬ್ಬರನ್ನು ಮುಖ್ಯಮಂತ್ರಿ ಮಾಡಿದಿರಿ
ಕೊಟ್ಟ ಮಾತನ್ನು ಮರೆತುಹೋಗುವ ಜನರ ಪೈಕಿ ನಾವಲ್ಲ. ನಮ್ಮ ಮಾತನ್ನು ಉಳಿಸಿಕೊಳ್ಳುತ್ತೇವೆ. ಆದರೆ ಅದೇ ಕುಟುಂಬದಿಂದ ನೀವು ಇಬ್ಬರನ್ನು ಮುಖ್ಯಮಂತ್ರಿ(ಪಿಡಿಪಿಯಿಂದ ಮೆಹಬೂಬಾ ಮುಫ್ತಿ ಹಾಗೂ ಆಕೆಯ ತಂದೆ) ಮಾಡಿದಿರಿ. ರಾಜ್ಯಕ್ಕೆ ಏನೂ ನೀಡದವರಿಂದ ಏನನ್ನು ನಿರೀಕ್ಷೆ ಮಾಡ್ತೀರಿ? ಅದು ಕಮಲ ಇರಲಿ ಮತ್ತೊಂದು ಇರಲಿ ಎಲ್ಲವೂ ಒಂದೇ ಎಂದು ಒಮರ್ ಅಬ್ದುಲ್ಲಾ ವಾಗ್ದಾಳಿ ನಡೆಸಿದ್ದಾರೆ.

ಹದಿನೆಂಟು ರುಪಾಯಿ ಜಿಎಸ್ ಟಿ ಕಡಿತದ ಲೆಕ್ಕ
ಜಿಎಸ್ ಟಿ ಜಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಜನರು ತಮ್ಮ ಮೊಬೈಲ್ ಫೋನ್ ರೀಚಾರ್ಜ್ ಗೆ ಅಂಗಡಿಗೆ ಹೋದರೆ, ಅದರಲ್ಲಿ ಹದಿನೆಂಟು ರುಪಾಯಿ ಕಡಿತವಾದರೆ, ಒಂಬತ್ತು ರುಪಾಯಿ ಮೋದಿ ಖಜಾನೆಗೆ, ಒಂಬತ್ತು ರುಪಾಯಿ ಮುಫ್ತಿಗೆ ಹೋಗುತ್ತಿತ್ತು. ಈಗ ಮಲಿಕ್ ಗೆ (ರಾಜ್ಯಪಾಲರಿಗೆ) ಹೋಗುತ್ತಿದೆ ಎಂದಿದ್ದಾರೆ.

ಮೂರು ತಲೆಮಾರಿನ ಜೀವನ ನಾಶ
ಕತುವಾದಲ್ಲಿ ಭಾನುವಾರ ಚುನಾವಣಾ ಪ್ರಚಾರ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಅಬ್ದುಲ್ಲಾ ಹಾಗೂ ಮುಫ್ತಿ ಕುಟುಂಬ ಜಮ್ಮು ಮತ್ತು ಕಾಶ್ಮೀರದ ಮೂರು ತಲೆಮಾರಿನ ಜೀವನವನ್ನು ನಾಶ ಮಾಡಿದೆ. ಅವರ ನಿರ್ಗಮನವಾದರೆ ರಾಜ್ಯಕ್ಕೆ ಉಜ್ವಲವಾದ ಭವಿಷ್ಯ ದೊರೆಯಬಹುದು ಎಂದು ಹೇಳಿದ್ದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications