ಮರುಕಳಿಸಿತೇ ಮಂಡ್ಯ ದುರಂತ? ಕಾಶ್ಮೀರದಲ್ಲಿ 11 ಜನರ ದುರ್ಮರಣ
ಶ್ರೀನಗರ, ಡಿಸೆಂಬರ್ 08: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಪ್ಲೆರಾ ಎಂಬಲ್ಲಿ ಬಸ್ಸೊಂದು ಕಣಿವೆಗೆ ಉರುಳಿದ ಪರಿಣಾಮ 11 ಜನ ಮೃತರಾಗಿದ್ದಾರೆ.
#JammuAndKashmir: At least 11 dead after a bus skidded off the road and fell into a deep gorge in Plera in Mandi tehsil of Poonch district today, multiple injuries reported. The bus was heading towards Poonch from Loran. More details awaited. pic.twitter.com/nJylRzLDPI
— ANI (@ANI) December 8, 2018
ಇಲ್ಲಿನ ಲೊರಾನ್ ನಿಂದ ಪೂಂಚ್ ಗೆ ತೆರಳುತ್ತಿದ್ದ ಬಸ್ಸು ವೇಗವಾಗಿ ಸಾಗುತ್ತಿದ್ದಾಗ ಸ್ಕಿಡ್ ಆದ ಪರಿಣಾಮ ರಸ್ತೆಯ ಪಕ್ಕದಲ್ಲಿದ್ದ ಕಣಿವೆ ಉರುಳಿತ್ತು. ಇದರಿಂದಾಗಿ 11 ಜನ ಮೃತರಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚು ಸಾಧ್ಯತೆ ಇದೆ. ಸುಮಾರು 09:15 ರ ಸಮಯದಲ್ಲಿ ಈ ಘಟನೆ ನಡೆದಿದೆ. ಜೆಕೆ02 ಡಬ್ಲ್ಯು 0445 ರಿಜಸ್ಟ್ರೇಶನ್ನಿನ ಬಸ್ಸು ಅಪಘಾತಕ್ಕೀಡಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಹೆಚ್ಚಿನ ವಿವರ ಲಭ್ಯವಿಲ್ಲ.

ನವೆಂಬರ್ 24 ರಂದು ಪಾಂಡವಪುರದಿಂದ ಮಂಡ್ಯಕ್ಕೆ ತೆರಳುತ್ತಿದ್ದ ರಾಜಕುಮಾರ್ ಎಂಬ ಖಾಸಗಿ ಬಸ್ಸೊಂದು ನಾಲೆಗೆ ಉರುಳಿದ ಪರಿಣಾಮ 30 ಜನ ಮೃತರಾದ ದುರಂತ ಘಟನೆ ನಡೆದಿತ್ತು.
ಮಂಡ್ಯ ಜಿಲ್ಲೆಯ ಯಮನ ಕರಡಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿತ್ತು.












Click it and Unblock the Notifications